ಹಳಿಯಾಳ:- ಬಡವರು, ದಿನ ದಲಿತರ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ, ಕೇಂದ್ರದಲ್ಲಿ ಮೋದಿಜಿಯವರ ಕೈ ಬಲ ಪಡಿಸಲು ಬಿಜೆಪಿ ಪಕ್ಷದ ಹಳಿಯಾಳ ಕ್ಷೇತ್ರದ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಗೆ ಮತನೀಡಿ ಎಂದು ಅವರ ಪತ್ನಿ ಸುವರ್ಣಾ ಹೆಗಡೆ ಮತಯಾಚನೆಯಲ್ಲಿ ತೊಡಗಿದ್ದಾರೆ. ಹಳಿಯಾಳದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾಳಿನದಿ ನೀರಾವರಿ ಯೋಜನೆಯಂತಹ ರೈತರ ಜೀವನ ಹಸನಾಗಿಸಬಲ್ಲ ಮಹತ್ವಪೂರ್ಣ ಯೋಜನೆಯ ಪರಿಕಲ್ಪನೆಯನ್ನು ಕ್ಷೇತ್ರಕ್ಕೆ ನೀಡಿ ಅದು ಸಾಕಾರವಾಗಲು ಸರ್ಕಾರದ ಗಮನ ಸೆಳೆಯಲು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರಾದ್ಯಂತ ಪಾದಯಾತ್ರೆ ಮಾಡಿದ್ದ ಸುನೀಲ್ ಹೆಗಡೆ ಅವರು ರೈತರ ಪರ, ಬಡವರ, ಕೂಲಿಕಾರರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ಅವರಿಗೆ ಮತ ನೀಡಿ ಮುಂದೆ ಕ್ಷೇತ್ರದಲ್ಲಿ ಅಭಿವೃದ್ದಿಗೆ ಸಹಕಾರ ನಿಡುವಂತೆ ಕೊರಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಅನೇಕ ಜನಪರ ಕಾರ್ಯಗಳನ್ನು ಕ್ಷೇತ್ರದ ಮತದಾರರಿಗೆ ಮನದಟ್ಟು ಮಾಡಲು ನಿರಂತರ ಪ್ರಚಾರ ಕಾರ್ಯ ನಡೆಸುವಂತೆ ಕಾರ್ಯಕರ್ತರಿಗೆ ಹಲವಾರು ಸಲಹೆ ಸೂಚನೆಗಳನ್ನು ನೀಡಿದರು. ಪಟ್ಟಣ, ಗ್ರಾಮಾಂತರ ಭಾಗ, ಜೋಯಿಡಾ ಗ್ರಾಮೀಣ ಭಾಗಗಳಲ್ಲಿ ಮಹಿಳಾ ಮುಖಂಡರ ಪಡೆಯೊಂದಿಗೆ ಅವರು ಪತಿಯ ಗೆಲುವಿಗಾಗಿ ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರೊಂದಿಗೆ ಮಹಿಳಾ ಮುಖಂಡರಾದ ವಾಣಿ ಪೈ, ಜಯಲಕ್ಷ್ಮೀ ಚವ್ವಾಣ, ಕೋಮಲ ಪಡ್ನಿಸ್, ಮಧುರಾ ಬಡಿಗೇರ, ರಾಖಿ ಮಿಂಡೊಳಕರ, ರೂಪಾ ಗಿರಿ, ನಿತಾ ಭಂಡಗಿ, ದೀಪಾ ನಾಯ್ಕ ಮೊದಲಾದವರು ಸಾಥ್ ನೀಡುತ್ತಿದ್ದಾರೆ.
Leave a Comment