ಹಳಿಯಾಳ:- ತಾಲೂಕಿನ ಮುರ್ಕವಾಡ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ, ಶುದ್ದ ಕುಡಿಯುವ ನೀರಿನ ಘಟಕಗಳು ಕೈಕೊಟ್ಟಿದ್ದು ಕಿರು ನೀರಿನ ಘಟಕಗಳಿಂದ ಒಂದೆರಡು ಕೊಡ ನೀರು ಪಡೆಯಲು ಜನತೆ ತಮ್ಮ ಕೆಲಸ ಬಿಟ್ಟು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದ್ದು ತಾಲೂಕಾಡಳಿತಕ್ಕೆ ಹಿಡಿಶಾಪ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಿಂದ 12 ಕೀಮಿ ಅಂತರದಲ್ಲಿರುವ ಮುರ್ಕವಾಡ ಗ್ರಾಮ 1070ಕ್ಕೂ ಹೆಚ್ಚು ಕುಟುಂಬಗಳೊಂದಿಗೆ 3100ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದ್ದು ಗ್ರಾಮ ಪಂಚಾಯತಿಯನ್ನು ಹೊಂದಿದ್ದು ಇದೀಗ ಇಲ್ಲಿ ಜಲಕ್ಷಾಮ ಜನರ ನಿದ್ದೆಗೆಡಿಸಿದೆ. ಮುರ್ಕವಾಡ ಗ್ರಾಮದಲ್ಲಿ ಜಲ ಮೂಲ ಹೊಂದಿದ ಕೊಳವೆ ಭಾವಿಗಳಿಗೆ ಶುಧ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೆ ನೀರು ಲಭ್ಯವಾಗುತ್ತಿತ್ತು. ಜಲ ಮೂಲ, ಜಲ ಧಾರೆ ಗಮಣಿಸದೇ ಕೆವಲ ಜನ ವಸತಿ ಗಮಣಿಸಿ 2 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದರಿಂದ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಅದೂ ಸಮರ್ಪವಾಗಿ ನೀರು ಕೊಡದೇ ಜನರು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಸಾಮಾನ್ಯವಾಗಿದ್ದು ಉಳಿದ ಘಟಕಗಳು ಮಕಾಡೆ ಮಲಗಿವೆ. ಮುರ್ಕವಾಡ ಗ್ರಾಮಸ್ಥರು ಸಚಿವರ ಬಳಿ ಸಮಸ್ಯೆ ತೊಡಿಕೊಂಡಾಗ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಗ್ರಾಮ ಪಂಚಾಯತಿಯವರು ಮುಂದಾದಾಗ ಗ್ರಾಮದ ದೊಡ್ಡಕೆರೆಯಲ್ಲಿ 3 ಬೋರವೆಲ್ಗಳನ್ನು ಕೊರೆಯಿಸಲಾಗಿದೆ ಇದರಲ್ಲಿ 2 ಬೋರ್ವೆಲ್ ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ ಒಂದಕ್ಕೆ ಕೇವಲ ಪೈಪ್ಲೈನ್ ಆಗಿದ್ದು ತಾಲೂಕಾ ಆಡಳತದಿಂದ ಸಬ್ ಮರ್ಸಿಬಲ್ ಪಂಪ್ ಹಾಗೂ ವಿದ್ಯುದೀಕರಣ ಮಾಡದೇ ಇರುವುದರಿಂದ ಮುರ್ಕವಾಡ ಗ್ರಾಮದ ಎಲ್ಲ ಗಲ್ಲಿಗಳಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲದಂತಾಗಿದೆ. ಇನ್ನೂ ಗ್ರಾಮದಿಂದ ಹೋಗುವ ಶಿವಪೂರ ರಸ್ತೆಯಲ್ಲಿ ಮತ್ತೊಂದು ಬೋರ್ವೆಲ್ ಕೊರೆಯಿಸಿದ್ದು, ಅದಕ್ಕೂ ಸಬ್ ಮರ್ಸಿಬಲ್ ಪಂಪ್ ಹಾಗೂ ವಿದ್ಯುದೀಕರಣ ಮಾಡದೇ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ತಾಲೂಕಾಡಳಿತದ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗುತ್ತಿಲ್ಲ ಎನ್ನುವ ಗ್ರಾಮಸ್ಥರ ಬವಣೆಗೆ ಗ್ರಾಮ ಪಂಚಾಯತಿಯವರು ಸಮರೋಪಾದಿಯಲ್ಲಿ ಸ್ಪಂದಿಸದೇ ಇದ್ದರೆ ಜನರು ಸಹನೆ ಕಳೆದುಕೊಂಡು ಉಗ್ರ ಹೋರಾಟ ನಡೆಸುವ ಲಕ್ಷಣಗಳು ಗೊಚರಿಸುತ್ತಿವೆ. ಕೂಲಿಕಾರರು ತಮ್ಮ ಕೆಲಸಕ್ಕೆ ಹೋಗದೇ ನೀರಿಗಾಗಿ ಕಿರು ನೀರಿನ ಜಲ ಸಂಗ್ರಹಗಾರಕ್ಕೆ ಬೆಳಿಗ್ಗೆ 4 ರಿಂದ ಹಾಗೂ ಸಾಯಂಕಾಲ 4 ರಿಂದ ಪಾಳಿಯಲ್ಲಿ ಕೊಡಗಳನ್ನಿಟ್ಟು ನೀರಿಗಾಗಿ ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದು ರೈತರು ತಮ್ಮ ದನ-ಕರುಗಳ ಸಮೇತ ಗ್ರಾಮದಿಂದ ತಮ್ಮ ಹೊಲಗಳಲ್ಲಿ ಹೋಗಿ ಅಲ್ಲಿಯೇ ವಾಸಿಸುವಂತಾಗಿದೆ. ಗ್ರಾಮದ ಜನತೆಗೆ ಕುಡಿಯುವ ನೀರನ್ನು ಎಲ್ಲಿಂದ ತರಬೇಕೆಂದು ತೋಚದೇ ಖಾಸಗೀ ಬೋರ್ವೆಲ್ಗಳಿಗೆ ಅಲೆದು ಬೋರವೆಲ್ಲ ಮಾಲಕರಿಗೆ ನೀರು ಕೊಡುವಂತೆ ಕೋರಿಕೊಳ್ಳುತ್ತಿದ್ದು ಮೊದಲೆ ಬರಗಾಲದ ಬವಣೆಯಿಂದ ಬೆಸತ್ತಿರುವ ರೈತರು ಬೊರವೆಲ್ಗಳಲ್ಲೂ ಅಂತರ್ಜಲಮಟ್ಟ ಕುಸಿದಿದ್ದರಿಂದ ಮತ್ತೇ ಜಲಕ್ಷಾಮ ಎದುರಿಸುವ ಭಿತಿ ಎದುರಿಸುತ್ತಿದ್ದಾರೆ. ತಾಲೂಕಾಡಳಿತ ಮಾಡಬೇಕಾದ ಅಗತ್ಯ ಪ್ರಕ್ರಿಯೆಗಳನ್ನು ಮಾಡಿ ಕೂಡಲೇ ನೀರಿನ ಸಮಸ್ಯೆಯನ್ನು ಬಗೆಹರಿಸಿಬೇಕು ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಒಂದು ವಾರದೊಳಗೆ ಸ್ಪಂದಿಸದೆ ಇದ್ದರೇ ಮುರ್ಕವಾಡ ಗ್ರಾಮಪಂಚಾಯತ ಎದುರುಗಡೆ ರಸ್ತಾ ರೋಕೊ ಮಾಡುವುದರ ಮೂಲಕ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ನಾಗರಾಜ.ಅ.ಗೌಡಾ ಎಚ್ಚರಿಕೆ ನೀಡಿದ್ದಾರೆ.
Leave a Comment