ಹಳಿಯಾಳ: ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 16 ಸೇರಿದಂತೆ ಕೆಲವು ಭಾಗದ ಜೆಡಿಎಸ್ ಪಕ್ಷದ ಪ್ರಮುಖರು ಗುರುವಾರ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಟ್ಟಣದ ಸಚಿವರ ಕಾರ್ಯಾಲಯದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಯಲ್ಲಾಪುರ ನಾಕಾ, ಹುಲ್ಲಟ್ಟಿ ಭಾಗದಲ್ಲಿನ ಜೆಡಿಎಸ್ ಪಕ್ಷದಲ್ಲಿ ಪ್ರಮುಖ ಹುದ್ದೆ ಹೊಂದಿರುವ ಮಾರುತಿ ಕಲಭಾವಿ, ಸತೀಶ ಚಲವಾದಿ, ಪ್ರಕಾಶ ಗೌಡಪ್ಪನವರ, ಸುಭಾಸ ಕೋಲಕಾರ, ಮುಕುಂದ ಚಲವಾದಿ, ಉದಯಕುಮಾರ ಚಲವಾದಿ, ಬಿಜೆಪಿಯ ಮಾರುತಿ ಕುರಿಯಾರ, ಸಾಗರ ಚಲವಾದಿ, ಯಲ್ಲಪ್ಪಾ ಕಾಳೆ, ಸುರೇಶ ಮಾದರ ಮೊದಲಾದವರು ವಾರ್ಡ್ ಸದಸ್ಯ ಸುರೇಶ ತಳವಾರ ಅವರ ಮುಂದಾಳತ್ವದಲ್ಲಿ ಸಚಿವ ಆರ್.ವಿ. ದೇಶಪಾಂಡೆಯವರ ಕಾರ್ಯವೈಖರಿಯನ್ನು ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಸತ್ಯಜೀತ ಗಿರಿ, ಕಾಂಗ್ರೆಸ್ನ ಮಹಿಳಾ ಘಟಕದ ಅಧ್ಯಕ್ಷೆ ಮಾಲಾ ಬೃಗಾಂಜಾ ಇತರರು ಇದ್ದರು.
Leave a Comment