ಹಳಿಯಾಳ:- ಮುಸ್ಲಿಂ ಸಮುದಾಯದವರು ಕಾಂಗ್ರೇಸ್ ಪಕ್ಷಕ್ಕೆ ಸೀಮಿತವಾಗಿಲ್ಲ, ಕಾಂಗ್ರೇಸ್ ಪಕ್ಷದಲ್ಲಿನ ಕೆಲವು ಮುಸ್ಲಿಂ ಮುಖಂಡರು ತಮ್ಮ ಸ್ವಾರ್ಥ ಸಾಧನೆಗಾಗಿ ಮುಸ್ಲಿಂ ಸಮುದಾಯ ಕಾಂಗ್ರೇಸ್ಗೆ ಬೆಂಬಲ ನೀಡಬೇಕೆಂದು ಹೇಳಿಕೆ ನೀಡಿರುವುದನ್ನು ತಾವು ಬಲವಾಗಿ ಖಂಡಿಸುವುದಾಗಿ ಜೆಡಿಎಸ್ ಪಕ್ಷದಲ್ಲಿನ ಮುಸ್ಲಿಂ ಸಮುದಾಯದ ಮುಖಂಡರು ಹೇಳಿದ್ದಾರೆ. ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಪಕ್ಷದ ಕರ್ನಾಟಕ ಅಲ್ಪ ಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಜಿ ಲಿಯಾಖತಅಲಿ ದಲಾಲ ಇತ್ತೀಚೆಗೆ ಪಟ್ಟಣದ ಬಸರೀಕಟ್ಟಿ ಪೆಟ್ರೊಲ್ ಬಂಕ ಪಕ್ಕದ ಮನೆಯ ಅಂಗಳದಲ್ಲಿ ನಡೆದ ಕಾಂಗ್ರೇಸ್ ಪಕ್ಷದ ಕಾರ್ಯಕ್ರಮದಲ್ಲಿ ಅಲಿಂ ಬಸರಿಕಟ್ಟಿ ಸೇರಿದಂತೆ ಇತರ ಪ್ರಮುಖರು ಮುಸ್ಲಿಂ ಸಮಾಜದವರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಬೇಕು ಅವರಿಗೆ ಮತ ಹಾಕಬೇಕು ಎಂದು ಹೇಳಿಕೆ ಕೊಟ್ಟಿರುವುದು ದುರ್ದೈವದ ಸಂಗತಿ ಇದು ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ವಿರುದ್ದ ಹೇಳಿಕೆಯಾಗಿದೆ ಎಂದಿದ್ದಾರೆ. ಗುಪ್ತ ಮತದಾನ ಪದ್ದತಿ ದೇಶದಲ್ಲಿದ್ದು ಬಹಿರಂಗವಾಗಿ ಸಮುದಾಯದವರೆಲ್ಲ ಒಂದು ಪಕ್ಷಕ್ಕೆ ಮತಹಾಕಿ, ಬೆಂಬಲಿಸಿ ಎಂದು ಹೇಳುವುದು ಕಾನೂನು ಬಾಹಿರವಾಗಿದೆ ಎಂದಿರುವ ಅವರು ಮುಸ್ಲಿಂ ಸಮುದಾಯಕ್ಕಾಗಿ ಕಾಂಗ್ರೇಸ್ ಪಕ್ಷ ಮಾಡಿರುವ ಅಭಿವೃದ್ದಿ ಆದರೂ ಎನು ಎಂದು ಕ್ಷೇತ್ರದಲ್ಲಿ ಸಚಿವ ದೇಶಪಾಂಡೆ 40 ವರ್ಷಗಳಲ್ಲಿ ಮುಸ್ಲಿಂ ಸಮುದಾಯಕ್ಕಾಗಿ ಒಂದು ಶಾದಿ ಮಹಲ್ ಮಾಡಿಲ್ಲ ಎಂದು ಕಿಡಿಕಾರಿದರು. ಪುರಸಭೆ ಸದಸ್ಯ ಸುಭಾನಿ ಹುಬ್ಬಳ್ಳಿ ಮಾತನಾಡಿ ಕಾಂಗ್ರೇಸ್ ಪಕ್ಷದಲ್ಲಿನ ಕೆಲವು ಮುಸ್ಲಿಂ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ದಶಕಗಳಿಂದ ಮುಸ್ಲಿಂ ಸಮುದಾಯವನ್ನು ಬಲಿಕೊಡುತ್ತಿದ್ದು ಪ್ರತಿ ಚುನಾವಣೆಯ ಸಮಯದಲ್ಲಿ ಕಾಂಗ್ರೇಸ್ನ ಕೆಲವು ಮುಸ್ಲಿಂ ಮುಖಂಡರು ಸಮಾಜ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರುವುದು ದುಃಖದ ಸಂಗತಿಯಾಗಿದ್ದು ಏಕಪಕ್ಷೀಯ ಇಂತಹ ಹೇಳಿಕೆಗಳಿಂದ ಸಮಾಜದ ಹೆಸರಿಗೆ ಕಳಂಕ ತರುತ್ತಿದ್ದು ಸಮಾಜದಲ್ಲಿನ ಅಭಿವೃದ್ದಿ ಕುಂಠಿತವಾಗಲು ಕಾರಣಿಕರ್ತರಾಗುತ್ತಿದ್ದಾರೆ ಅಲ್ಲದೇ ಸಮಾಜದಲ್ಲಿ ಒಡಕು ಹುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆಂದು ಗಂಭೀರ ಆಪಾದನೆ ಮಾಡಿದರು. ಮುಸ್ಲಿಂ ಸಮುದಾಯದವರು ಎಲ್ಲ ಪಕ್ಷಗಳಲ್ಲಿದ್ದು ಯಾರಿಗೆ ಬೇಕಾದರು ಮತದಾನ ಮಾಡುವ ಅಧಿಕಾರ ಅವರಿಗಿದೆ ಎಂದರು. ಕಾಂಗ್ರೇಸ್ ಪರವಾಗಿ ಹೇಳಿಕೆ ನೀಡುವ ಈ ಮುಖಂಡರು ಕಾಂಗ್ರೇಸ್ನಿಂದ ಮುಸ್ಲಿಂ ಸಮುದಾಯಕ್ಕೆ ಏನು ಅಭಿವೃದ್ದಿಯಾಗಿದೆ ಎನ್ನುವ ದಾಖಲೆಗಳನ್ನು ಬಹಿರಂಗ ಪಡಿಸಲಿ ಹಾಗೂ ಆಶ್ವಾಸನೆಯ ಗೋಪುರಗಳು ಬೇಡ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ರಾಜು ಮುಲ್ಲಾ, ಸೈಯದಲಿ ಅಂಕೋಲೆಕರ, ಶಾಹಿದ, ಸರದಾರ ಶೆಂಡೆವಾಲೆ, ಹಾರುಣ ಸಿದ್ದಿ, ಅಲ್ಲಾಭಕ್ಷ, ಯಾಕುಬನಾಯ್ಕ, ಹಾಜಿ ಐಎಮ್ ತಾಳಿಕೊಟಿ, ಖಲಿಮುಲ್ಲಾ ಇತರರು ಇದ್ದರು.
Leave a Comment