ಹಳಿಯಾಳ : ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಂಘಟನೆ, ಹೈಕಮಾಂಡ ತೀರ್ಮಾನವೆ ಅಂತಿಮವಾಗಿದ್ದು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೆಲುವೆ ಮಾನದಂಡವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಅನೌಪಚಾರಿಕವಾಗಿ ಹಳಿಯಾಳ ಪಟ್ಟಣಕ್ಕೆ ಭೇಟಿ ನಿಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ ತಾಲೂಕಾಧ್ಯಕ್ಷರು, ಜಿಲ್ಲಾಧ್ಯಕ್ಷರು ಈಗಾಗಲೇ ಗೆಲುವಿನ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡಗೆ ಸೂಚಿಸಿದ್ದಾರೆ. ಅಭ್ಯರ್ಥಿಗಳ ಪೂರ್ವಾಪರ, ಅವರ ಸಂಘಟನಾ ಶಕ್ತಿ ಹಾಗೂ ಜನ ಬೆಂಬಲವನ್ನು ನೋಡಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಅದು ಹೈಕಮಾಂಡ ಘೊಷಿಸಲಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದ ಅವರು ಜಿಲ್ಲೆಯಲ್ಲಿ ಪ್ರಚಾರಕ್ಕಾಗಿ ಮೋದಿಜಿಯವರು ಬರುವ ನೀರಿಕ್ಷೆ ಇದ್ದು ಜಿಲ್ಲೆಯಲ್ಲಿ ಮೊದಿಯವರ 15 ಸಭೆಗಳನ್ನು ನಡೆಸುವ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಕರ್ತರು ಕೇಳಿದ ಪ್ರಶ್ನೇಗಳಿಗೆ ಉತ್ತರಿಸಿದ ಅವರು ಕ್ಷೇತ್ರದಲ್ಲಿ ರಾಜು ಧೂಳಿ, ಜಿ.ಆರ್.ಪಾಟೀಲ್ ಹಾಗೂ ಸುನೀಲ್ ಹೆಗಡೆ ಅವರು ಎಲ್ಲರೂ ಸಂಘಟನೆಯ ಸೂತ್ರಕ್ಕೆ ಬದ್ದರಿದ್ದು ಶಿಸ್ತಿಗೆ ಮಹತ್ವವಿರುವ ಬಿಜೆಪಿಯಲ್ಲಿ ಸಂಘಟನೆಯ ತಿರ್ಮಾನವೆ ಅಂತಿಮವಾಗಿದ್ದು ಪಕ್ಷದ ಗೆಲುವಿಗಾಗಿ ಎಲ್ಲರೂ ಶ್ರಮಿಸಲಿದ್ದಾರೆ ಎಂದು ಹೇಳಿದ ಸಚಿವ ಹೆಗಡೆ ಹಳಿಯಾಳ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ಕಮಲ ಅರಳಲಿದೆ ಎಂದರು. ಪ್ರಜಾಪ್ರಭುತ್ವದಲ್ಲಿ ಚರ್ಚೆಗಳು ಸಾಮಾನ್ಯ ಹಾಗೂ ಚರ್ಚೆಗಳು ನಡೆಯಬೇಕು ಎಂದ ಹೆಗಡೆ ಸಚಿವ ದೇಶಪಾಂಡೆ ಅವರನ್ನು ಬಿಜೆಪಿಗೆ ಆಹ್ವಾನಿಸಲಾಗಿತ್ತು ಅವರು ಬರುವುದಾಗಿ ಹೇಳಿದ್ದರು ಆದರೇ ಅವರಿಗೆ ಕಾಂಗ್ರೇಸ್ ಬಿಡುವ ಮನಸ್ಸಿಲ್ಲ ಎಂದು ಕಾಣುತ್ತದೆ ಹಳಿಯಾಳ –ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯವರು ಕಾಂಗ್ರೇಸ್ ಸೋಲಿಸಿದ ಬಳಿಕ ಈ ಬೆಡಿಕೆಯನ್ನು ಪುನರ್ ವಿಮರ್ಶೆ ಮಾಡಲಾಗುವುದು ಎಂದು ಸಚಿವ ದೇಶಪಾಂಡೆ ಬಿಜೆಪಿ ಸೇರುವ ರೂಮರ್ಗೆ ತೆರೆ ಎಳೆದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ,. ಮುಖಂಡರಾದ ಮಂಗೇಶ ದೇಶಪಾಂಡೆ, ವಿಎಮ್. ಪಾಟೀಲ್, ಸಿದ್ದು ಶೆಟ್ಟಿ, ವಿಲಾಸ ಯಡವಿ, ಉಮೇಶ ದೇಶಪಾಂಡೆ ಇತರರು ಇದ್ದರು.
Leave a Comment