ಹಳಿಯಾಳ:- ಕಾಂಗ್ರೇಸ್ ಸರ್ಕಾರ ಯಾವುದೇ ಜಾತಿ, ಮತ, ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿಲ್ಲ ರಾಜ್ಯದ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು ಆರೋಗ್ಯ, ಶಿಕ್ಷಣ ಹಾಗೂ ಆರ್ಥಿಕ ಭದ್ರತೆಗೆ ಹಲವಾರು ಯೋಜನೆ ಮೂಲಕ, ಸಹಾಯ, ಸಾಲ ಸೌಲಭ್ಯ ನೀಡಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ರಾಜ್ಯದಲ್ಲಿ ಅಭಿವೃದ್ದಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಮಂಗಳವಾರ ತಾಲೂಕಿನ ಅಗಸಲಕಟ್ಟಾ ಗ್ರಾಮ ಹಾಗೂ ವಾಡಾ ಗ್ರಾಮಕ್ಕೆ ಸಂಪರ್ಕಿಸುವ 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮೇಲ್ಸೆತುವೆ ಕಾಮಗಾರಿಯ ಶಂಕು ಸ್ಥಾಪನೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು. ಅಗಸಲಕಟ್ಟಾ ವಾಡಾ ಗ್ರಾಮದವರಿಗೆ 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ರಸ್ತೆ ಕಾಮಗಾರಿಗೆ ಚಾಲನೆ ಮತ್ತು ವಾಡಾ ಗ್ರಾಮದ ಪ್ರಾಥಮಿಕ ಶಾಲೆ 13 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ 2 ಶಾಲಾ ಕೊಠಡಿ ಉಧ್ಘಾಟಿಸಿ ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದಿದ್ದು ರೈತರು, ಬಡವರ, ಕೂಲಿಕಾರರ, ದಿನ ದಲಿತರ, ಹಿಂದೂಳಿದ ವರ್ಗದವರ ಸೇರಿದಂತೆ ಎಲ್ಲಾ ವರ್ಗದ ಜನರ ಅಭಿವೃದ್ದಿಗಾಗಿ ಹಲವಾರು ನೂತನ ಯೋಜನೆಗಳ ಮೂಲಕ ಸಹಾಯ-ಸೌಲಭ್ಯ ನೀಡುವ ಮೂಲಕ ಜನರ ಮನೆಗಳಿಗೆ ಯೋಜನೆ ತಲುಪಿಸಿ ಜನಪ್ರೀಯವಾಗಿರುವ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ದೇಶಪಾಂಡೆ ಭವಿಷ್ಯ ನುಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಸರ್ಕಾರದ ಅಭಿವೃದ್ದಿ ಯೋಜನೆ, ಪ್ರಗತಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮುಖಂಡರಾದ ಜೂಲಿಯಾನ್ ಸಿದ್ದಿ ತನ್ನ ಬೆಂಬಲಿಗರೊಂದಿಗೆ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಜಿಪಂ ಸದಸ್ಯೆ ಲಕ್ಷ್ಮೀ ಕೊರ್ವೆಕರ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಗ್ರಾಪಂ ಅಧ್ಯಕ್ಷೆ ಶಾಂತವ್ವಾ ಕಾಗೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಎಸ್.ಡಿಎಮ್.ಸಿಅಧ್ಯಕ್ಷ ಅಂತೋನ ಡಿಗ್ಗೇಕರ, ಗ್ರಾಪಂ ಸದಸ್ಯರಾದ ಮೇರಿ ಕಾಮ್ರೇಕರ, ಮೈಕಲ್ ಆಮ್ಲಪಾಚೆ, ಸದಾನಂದ ಬೆಕಣಿ, ಗ್ರಾಪಂ ಅರಣ್ಯ ಸಮೀತಿ ಅಧ್ಯಕ್ಷ ಸಂಜು ಪಾಟೀಲ್, ತಾಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಪಿಡಬ್ಲೂಡಿ ಅಧಿಕಾರಿ ಆರ್.ಎಚ್.ಕುಲಕರ್ಣಿ, ಹೆಸ್ಕಾಂನ ರವಿಂದ್ರ ಮೆಟಗುಡ್ಡ, ಪಿಡಿಓ ಶಿವಾಜಿ ಮಡಿವಾಳ, ಬಿಇಓ ಸಮೀರಅಮ್ಮದ ಮುಲ್ಲಾ, ರಮೇಶ ಪಾಟೀಲ್, ಬಿಜಿ ಪವಾರ ಇದ್ದರು.
Leave a Comment