ಹಳಿಯಾಳ:- ನಮ್ಮನ್ನು ಬೆಂಗಳೂರಿಗೆ ಕರೆದು ನೀವೆ ಅಭ್ಯರ್ಥಿ ಎಂದು ಹೇಳಿ ಬಳಿಕ ವಲಸಿಗರಿಗೆ ಟಿಕೆಟ್ ನೀಡಿ ವಚನ ಭ್ರಷ್ಠರಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೆಡಿಎಸ್ ಪಕ್ಷ ಹಳಿಯಾಳ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಳ್ಳಲಿದೆ ಎಂದು ಜೆಡಿಎಸ್ ಪಕ್ಷ ಬಂಡಾಯ ಅಭ್ಯರ್ಥಿ ಟಿ.ಆರ್.ಚಂದ್ರಶೇಖರ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಮಠದ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಕ್ಷೇತ್ರದಲ್ಲಿ ಉತ್ತಮ ಬೆಂಬಲ ದೊರೆಯುತ್ತಿದ್ದು ತಮ್ಮ ಗೆಲುವು ನಿಶ್ಚಿತ ಎಂದರು. ಸೀರೆ, ಪ್ಯಾಂಟ್-ಶರ್ಟ ಹಂಚಿ ಬಾಡೂಟ ಬಡಿಸಿ ಚಿಲ್ಲರೆ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಅಭ್ಯರ್ಥಿ ಅನೇಕರಿಗೆ ಭರವಸೆ ನೀಡಿ ಕೊಟ್ಟಿರುವ ಚೆಕ್ಗಳು ಬೌನ್ಸ್ ಆಗಿವೆ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಕುಮಾರಸ್ವಾಮಿಯವರ ಹಳಿಯಾಳ ಅಭ್ಯರ್ಥಿ ರಮೇಶ ಠೇವಣಿ ಕಳೆದುಕೊಳ್ಳುವುದು ನಿಶ್ಚಿತವಾಗಿದೆ ಅಲ್ಲದೇ ಕ್ಷೇತ್ರದಲ್ಲಿ ಪ್ರಾಮಾಣಿಕ ಕಾರ್ಯಕರ್ತರು, ನಮ್ಮಂತಹ ಮುಖಂಡರಿಂದ ಕಟ್ಟಿ ಬೆಳೆಸಿದ ಪಕ್ಷ ಮುಂದಿನ ದಿನಗಳಲ್ಲಿ ಯಾರು ಗತಿಯಿಲ್ಲದೇ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು. ಇನ್ನೂ ಕಾಂಗ್ರೇಸ್, ಬಿಜೆಪಿ ಅಭ್ಯರ್ಥಿಗಳು ಸುಳ್ಳು ಭರವಸೆ ನೀಡುವರಾಗಿದ್ದು. ಯಾರು ಎಷ್ಟು ಅಭಿವೃದ್ದಿ ಮಾಡಿದ್ದಾರೆ ಯಾರು ಆಡಳಿತ ನಡೆಸಲು ಯೋಗ್ಯರು ಎಂಬುದನ್ನು ಜನತೆ ಅರಿತಿದ್ದು ಇವರುಗಳ ದುರಾಡಳಿತದಿಂದ ಬೆಸತ್ತಿರುವ ಜನತೆ ಈ ಬಾರಿ ತಮಗೆ ಬಹುಮತದಿಂದ ಗೆಲ್ಲಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಜೆಡಿಎಸ್ ಮುಖಂಡರಾದ ಕೈತಾನ ಬಾರಬೋಜಾ, ದಾವಲಸಾಬ ಅಂಗಡಿ, ಎಸ್.ಜಿ ಬಿರಾದಾರ, ಬಸವರಾಜ ಶಾಬಾದಿ, ಅಂತು ಗೌಡಾ, ಸುಭಾಷ ಬೊವಿವಡ್ಡರ, ತುಕಾರಾಮ ಕರಂಜೆಕರ, ಮಹೇಶ ಸಾವಂತ, ಸುಶೀಲಾ ಕಾಸರಗೊಡ, ರುಕ್ಮಿಣಿ ಬಾಗಡೆ, ವಾಲಂತಿ ಸಿದ್ದಿ, ಸಂತಾನ ಸಿದ್ದಿ, ಮಹೇಶ ಜಾಧವ, ಸುಭಾಷ ಗೌಡಾ, ಪರಶುರಾಮ ಮೇತ್ರಿ, ವಿಠ್ಠಲ ಶಿಗ್ನೋಳಕರ, ಮಹೇಶ ಪಂಡಿತ ಇತರರು ಇದ್ದರು.
Leave a Comment