ಹಳಿಯಾಳ :- ಹಳಿಯಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆಯದ್ದರಿಂದ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವುದಾಗಿ ಹೇಳಿದ್ದ ನಿವೃತ್ತ ಎಸ್ಪಿ ಜಿ.ಆರ್.ಪಾಟೀಲ್ ರಾಜ್ಯ ನಾಯಕರ ಸಂಧಾನದ ಫಲವಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು ಪಕ್ಷದ ಗೆಲುವಿಗಾಗಿ ದುಡಿಯಲಿದ್ದಾರೆಂದು ಬಿಜೆಪಿ ಪಕ್ಷ ರಾಜ್ಯ ಪರಿಷತ್ ಸದಸ್ಯ ರಾಜು ಧೂಳಿ ಹೇಳಿದರು. ಪಟ್ಟಣದಲ್ಲಿ ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಸಿಂಹಪಾಲು ಮರಾಠಾ ಸಮುದಾಯವನ್ನು ಹೊಂದಿರುವ ಜಿ.ಆರ್.ಪಾಟೀಲ್ ಈ ಬಾರಿ ಮರಾಠಾ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು ಆದರೇ ಸುನೀಲ್ ಹೆಗಡೆ ಅವರಿಗೆ ಟಿಕೆಟ್ ಘೊಷಣೆಯಾಗಿದ್ದರಿಂದ ಅಸಮಾಧಾನಗೊಂಡು ಮರಾಠರನ್ನು ಕಡೆಗಣಿಸಲಾಗಿದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೊಷಿಸಿದ್ದರು ಆದರೇ ಜಿಲ್ಲಾಧ್ಯಕ್ಷ ಕೆಜಿ ನಾಯ್ಕ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕೆಎಸ್ ಈಶ್ವರಪ್ಪನವರು ಪಾಟೀಲ್ ಮನವೊಲಿಸಿ ಸರ್ಕಾರ ರಚನೆಯಾದಲ್ಲಿ ಉತ್ತಮ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರಿಂದ ಪಾಟೀಲ್ ತಮ್ಮ ಬಂಡಾಯದ ನಿರ್ಧಾರದಿಂದ ಹಿಂದೆ ಸರಿದಿದ್ದಾರೆಂದು ಧೂಳಿ ತಿಳಿಸಿದರು. ಜಿ.ಆರ್. ಪಾಟೀಲ್ ಸ್ಪಷ್ಟಣೆ :- ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಟಿಕೆಟ್ ನೀಡದೆ ಇರುವುದಕ್ಕೆ ಬೇಸರವಾಗಿತ್ತು ಆದರೇ ಪ್ರಧಾನಿ ಮೋದಿಜಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ತಾವು ಪಕ್ಷಕ್ಕೆ ಸೇರ್ಪಡೆಯಾಗಿದ್ದೇ ಆದ್ದರಿಂದ ಪ್ರಧಾನಿ ಅವರ ಕೈ ಬಲಪಡಿಸಲು, ಅಭಿವೃದ್ದಿಗಾಗಿ ಪಕ್ಷಕ್ಕಾಗಿ ದುಡಿಯುವೇ, ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವ ನಿರ್ಧಾರವನ್ನು ಮೊಟಕುಗೊಳಿಸಿದ್ದು ಬಿಜೆಪಿ ಹೈಕಮಾಂಡ ನಿರ್ದೇಶನದಂತೆ ಕೆಲಸ ನಿರ್ವಹಿಸುವುದಾಗಿ ಹೇಳಿದ ಅವರು ಮುಂದೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದ್ದು ಮರಾಠರಿಗೆ 2ಎ ಮೀಸಲಾತಿ ನೀಡುವ ಭರವಸೆ ನಾಯಕರು ನೀಡಿದ್ದಾರೆಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿ.ಆರ್.ಪಾಟೀಲ್, ಪ್ರಕಾಶ ಕಮ್ಮಾರ, ಪ್ರಸಾದ ಹುನ್ಸವಾಡಕರ, ಬಾಲಕೃಷ್ಣ ಢೇಪಿ, ಪ್ರಕಾಶ ಗಿರಿ, ರಾಘವೇಂದ್ರ ನಾಯ್ಕ ಇದ್ದರು.
Leave a Comment