ಹಳಿಯಾಳ:
ದಿ.15 ರಂದು ಪಟ್ಟಣದ ಯಲ್ಲಾಪೂರ ನಾಕಾ ಬಳಿ ನಡೆದ ಜೆಡಿಎಸ್ ಪಕ್ಷದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಅಧಿಕ ಜನರ ಕಿಸೆಗೆ ಜೆಬುಗಳ್ಳರು ಬ್ಲೇಡ್ ಹಾಕಿ ಕನ್ನ ಹಾಕಿರುವ ಘಟನೆ ನಡೆದಿದೆ. ಕಾರ್ಯಕ್ರಮಕ್ಕೆ ಬಂದ ಕೆಲವರು ಹಣವನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ. ಸುಮಾರು 8ಸಾವಿರಕ್ಕೂ ಅಧಿಕ ಜನ ಸೇರಿದ್ದ ಕಾರ್ಯಕ್ರಮದ ಬಳಿಯೇ ಊಟದ ವ್ಯವಸ್ಥೆಯನ್ನು ಮಾಡಿದ್ದರಿಂದ ತಡವಾಗಿ ಪ್ರಾರಂಭವಾದ ಕಾರ್ಯಕ್ರಮ ನಡೆಯುತ್ತಿದ್ದ ಕೆಲವೆ ಹೊತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂದಂತಹ ಮಹಿಳೆಯರು ಊಟಕ್ಕೆ ಮುಗಿಬಿದ್ದಿದ್ದು ಕಂಡು ಬಂತು. ಪುರುಷರು ಹಾಗೂ ಮಹಿಳೆಯರಿಗೆ ಒಂದೆ ಬಳಿ ಊಟದ ವ್ಯವಸ್ಥೆ ಇದ್ದಿದ್ದರಿಂದ ಇಲ್ಲಿ ಗೊಂದಲ ಉಂಟಾಗಿತ್ತು ಅಲ್ಲದೇ ಈ ಸಂದರ್ಭದಲ್ಲೇ ಕಿಸೆಗಳ್ಳರು ತಮ್ಮ ಕರಾಮತ್ತು ಪ್ರದರ್ಶಿಸಿದ್ದಾರೆಯೇ ಎಂಬುದು ತಿಳಿದು ಬರಬೇಕಾಗಿದೆ. ಕಾರ್ಯಕ್ರಮಕ್ಕೆ ಬಂದು ಹಣ, ಮೊಬೈಲ ಕಳೆದುಕೊಂಡವರು ಕಾರ್ಯಕ್ರಮ ಸಂಘಟಕರ ಬಳಿ ಕಳೆದುಕೊಂಡ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾಗ ಮಾತಿಚ ಚಕಮಕಿಯು ನಡೆದಿದೆ. ಇನ್ನೂ ಕಾರ್ಯಕ್ರಮಕ್ಕೆ ಆಸೆ-ಆಮಿಷಗಳನ್ನು ಹೊತ್ತು ಬಂದಿದ್ದ ಮಹಿಳೆಯರಿಗೆ ಸರಿಯಾಗಿ ಊಟವು ಸಿಗದೆ ಅವರಿಗೆ ನೀಡಿದ್ದ ಭರವಸೆಯು ಈಡೇರದೆ ಇರುವುದಕ್ಕೆ ಜೆಡಿಎಸ್ ಪಕ್ಷದ ಕಾರ್ಯಕ್ರಮ ಸಂಘಟಕರಿಗೆ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿತ್ತು. ಬೈಕ್ ರ್ಯಾಲಿಗೆ ಆಗಮಿಸಿದ್ದ ಬೈಕ್ಗಳಿಗೆ ಫ್ರೀ ಪೆಟ್ರೋಲ್ ಕಾರ್ಡ, ಟೀ ಶರ್ಟ, ಹಣ ಮತ್ತು ಮಹಿಳೆಯರಿಗೆ ಸೀರೆ, ಉಚಿತ ವಾಹನ ವ್ಯವಸ್ಥೆ ಹಾಗೂ ಹಣ ನೀಡುವ ಆಮಿಷ ನೀಡಲಾಗಿರುವುದು ಕಾರ್ಯಕ್ರಮಕ್ಕೆ ಆಗಮಿಸಿದವರೇ ಮಾಧ್ಯಮದವರು ಕೇಳಿದ ಪ್ರಶ್ನೇಗಳಿಗೆ ಉತ್ತರಿಸಿದಾಗ ತಿಳಿದು ಬಂತು.
Leave a Comment