ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಚುನಾವಣೆಗೆ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಹೆಸರು ಘೊಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಅವರ ಬೆಂಬಗಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸುನಿಲ್ ಹೆಗಡೆ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರೊಂದಿಗೆ ಪಟ್ಟಣದ ಶ್ರೀ ಗಣೇಶ ದೇವಸ್ಥಾನಕ್ಕೆ ತೆರಳಿದ ಸುನೀಲ್ ಹೆಗಡೆ ಅವರ ತಂದೆ ಮಾಜಿ ವಿಪ ಸದಸ್ಯ ವಿ.ಡಿ.ಹೆಗಡೆ ಅವರು ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ತಮ್ಮ ನಾಯಕನಿಗೆ ಟಿಕೆಟ್ ದೊರೆತಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೆಟ್ಗಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಕ್ಷೇತ್ರದಲ್ಲಿ ಬಹುಸಂಖ್ಯಾತರಿರುವ ಮರಾಠಾ ಸಮುದಾಯದ ವ್ಯಕ್ತಿಯಾದ ತಮಗೆ ಟಿಕೆಟ್ ನೀಡುವಂತೆ ಕೆಲವು ತಿಂಗಳ ಹಿಂದೆ ಬಿಜೆಪಿ ಪಕ್ಷ ಸೇರಿದ್ದ ಮಾಜಿ ಪೋಲಿಸ್ ವರಿಷ್ಠಾಧಿಕಾರಿ ಜಿ.ಆರ್.ಪಾಟೀಲ್ ಪಟ್ಟು ಹಿಡಿದಿದ್ದರು ಅಲ್ಲದೇ ಟಿಕೆಟ್ ಗಿಟ್ಟಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು ಆದರೇ ಯಾವುದೇ ಸಂದರ್ಭದಲ್ಲೂ ಗೆಲುವು ಸಾಧಿಸಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ ಮಾತ್ರ ಕ್ಷೇತ್ರದಲ್ಲಿ 4-5 ಬಾರಿ ರಹಸ್ಯವಾಗಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಸಮೀಕ್ಷೆ ನಡೆಸಿ, ಅವರ ಪೂರ್ವಾಪರ, ಸಂಘಟನಾ ಶಕ್ತಿಯ ಕುರಿತು ಮಾಹಿತಿ ಪಡೆದಿದ್ದರು ಅಲ್ಲದೇ ಕ್ಷೇತ್ರದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು, ತಾಲೂಕಾಧ್ಯಕ್ಷರುಗಳು ಸೂಚಿಸಿದ ಹೆಸರನ್ನು ಅಂತಿಮಗೊಳಿಸಿ ಜಯಗಳಿಸುವಲ್ಲಿ ತೀವೃ ಸ್ಪರ್ದೆಯೊಡ್ಡಬಲ್ಲ ಅಭ್ಯರ್ಥಿ ಸುನೀಲ್ ಹೆಗಡೆಯಾಗಿದ್ದಾರೆಂದು ಅರಿತು ಅವರಿಗೆ ಟಿಕೆಟ್ ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಭ್ಯರ್ಥಿ ಸುನೀಲ್ ಹೆಗಡೆ ಪತ್ನಿ ಸುವರ್ಣಾ, ತಾಯಿ ಸುನಿತಾ, ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಸಿದ್ದು ಶೆಟ್ಟಿ, ವಿಜಯ ಬೊಬಾಟಿ, ವಿಎಮ್.ಪಾಟೀಲ್, ವಿಲಾಸ ಯಡವಿ, ಸಂತೊಷ ಘಟಕಾಂಬಳೆ, ರಾಘು ಚಲವಾದಿ, ಪವನ ಇತರರು ಇದ್ದರು.
Leave a Comment