ಹಳಿಯಾಳ :- ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಬಹುಸಂಖ್ಯಾತರಿರುವ ಮರಾಠಾ ಸಮುದಾಯದ ತಮಗೆ ಈ ಬಾರಿಯ ವಿಧಾನ ಸಭಾ ಟಿಕೆಟ್ ನೀಡುವುದಾಗಿ ಭರಸವೆ ನೀಡಿದ್ದ ಬಿಜೆಪಿ ಪಕ್ಷ ಅದನ್ನು ಈಡೇರಿಸದೆ ತಮಗೆ ಹಾಗೂ ಮರಾಠಾ ಸಮುದಾಯಕ್ಕೆ ಮೊಸ ಮಾಡಿದ್ದು ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವುದಾಗಿ ಬಿಜೆಪಿ ಟಿಕೆಟ್ ವಂಚಿತ ಮರಾಠಾ ಸಮುದಾಯ ಮುಖಂಡ ಹಾಗೂ ಮಾಜಿ ಎಸ್ಪಿ ಜಿ.ಆರ್.ಪಾಟೀಲ್ ಹೇಳಿದರು. ಪೋಲಿಸ್ ಹುದ್ದೆ ನಿವೃತ್ತಿಯ ಬಳಿಕ ಕಳೆದ ಒಂದು ವರ್ಷದ ಹಿಂದೆ ಮೊದಿಜಿಯವರ ಕಾರ್ಯ ಮೆಚ್ಚಿ ಬಿಜೆಪಿ ಪಕ್ಷ ಸೇರಿದ್ದ ತಾವು ಕ್ಷೇತ್ರದಲ್ಲಿ ಬಹುಸಂಖ್ಯಾತರಿರುವ ಮರಾಠಾ ಸಮುದಾಯ ಬೆಂಬಲಿಸುತ್ತಿದ್ದು ಈ ಬಾರಿಯ ವಿಧಾನಸಭಾ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದೆ ಅಲ್ಲದೇ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಯೂರಪ್ಪ ಅವರು ಮರಾಠಾ ಸಮುದಾಯದವರಿಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು ಅಲ್ಲದೇ ಸಂಘಟನೆ ಮಾಡುವಂತೆ ಹೇಳಿದ್ದರು ಅದರಂತೆ ತಾವು ನಡೆದುಕೊಂಡಿದ್ದರು ಕೊಟ್ಟ ಮಾತಿಗೆ ತಪ್ಪಿರುವ ಬಿಜೆಪಿಯವರು ಕಳಂಕಿತರಿಗೆ ಟಿಕೆಟ್ ನೀಡಿದ್ದಾರೆಂದು ಆಕ್ರೊಶದಿಂದ ನುಡಿದರು. ಬಿಜೆಪಿ ಪಕ್ಷದ 2ನೇ ಪಟ್ಟಿಯಲ್ಲಿ ಹಳಿಯಾಳ ಕ್ಷೇತ್ರಕ್ಕೆ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಹೆಸರು ಘೊಷಣೆಯಾಗುತ್ತಿದ್ದಂತೆ ಅಸಮಾಧಾನಗೊಂಡಿರುವ ಅವರು ಹಾಗೂ ಅವರ ಅಭಿಮಾನಿಗಳು ಮಂಗಳವಾರ ಪಟ್ಟಣದ ಮರಾಠಾ ಭವನದಲ್ಲಿ ಸಭೆ ಸೇರಿ ಬಹುಸಂಖ್ಯಾತ ನಿರ್ಣಾಯಕ ಮತದಾರರಾಗಿರುವ ಮರಾಠರಿಗೆ ಪ್ರಾತಿನಿಧ್ಯ ನೀಡದ ಬಿಜೆಪಿ ಪಕ್ಷದ ನಿಲುವನ್ನು ಖಂಡಿಸುವುದಾಗಿ ಹೇಳಿದರು.
ಮ್ಯಾಚ್ ಫಿಕ್ಸಿಂಗ್ :- ಹಿರಿಯ ಮುಖಂಡ ಎಸ್.ಕೆ. ಗೌಡಾ ಮಾತನಾಡಿ ಬಿಜೆಪಿ ಪಕ್ಷ ಸಿದ್ದಾಂತಗಳನ್ನು ಗಾಳಿಗೆ ತೂರಿ ಕಳಂಕಿತರಿಗೆ ಟಿಕೆಟ್ ನೀಡಿದೆ ಹಾಗೂ ಹಳಿಯಾಳ ಕ್ಷೇತ್ರದಲ್ಲಿ ರಾಜಕೀಯ ಮ್ಯಾಚ ಫಿಕ್ಸಿಂಗ್ ಆಗಿದ್ದು ಒಬ್ಬ ಬ್ರಾಹ್ಮಣ ಆರ್.ವಿ.ದೇಶಪಾಂಡೆ ಅವರಿಗೆ ಅನುಕೂಲ ಮಾಡಿಕೊಡಲು ಇನ್ನೊಬ್ಬ ಬ್ರಾಹ್ಮಣ ಸುನೀಲ್ ಹೆಗಡೆಗೆ ಟಿಕೆಟ್ ನೀಡಲಾಗಿದೆ ಎಂದು ಗಂಭೀರ ಆಪಾದನೆ ಮಾಡಿದರು. ಇನ್ನೊರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ತಾಲೂಕಾಧ್ಯಕ್ಷ ಎಲ್.ಎಸ್.ಅರಿಶೀನಗೇರಿ ಮಾತನಾಡಿ ಮರಾಠರು ಸೈನಿಕರಾಗಿ ಕಾವಲು ಕಾಯಬೇಕು ಆದರೇ ಅವರಿಗೆ ಅಧಿಕಾರ ನೀಡುವುದಿಲ್ಲ ಮರಾಠಾ ಪ್ರಾಬಲ್ಯವನ್ನು ಕಡೆಗಣಿಸಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗುವುದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಳಿಯಾಳಕ್ಕೆ ಬಂದರೇ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದರು. ಹಳಿಯಾಳ ಬಿಜೆಪಿಯಲ್ಲಿ ಮೂರು ತಾಲೂಕಾಧ್ಯಕ್ಷರಾದ ಬಸವರಾಜಕಳಶೆಟ್ಟಿ, ಮಾಂಜ್ರೇಕರ ಹಾಗೂ ಶೀವಾಜಿ ನರಸಾನಿ ಅವರುಗಳು ಒಬ್ಬ ವ್ಯಕ್ತಿ ಪರವಾಗಿ ಮಾತ್ರ ಕೆಲಸ ಮಾಡುತ್ತಿರುವುದು ಅವರ ವಿರುದ್ದ ತಾವು ಹೈಕಮಾಂಡಗೆ ತಿಳಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆಪಾದಿಸಿದರು. ಮರಾಠಾ ಸಮಾಜದ ಹಲವರ ಹಾಗೂ ಅಭಿಮಾನಿಗಳ ಆಗ್ರಹದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತೇನೆ ಯಾವುದೇ ಪಕ್ಷಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಜಿ.ಆರ್.ಪಾಟೀಲ್ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಲೀನಾ ಪಾಟೀಲ್, ಪ್ರಕಾಶ ಕಮ್ಮಾರ, ಚಂದ್ರಕಾಂತ ಇಂಗ್ರೊಳ್ಳಿ, ಅಶೋಕ ಶರಣೊಳಕರ, ಬಾಲಕೃಷ್ಣ ಢೇಫಿ, ರಾಘವೇಂದ್ರ ನಾಯ್ಕ, ಶಾಂತಾರಾಮ ಸೂರ್ಯವಂಶಿ, ಶಿವಾಜಿ ಜಾಧವ ಇತರರು ಇದ್ದರು.
Leave a Comment