ಹಳಿಯಾಳ : ಸೂಪಾ ಹಾಗೂ ಬೊಮ್ಮನಳ್ಳಿ ಆಣೆಕಟ್ಟಿಗಾಗಿ ಜಮೀನು ನೀಡಿದ ಜನರಿಗೆ 30 ವರ್ಷವಾದರು ಪರಿಹಾರ ದೊರಕಿಲ್ಲ ಹಾಗೂ ಆ ಜನರ ಸಮಸ್ಯಗೆ ಸಚಿವ ದೇಶಪಾಂಡೆ ಸ್ಪಂದಿಸಲಿಲ್ಲ ಎಂದು ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯಕಾರಣೆ ಸಮಿತಿ ಸದಸ್ಯ ಜಿ.ಆರ್ ಪಾಟೀಲ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜೊಯಡಾ ತಾಲೂಕಿನ ಸೂಪಾ ಮತ್ತು ಬೊಮ್ಮನಳ್ಳಿ ಡ್ಯಾಂ ಗಳ ನಿರ್ಮಾಣದಿಂದ ನಿರಾಸ್ರಿತರಿಗೆ ಕೆಪಿಸಿಯಿಂದ ಪರಿಹಾರ ಹಾಗೂ ನ್ಯಾಯ ಕೊಡಿಸಲು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರ ಶ್ರಮಿಸಲಿದ್ದಾರೆ ಎಂದಿದ್ದಾರೆ. ಮಾಜಿ ಶಾಸಕ ಸುನೀಲ ಹೆಗಡೆ ಅವರು ಜೊತೆ ವೈಮನಸ್ಸು ಉಂಟಾದ ಕಾರಣ ರಾಜು ದೂಳಿ ಸದ್ಯ ತಟಸ್ಥರಾಗಿದ್ದು ಸಕ್ರೀವಾಗಿ ಪಕ್ಷದ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದಿದ್ದಾರೆ ಪಾಟೀಲ್.
Leave a Comment