ಹಳಿಯಾಳ:- ಜಾತಿ, ಜಾತಿಯಲ್ಲಿ, ಧರ್ಮ-ಧರ್ಮಗಳಲ್ಲಿ ಒಡಕು ಮೂಡಿಸಿ ಕಳೆದ 6 ದಶಕಗಳಿಂದ ಓಟಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೇಸ್ ಪಕ್ಷ ಈ ಬಾರಿ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆ ಸೋಲು ಖಚಿತ ಎಂದು ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಬಿಡುವಿಲ್ಲದಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಹೆಗಡೆ ಈಗಾಗಲೇ 2 ಸುತ್ತಿನ ಪ್ರಚಾರವನ್ನು ಮುಗಿಸಿದ್ದು ಮತ್ತೇ 3ನೇ ಸುತ್ತಿನ ಪ್ರಚಾರಕ್ಕೆ ಅಣಿಯಾಗಿದ್ದಾರೆ. ಪ್ರತಿ ಚುನಾವಣೆ ಮಗ್ಗುಲಲ್ಲಿ ಇದ್ದಾಗ ಚುನಾವಣೆ ಗಿಮಿಕ್ ಮಾಡುವ ದೇಶಪಾಂಡೆ ಅವರು ಈ ಬಾರಿ ಕಾಳಿನದಿ ನೀರಾವರಿ ಯೋಜನೆ ಮಾಡುತ್ತೇವೆಂದು ಕಾಮಗಾರಿಗೆ ಚಾಲನೆ ನೀಡುವ ನಾಟಕವಾಡಿದ್ದಾರೆಂದು ತಮ್ಮ ಚುನಾವಣಾ ಭಾಷಣಗಳಲ್ಲಿ ಹೇಳುತ್ತಿದ್ದು ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಬಗೆಹರಿಸಲಾಗದ ಸಚಿವರ ಅಭಿವೃದ್ದಿ ಶೂನ್ಯವಾಗಿದ್ದು ಮತದಾರ ಬದಲಾವಣೆ ಬಯಸಿದ್ದು ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದರು. ಈ ಸಂದರ್ಭದಲ್ಲಿ ಅವರೊಂದಿಗೆ ಮುಖಂಡರಾದ ಶಿವಾಜಿ ನರಸಾನಿ, ಮಂಗೇಶ ದೇಶಫಾಂಡೆ, ಶ್ರೀಪತಿ ಭಟ್, ಎಸ್.ಎ.ಶೇಟವಣ್ಣವರ, ಸಂತಾನ ಸಾವಂತ, ವಿಲಾಸ ಯಡವಿ, ವಿಜಯ ಬೋಬಾಟಿ, ವಿಎಮ್ ಪಾಟೀಲ್, ಅನಿಲ ಮುತ್ನಾಳ್, ಸಿದ್ದು ಶೆಟ್ಟಿ, ಉದಯ ಹೂಲಿ, ಇಲಿಯಾಸ ಬಳಗಾರ ಇತರರು ಇದ್ದರು.
Leave a Comment