ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಸೀಬರ್ಡ ನಿರಾಶ್ರಿತರ ಪರಿಹಾರ ವಿತರಣೆಯಲ್ಲಿ ಸತ್ಯಾಂಶವನ್ನು ಬಚ್ಚಿಟ್ಟು ಬಿಜೆಪಿ ಪಕ್ಷ ರಾಜಕಾರಣ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದ್ದು ಜನತೆ ಸತ್ಯಾಂಶವನ್ನು ಅರಿತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ತಮ್ಮ ಮನೆಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾನಾಡಿದ ಅವರು ಕಳೆದ 1983-84ನೇ ಸಾಲಿನಿಂದ ದೇಶದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ ಸೀಬರ್ಡ ನಿರಾಶ್ರಿತರ ಪರಿಹಾರ ವಿತರಣೆಯ ಬಗ್ಗೆ ಮಾನವೀಯ ದೃಷ್ಠಿಯಿಂದ ತಾವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತ ಬಂದಿದ್ದು ಅಲ್ಲದೇ ಅಂದಿನಿಂದ ಇಲ್ಲಿಯವರೇಗೆ ಎಲ್ಲಾ ರಕ್ಷಣಾ ಸಚಿವರು ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದು ಅಲ್ಲದೇ ಮುಖತಃ ಭೇಟಿಯಾಗಿ ಪರಿಹಾರ ವಿತರಿಸುವಂತೆ ಕೊರಿದ್ದಾಗಿ ಹೇಳಿದರು. ಆದರೇ ಕಳೆದ 25 ವರ್ಷಗಳಿಂದ ಸಂಸದರಾಗಿ, ಈಗ ಸಚಿವರಾಗಿರುವ ಅನಂತಕುಮಾರ ಹೆಗಡೆಯವರು ಲೋಕಸಭೆಯಲ್ಲಿ ನಿರಾಶ್ರಿತರ ಪರವಾಗಿ ಧ್ವನಿ ಎತ್ತಿದ್ದಾಗಲಿ, ಪ್ರಶ್ನೆ ಕೇಳುವುದಾಗಲಿ, ಪರಿಹಾರ ವಿತರಣೆಗೆ ಒತ್ತಾಯ ಮಾಡಿರುವಂತಹ ಯಾವುದೇ ಉದಾಹರಣೆಗಳಿಲ್ಲದಿದ್ದರು ತಮ್ಮದೇ ಪಕ್ಷದ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ರವರ ಮೂಲಕ ತಾನು ತಮ್ಮ ಪಕ್ಷ ಪರಿಹಾರ ವಿತರಣೆ ಮಾಡಿದೆ ಎಂದು ಮೊನ್ನೆ ಪರಿಹಾರ ವಿತರಣಾ ಕಾರ್ಯಕ್ರಮದಲ್ಲಿ ಹೇಳಿರುವುದು ತುಂಬಾ ವಿಪರ್ಯಾಸದ ಸಂಗತಿಯಾಗಿದೆ ಎಂದು ಬೇಸರದಿಂದ ನುಡಿದ ಸಚಿವ ದೇಶಪಾಂಡೆ ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅಧಿಕಾರ ವಹಿಸಿಕೊಂಡ ಕೂಡಲೇ ತಾವು ದೆಹಲಿಯಲ್ಲಿ ಅವರನ್ನು 28/12/2017 ರಂದು ಭೇಟಿಯಾಗಿ ಸೀಬರ್ಡ್ ನಿರಾಶ್ರಿತರ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ವಿಳಂಬಗಳ ಕುರಿತು ಚರ್ಚಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿನಂತಿಸಿದ್ದಾಗಿ ತಿಳಿಸಿದರು. 2013ರ ಸಪ್ಟಂಬರ ತಿಂಗಳ ಸುಪ್ರಿಂಕೋರ್ಟನ ಸೂಚನೆಯಂತೆ ಗುಂಟೆಗೆ ರೂ.11,500 ಪರಿಹಾರ ನೀಡುವ ಕಾರ್ಯಕ್ಕೆ ಚಾಲನೆ ದೊರೆತಿದೆ, 2014ರಲ್ಲಿನ ಎನ್ಡಿಎ ಸರ್ಕಾರ ಇಂತಹ ಪ್ರಕರಣಗಳನ್ನು 28(ಎ) ಅಡಿಯಲ್ಲಿ ತಂದು ಅಂತ್ಯ ಮಾಡಲು ಪ್ರಯತ್ನಿಸಿತ್ತು. ಅದರಲ್ಲಿ ಸೀಬರ್ಡ್ ನಿರಾಶ್ರಿತರ ಪರಿಹಾರ ವಿತರಣೆಯ ಸಮಸ್ಯೆಯೂ ಕೂಡಾ ಮಹತ್ವದ್ದಾಗಿತ್ತು ಎಂದು ಹೇಳಿದ ದೇಶಪಾಂಡೆ ಸುಪ್ರಿಂಕೋರ್ಟನ ಆದೇಶದಂತೆ ಜಿಲ್ಲಾ ಸತ್ರ ನ್ಯಾಯಾಧಿಶರಾದ ವಿಠ್ಠಲ ಧಾರವಾಡಕರರವರು ಬಹುದಿನಗಳ ಹಿಂದೆಯೇ 258 ನಿರಾಶ್ರಿತರಿಗೆ ರೂ.10.18 ಕೋಟಿ ಪರಿಹಾರ ಚೆಕ್ ವಿತರಿಸಿದ್ದಾರೆ ಅಂದರೇ ಪರಿಹಾರ ವಿತರಣೆಯ 75%ರಷ್ಟು ಮುಕ್ತಾಯವಾಗಿತ್ತು ಎಂದರು. 1983ರಿಂದ ಸೀಬರ್ಡ್ ನಿರಾಶ್ರಿತರ ಪರಿಹಾರ ವಿತರಣೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ಇಲ್ಲಿಯವರೆಗೆ ಜೀವಂತ ಇರುವ ವ್ಯಕ್ತಿ ತಾನೊಬ್ಬನೆ ಆಗಿದ್ದೇನೆ ಎಂದ ಅವರು ಈ ಸಮಸ್ಯೆಯ ಬಗ್ಗೆ ಸಚಿವೆ ಸೀತಾರಾಮನ್ ಅವರ ಗಮನಕ್ಕೆ ತಂದಾಗ ಕೂಡಲೇ ಕಾರ್ಯಪ್ರವೃತ್ತರಾಗಿ ಉಳಿದ ಪರಿಹಾರದ ಮೊತ್ತವನ್ನು ನಿರಾಶ್ರೀತರಿಗೆ ಬಿಡುಗಡೆಗೊಳಿಸಿ ಅವರಿಗೆ ತಲುಪಿಸಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು ಮಾನವೀಯ ದೃಷ್ಠಿಯಲ್ಲಿರುವ ಪ್ರಕರಣಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವವರನ್ನು ಹಾಗೂ ಸತ್ಯಾಂಶವನ್ನು ಎಂದಿಗೂ ಮುಚ್ಚಿಡಬಾರದು ಎಂದು ಅಭಿಪ್ರಾಯಪಟ್ಟರು.
Leave a Comment