• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದೇಶವಿರೋಧಿ ಘೊಷಣೆ ಕೂಗುವವರನ್ನು ನಿಯಂತ್ರಿಸಲು ನೂತನ ಕಾನೂನು ರೂಪಿಸಿ !

March 1, 2018 by Vivek Shet Leave a Comment

ಸೈನಿಕರ ತಾಳ್ಮೆಗೆಡುವ ಮುನ್ನ ಸೈನಿಕರ ಮೇಲೆ ದಾಖಲಿಸಲಾದ ಅಪರಾಧವನ್ನು ಹಿಂಪಡೆಯಿರಿ ಮತ್ತು ಕಾಶ್ಮೀರದಲ್ಲಿ `ರಾಷ್ಟ್ರಪತಿ ಆಡಳಿತ’ ಹೇರಿ ! – ಹಿಂದುತ್ವವಾದಿ ಸಂಘಟನೆಗಳ ಬೇಡಿಕೆ
ಕಾಶ್ಮೀರದ ಸರ್ಕಾರವು ಒಂದೆಡೆ ಭಾರತೀಯ ಸೈನಿಕರ ಮೇಲೆ ಕಲ್ಲೆಸೆಯುವ 9730 ದೇಶದ್ರೋಹಿಗಳ ಮೇಲಿನ ಅಪರಾಧವನ್ನು ಹಿಂಪಡೆಯುತ್ತದೆ ಮತ್ತೊಂದೆಡೆ ಸೈನಿಕರು ಆತ್ಮರಕ್ಷಣೆಗಾಗಿ ಮಾಡಿದ ಕಾರ್ಯಾಚರಣೆಯಲ್ಲಿ ಇಬ್ಬರು ಕಲ್ಲುತೂರಾಟ ಮಾಡುವ ದೇಶದ್ರೋಹಿಗಳು ಮೃತಪಟ್ಟರೆಂದು ಸೈನಿಕರ ಮೇಲೆ ಅಪರಾಧವನ್ನು ದಾಖಲಿಸುತ್ತದೆ, ಇದು ಅತ್ಯಂತ ದುರ್ದೈವ ಹಾಗೂ ಖಂಡನೀಯವಾಗಿದೆ. ಕಾಶ್ಮೀರದ ಶೊಪಿಯಂ ಜಿಲ್ಲೆಯಲ್ಲಿ ಸೈನಿಕರ 4 ವಾಹನಗಳ ಮೇಲೆ ಕಲ್ಲು ತೂರುವ 300 ಜನರ ಮೇಲೆ ಕ್ರಮಕೈಗೊಳ್ಳದೇ ಗುಂಪನ್ನು ಚದುರಿಸಲು ಸೈನಿಕರು ಮಾಡಿದ ಗುಂಡು ಹಾರಾಟದ ಸಮಯದಲ್ಲಿ 2 ಕಲ್ಲು ತೂರುವ ದೇಶದ್ರೋಹಿಗಳು ಮೃತಪಟ್ಟರು, ಇದರಲ್ಲೇನೂ ತಪ್ಪಿಲ್ಲ. ದೇಶದ ಗಡಿಯಲ್ಲಿ ಹಗಲು ರಾತ್ರಿ ಹೋರಾಡುವ ಸೈನಿಕರ ಮೇಲೆ ಅಪರಾಧವನ್ನು ದಾಖಲಿಸುವುದೆಂದರೆ ದೇಶದ್ರೋಹಿಗಳಿಗೆ ಪ್ರೊತ್ಸಾಹ ಕೊಟ್ಟಂತೆ ಹಾಗೂ ಸೈನಿಕರ ಮನಸ್ಥೈರ್ಯವನ್ನು ಕುಗ್ಗಿಸಿದಂತೆ ಆಗುತ್ತದೆ. ಸೈನಿಕರ ತಾಳ್ಮೆ ಕೆಟ್ಟರೆ ದೇಶದ್ರೋಹಿಗಳ ಸಾಕುಬೇಕು ಮಾಡಿಬಿಡುತ್ತಾರೆ. ಸೈನಿಕರ ತಾಳ್ಮೆಗೆಡುವ ಮೊದಲೇ, ಕಾಶ್ಮೀರದಲ್ಲಿ ಸೈನಿಕರ ಮೇಲೆ ದಾಖಲಿಸಲಾದ ಅಪರಾಧವನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರಶೇಖರ ಮೇಸ್ತ ಇವರು ರಾಷ್ಟ್ರೀಯ ಹಿಂದೂ ಆಂದೋಲನದ ಸಮಯದಲ್ಲಿ ಬೇಡಿಕೆಯನ್ನು ಇಟ್ಟರು. ಈ ಆಂದೋಲನವು ತಹಶೀಲದಾರರ ಕಛೇರಿಯ ಎದುರಿನಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಹಿಂದೂ ಆಂದೋಲನವನ್ನು ನಡೆಸಲಾಯಿತು.
ಈ ಆಂದೋಲನದ ಸಮಯದಲ್ಲಿ ಕಾಸಗಂಜ್ ಜಿಲ್ಲೆಯಲ್ಲಿ `ತಿರಂಗಾ ಯಾತ್ರೆ’ಯ ಮೇಲೆ ಮತಾಂಧರು ಮಾಡಿದ ಕಲ್ಲುತೂರಾಟ, `ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಮತ್ತು ತ್ರಿವರ್ಣಕ್ಕೆ ಮಾಡಿದ ಅವಮಾನ ಇವುಗಳನ್ನು ಖಂಡಿಸಲಾಯಿತು. ದೇಶದ್ರೋಹಿ ಮತಾಂಧರು ಇಲ್ಲಿಯವರೆಗೆ ಕಲ್ಲು ತೂರಾಟ ಮತ್ತು ಚಾಕು-ಖಡ್ಗದಿಂದ ಹಲ್ಲೆಯನ್ನು ಮಾಡುತ್ತಿದ್ದರು ಆದರೆ ಈಗ ಗುಂಡುಹಾರಾಟವನ್ನೂ ಮಾಡಲಾರಂಭಿಸಿದ್ದಾರೆ, ಅವರ ಮನೆಯಲ್ಲಿ ನಾಡು ಬಾಂಬ್ ಮತ್ತು ಬಂದೂಕುಗಳು ಸಿಗುತ್ತಿವೆ ಮತ್ತು ಅ.ಭಾ.ವಿ.ಪ. ನ ಚಂದನ್ ಗುಪ್ತಾರಂತಹ ಹಿಂದುತ್ವವಾದಿ ಕಾರ್ಯಕರ್ತರ ಹತ್ಯೆಯಾಗಲಾರಂಭಿಸಿದೆ. ಆದ್ದರಿಂದ ಇದು ಮತಾಂಧರ ಸಮಾಜಘಾತಕ ಹಾಗೂ ದೇಶದ್ರೋಹಿ ಮಾನಸಿಕತೆಯನ್ನು ತೋರಿಸುತ್ತದೆ. ಆದ್ದರಿಂದ ಈ ಪ್ರಕರಣದಲ್ಲಿ ಕಠಿಣಕ್ರಮವನ್ನು ಕೈಗೊಂಡು ಇಂತಹ ಪ್ರಕರಣದ ರೂವಾರಿಗಳನ್ನು ಕೂಡಲೇ ಬಂಧಿಸಬೇಕು, ದೇಶವಿರೋಧಿ ಘೋಷಣೆ ಕೊಗುವವರ ಮೇಲೆ ಕಠಿಣಕ್ರಮವನ್ನು ತೆಗೆದುಕೊಳ್ಳುವಂತಹ ನೂತನ ಕಾನೂನನ್ನು ರಚಿಸಬೇಕು, ಎಂಬ ಬೇಡಿಕೆಯನ್ನೂ ಈ ಆಂದೋಲನದ ಸಮಯದಲ್ಲಿ ಮಾಡಲಾಯಿತು.
ಮದರಸಾದಿಂದಾಗುವ ದೇಶವಿರೋಧಿ ಕೃತ್ಯದ ಬಗ್ಗೆ ಆಳವಾಗಿ ವಿಚಾರಣೆಯನ್ನು ಮಾಡಲು ಸ್ವತಂತ್ರವಾದ ತಂಡವನ್ನು ನಿರ್ಮಿಸಿರಿ !
ಉತ್ತರಪ್ರದೇಶ ರಾಜ್ಯದಲ್ಲಿ `ಶಿಯಾ ಸೆಂಟ್ರಲ್ ವಕ್ಫ ಬೋರ್ಡ್’ನ ಅಧ್ಯಕ್ಷರಾದ ವಸೀಮ್ ರಿಜವೀ ಇವರು `ಮದರಸಾದಿಂದ ಉಗ್ರರು ನಿರ್ಮಾಣವಾಗುತ್ತಾರೆ’, ಎಂಬ ಹೇಳಿಕೆಯನ್ನು ನೀಡಿದ್ದು ಇದು ಅತ್ಯಂತ ಗಂಭೀರವಾಗಿದ್ದು ಇದರ ಬಗ್ಗೆ ಕೇಂದ್ರ ಸರಕಾರವು ತತ್ಪರತೆಯಿಂದ ಹಸ್ತಕ್ಷೇಪ ಮಾಡಬೇಕು. ಇಲ್ಲಿಯವರೆಗೆ ದೇಶಾದ್ಯಂತ ನಡೆದ ಕೋಮುಗಲಭೆಗಳಲ್ಲಿ ಮಸೀದಿ ಮತ್ತು ಮದರಸಾಗಳ ಸಹಭಾಗವು ಕಂಡುಬಂದಿದೆ. ಆದ್ದರಿಂದ ಸಂದೇಹಾಸ್ಪದ ಮದರಸಾಗಳಿಂದ ಇಲ್ಲಿಯವರೆಗೆ ಶಿಕ್ಷಣವನ್ನು ತೆಗೆದುಕೊಂಡು ಹೊರಬಂದಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಒಟ್ಟು ಮಾಡಿ, ಮದರಸಾ ಹಾಗೂ ಉಗ್ರರ ನಡುವಿನ ಸಂಬಂಧದ ಬಗ್ಗೆ ತೀವ್ರ ತನಿಖೆಯನ್ನು ಮಾಡಿ ಅದೇ ರೀತಿ ಮದರಸಾದಿಂದಾಗುವ ದೇಶವಿರೋಧಿ ಚಟುವಟಿಕೆಗಳ ಬಗ್ಗೆ ತನಿಖೆಯನ್ನು ನಡೆಸಲು ಸ್ವತಂತ್ರವಾದ ದಳವನ್ನು ನಿರ್ಮಿಸಿ, ಎಂಬ ಬೇಡಿಕೆಯನ್ನೂ ಈ ಸಮಯದಲ್ಲಿ ಮಾಡಲಾಯಿತು. ಈ ಸಮಯದಲ್ಲಿ ಆಂದೋಲನಕ್ಕೆ ಶ್ರೀ ಮಹೇಶ ಹಳದೀಪುರ, ಭಾಳು ನಾಯ್ಕ, ಆನಂದ ಮೇಸ್ತ, ಶಿವರಾಜ ಮೇಸ್ತ, ರಾಘವೇಂದ್ರ ಮೇಸ್ತ, ಸೌ. ವಾಸಂತಿ ಮುರ್ಡೇಶ್ವರ, ಮೋಹಿನಿ ಶೇಟ, ಪಾರ್ವತಿ ಭಟ್ ಮುಂತಾದವರು ಜನರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: 300 ಜನರ, ಉತ್ತರಪ್ರದೇಶ ರಾಜ್ಯ, ಕಲ್ಲು ತೂರುವ, ಕಾಶ್ಮೀರದ ಶೊಪಿಯಂ, ಕಾಶ್ಮೀರದಲ್ಲಿ `ರಾಷ್ಟ್ರಪತಿ ಆಡಳಿತ' ಹೇರಿ, ಕೂಗುವವರನ್ನು ನಿಯಂತ್ರಿಸಲು, ಗುಪ್ತಾರಂತಹ ಹಿಂದುತ್ವವಾದಿ, ಜಿಲ್ಲೆ, ತಿರಂಗಾ ಯಾತ್ರೆ, ದೇಶವಿರೋಧಿ ಘೊಷಣೆ, ನೂತನ ಕಾನೂನು ರೂಪಿಸಿ, ಪಾರ್ವತಿ ಭಟ್, ಮೇಲೆ, ಮೋಹಿನಿ ಶೇಟ, ರಾಘವೇಂದ್ರ ಮೇಸ್ತ, ಶಿಯಾ ಸೆಂಟ್ರಲ್ ವಕ್ಫ ಬೋರ್ಡ್'ನ, ಶಿವರಾಜ ಮೇಸ್ತ, ಸೈನಿಕರ 4 ವಾಹನ, ಸೈನಿಕರ ತಾಳ್ಮೆಗೆಡುವ ಮುನ್ನ, ಸೈನಿಕರ ಮೇಲೆ ದಾಖಲಿಸಲಾದ ಅಪರಾಧ, ಸೌ. ವಾಸಂತಿ ಮುರ್ಡೇಶ್ವರ, ಹಗಲು ರಾತ್ರಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar