• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾಂಗ್ರೇಸ್ ಪಕ್ಷದ ಜಿಲ್ಲಾ ಪ್ರಣಾಳಿಕೆ ಬಿಡುಗಡೆ ನೀರಾವರಿ, ಉದ್ಯೋಗ ಸೃಷ್ಠಿ-ಪ್ರವಾಸೋಧ್ಯಮ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ

May 8, 2018 by Yogaraj SK Leave a Comment

ಹಳಿಯಾಳ:-

ಕಳೆದ ಬಾರಿ ಚುನಾವಣೆಯಲ್ಲಿ ನೀಡಿದ 159 ಭರವಸೆಗಳಲ್ಲಿ 157 ಭರವಸೆಗಳನ್ನು ಈಡೇರಿಸಿದ ಶ್ರೇಯ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಭ್ರಷ್ಟಾಚಾರದ ಆರೋಪ ಇಲ್ಲದ ಸ್ವಚ್ಚ, ಪ್ರಾಮಾಣಿಕ ಆಡಳಿತ ನೀಡಿದ, ಜೈಲಿಗೆ ಹೊಗುವ ಕೆಲಸ ಮಾಡದ ಅತ್ಯಂತ ಪ್ರಾಮಾಣಿಕ ಜನಪರ ಸರ್ಕಾರವಾಗಿದ್ದು ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.  ಕರ್ಣಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕಾಂಗ್ರೇಸ್ ಪಕ್ಷದವರು  ಉತ್ತರ ಕನ್ನಡ ಜಿಲ್ಲಾ ಪ್ರಣಾಳಿಕೆಯನ್ನು ಸಚಿವ ಆರ್.ವಿ.ದೇಶಪಾಂಡೆ ಅವರ ಹಳಿಯಾಳದ ನಿವಾಸದಲ್ಲಿ ಬಿಡುಗಡೆ ಮಾಡಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.  ರಾಷ್ಟ್ರೀಕೃತ ಬ್ಯಾಂಕಗಳಲ್ಲಿಯ ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರ ಹಿಂದೆಟು ಹಾಕಿದ್ದು ಈಗ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದರು.  ಯುವಕರು ರಾಷ್ಟ್ರದ ಆಸ್ತಿಯಾಗಿದ್ದು 2025ರಲ್ಲಿ ಭಾರತ ವಿಶ್ವದ ಅತ್ಯಂತ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮಲಿದ್ದು ಇದಕ್ಕೆ ಯುವಕರ ಸಂಖ್ಯೆ ಹೆಚ್ಚುತ್ತಲಿರುವುದು ಕಾರಣವಾಗಿದ್ದು ಇವರಿಗೆ ಉದ್ಯೋಗ ಸೃಷ್ಠಿಸಲು ಕೌಶಲ್ಯ ತರಬೇತಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.-:

ಜಿಲ್ಲಾ ಪ್ರಣಾಳಿಕೆ:-   ನೀರಾವರಿ ಮತ್ತು ಕುಡಿಯುವ ನೀರಿಗೆ ಆದ್ಯತೆ:- ಜಿಲ್ಲೆಯಲ್ಲಿರುವ ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಮ, ಬಾಂದಾರ ನಿರ್ಮಿಸಿ ಏತ ನೀರಾವರಿ, ಜಿಲ್ಲೆಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ನದಿಗಳಿಗೆ ಬಾಂದಾರ ಮತ್ತು ಸಮುದ್ರಕ್ಕೆ ತಡೆಗೋಡೆ ನಿರ್ಮಿಸುವುದು, ಜಿಲ್ಲೆಯಲ್ಲಿ ಕಾಳಿ, ಪಾಂಡರಿ, ಗಂಗಾವಳಿ, ಅಘನಾಶಿನಿ, ಶರಾವತಿ ಮುಂತಾದ ನದಿಗಳ ಸಮುದ್ರಕ್ಕೆ ಸೇರುತ್ತಿರುವ ನೀರನ್ನು ಸದುಪಯೋಗ ಪಡೆಯುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸುವುದು.  ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ :- ರೈತನ ಹಿತ ಕಾಯಲು 2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ  “ರೈತ ಬೆಳಕು” ಎಂಬ ವಿಶಿಷ್ಟ ಯೋಜನೆಯಡಿ ಮಳೆ ಆಶ್ರಿತ ರೈತರಿಗೆ ಪ್ರತಿ ಹೆಕ್ಟೇರ್‍ಗೆ ರೂ.5,000 ರಂತೆ ಪ್ರತಿ ವರ್ಷ ಗರಿಷ್ಟ ರೂ.10,000ಗಳ ಅನುದಾನವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಉದ್ದೇಶ, ಕರಾವಳಿ ಭಾಗದಲ್ಲಿರುವ ಗೇರು ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಸಂಶೋಧನೆ ಮತ್ತು ತರಬೇತಿ ಉದ್ದೇಶದಿಂದ ಕುಮಟಾದಲ್ಲಿ ಗೇರು ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ, ಯುಟುಪಿಯಾ ಕ್ಯಾಶೂ ಕ್ಲಸ್ಟರ್ ಸ್ಥಾಪಿಸುವುದು, ಜಿಲ್ಲೆಯಲ್ಲಿ ಕೃಷಿ ಮಾರುಕಟ್ಟೆ, ಉಗ್ರಾಣ, ಶೀತಲೀಕರಣ ಘಟಕಗಳು, ಹಣ್ಣು ಮತ್ತು ಆಹಾರ ಸಂಸ್ಕರಣಾ ಘಟಕಗಳ ನಿರ್ಮಾಣ ಮಾಡುವುದು, ಶಿರಸಿಯಲ್ಲಿ ಅಡಿಕೆ ಸಂಸ್ಕರಣಾ ಕೇಂದ್ರ ಸ್ಥಾಪಿಸುವುದು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಿ.ಆರ್.ಝೆಡ್ ನಿಯಮಾವಳಿಗಳ ನಿರ್ಬಂಧÀಗಳನ್ನು ಸಡಿಲಿಸಲು ಕೇಂದ್ರದ ಮೇಲೆ ಒತ್ತಡ ತರುವುದು.

ಉದ್ಯೋಗಾಭಿವೃದ್ಧಿ:-  ಜಿಲ್ಲೆಗೆ ಪರಿಸರ ಸ್ನೇಹಿ ಜವಳಿ, ಸಿದ್ದ ಉಡುಪು, ಆಟಿಕೆ ತಯಾರಿಕೆ, ಗುಡಿ ಮುಂತಾದ  ಕೈಗಾರಿಕೆಗಳನ್ನು ಮತ್ತು ಪ್ರವಾಸೋದ್ಯಮ ಆಧಾರಿತ ಕೈಗಾರಿಕೆಗಳನ್ನು ಆಕರ್ಷಿಸುವುದು, ಜಿಲ್ಲೆಯಲ್ಲಿ ಸ್ಟಾರ್ಟ್ ಅಪ್ ಸಂಸ್ಕøತಿಯನ್ನು ಉತ್ತೇಜಿಸಲು ಮತ್ತು ಈಗಾಗಲೇ ಇರುವ ಸ್ಟಾರ್ಟ್ ಅಪ್‍ಗಳಿಗೆ ಒತ್ತು ನೀಡುವ ದೃಷ್ಟಿಯಿಂದ ಐಟಿಬಿಟಿ ಪಾರ್ಕ, ಸ್ಟಾರ್ಟಅಪ್ ಇನಕ್ಯೂಬೆಷನ್ ಸೆಂಟರ್‍ನ್ನು ಸ್ಫಾಪಿಸುವುದು. ಶಿಕ್ಷಣ ಮತ್ತು ಆರೋಗ್ಯ :-  ವಿದ್ಯಾರ್ಥಿನಿಯರಿಗೆ ಸ್ನಾತÀಕೋತ್ತರ ಪದವಿವರೆಗೆ ಉಚಿತ ಶಿಕ್ಷಣ ಹಾಗೂ ಉಚಿತ ಬಸ್ ಪಾಸ್, ಈಗಾಗಲೇ ಸರ್ಕಾರ ಮಾರ್ಚ 2018ರಂದು ಚಾಲನೆ ನೀಡಿದ ಆರೋಗ್ಯ ಕರ್ನಾಟಕ ಯೋಜನೆಯನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುದುವು, ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವಿಸ್ತರಣಾ ಘಟಕಗಳನ್ನು ಪ್ರಾರಂಭಿಸುದು.ಪ್ರವಾಸೋದ್ಯಮ :- ಇಲ್ಲಿಯ ನದಿ ಮತ್ತು ಕಡಲ ತೀರಗಳಲ್ಲಿ ಸಾಹಸ ಪ್ರವಾಸೋದ್ಯಮ, ಅರಣ್ಯ-ಚಾರಣಕ್ಕೆ ಒತ್ತು, ಜಿಲ್ಲೆಯಲ್ಲಿ ಲಾಲಬಾಗ ಮಾದರಿಯಲ್ಲಿ ಸಸ್ಯೋಧ್ಯಾನವನ್ನು ಅಭಿವೃದ್ಧಿಪಡಿಸುವುದು.

ಮೂಲಸೌಕರ್ಯ ಅಭಿವೃದ್ಧಿ:- ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ, ಸರ್ಕಾರದ ಎಲ್ಲ ಅನುದಾನ ಮತ್ತು ಯೋಜನೆಗಳು ಜನಸಂಖ್ಯೆ ಆಧಾರವಾಗಿದ್ದು, ಉತ್ತರ ಕನ್ನಡ ಜಿಲ್ಲೆಗೆ ಅನುದಾನವನ್ನು ಜನಸಂಖ್ಯೆಯ ಬದಲು ಭೌಗೋಳಿಕ ವೀಸ್ತೀರ್ಣವನ್ನು ಮಾನದಂಡವನ್ನಾಗಿಸಿ ಹೆಚ್ಚಿನ ಅನುದಾನ ದೊರೆಯುವಂತೆ ಮಾಡಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು.

ಸಮಾಜ ಕಲ್ಯಾಣ:-  ಕೇಂದ್ರ ಸರ್ಕಾರದ ಪರಿಶೀಲನೆ ಹಂತದಲ್ಲಿರುವ ಜಿಲ್ಲೆಯ ಹಾಲಕ್ಕಿ ಮತ್ತು ಕುಣಬಿ ಜನಾಂಗವನ್ನು ಹಾಗೂ ಗೌಳಿ ಜನರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಪ್ರಯತ್ನ, ವಿವಿಧ ಮರಾಠಿ ವರ್ಗದವರನ್ನು, ಖಾರ್ವಿ ಮುಂತಾದ ಹಿಂದುಳಿದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು, ಕ್ಷತ್ರೀಯ ಮರಾಠಾ ಸಮುದಾಯವನ್ನು 3ಬಿ ಯಿಂದ 2ಎ ವರ್ಗಕ್ಕೆ ಸೇರ್ಪಡೆಗೊಳಿಸುವುದು.

ಕ್ರೀಡೆ:- ಜಿಲ್ಲಾ ಮತ್ತು ತಾಲ್ಲೂಕಾ ಕೇಂದ್ರಗಳಲ್ಲ್ಲಿ ಕ್ರೀಡಾಂಗಣ ಅಭಿವೃದ್ಧಿ ಮಾಡುವುದು. ಅರಣ್ಯ – ಪರಿಸರ:- ಜಿ.ಪಿ.ಎಸ್. ಆಗಿರುವ ಅರಣ್ಯ ಮತ್ತು ಸರಕಾರಿ ಜಮೀನನ್ನು ಸಕ್ರಮಗೊಳಿಸಿ ಫಲಾನುಭವಿಗಳಿಗೆ ಪಟ್ಟಾ (ಹಕ್ಕುಪತ್ರ) ನೀಡುವಲ್ಲಿ ಕ್ರಮ ಕೈಗೊಳ್ಳಲಾಗುವುದು, ಉಳಿದ ಕುಂಬ್ರಿ ಜಮೀನಿನ ಪಟ್ಟಾ ಶೀಘ್ರದಲ್ಲಿ ನೀಡಲು ಕ್ರಮ.

ಇತರೇ :-  ನಗರಗಳ ಸಂಚಾರ ವ್ಯವಸ್ಥೆ ಆಧುನೀಕರಣಗೊಳಿಸಿ ಟ್ರಾಪಿಕ್ ಪೋಲಿಸ್ ಸ್ಟೇಶನ್‍ಗಳ ಸ್ಥಾಪನೆ, ಬಹುನಿರೀಕ್ಷಿತ ಹುಬ್ಬಳ್ಳಿ -ಅಂಕೋಲಾ ರೈಲು ಕಾಮಗಾರಿಯ ಶೀಘ್ರವಾಗಿ ಚಾಲನೆ ನೀಡಲು ಕೇಂದ್ರದ ಮೇಲೆ ತೀವ್ರ ಒತ್ತಡ ತರುವುದು.  ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಬಿಡಿ ಚೌಗಲೆ, ಮುಖಂಡರಾದ ಪ್ರಶಾಂತ ದೇಶಪಾಂಡೆ, ಎಸ್.ಕೆ.ಭಾಗವತ, ಶಾಂತಾರಾಮ ಹೆಗಡೆ, ಎಸ್.ಬಿ.ಗೌಡಾ, ಎನ್.ಪಿ.ಗಾವಕರ, ಕೃಷ್ಣಾ ಪಾಟೀಲ್, ಷನ್ಮುಖ ಗೌಡಾ,ಸುಭಾಷ ಕೊರ್ವೆಕರ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 000 ರಂತೆ, congress released, Dist, HALIYAL, Minister RVD Home, Pranalike, ಅಭಿವೃದ್ದಿಗೆ ಹೆಚ್ಚಿನ ಆದ್ಯತೆ, ಆಟಿಕೆ ತಯಾರಿಕೆ, ಉಚಿತ ಶಿಕ್ಷಣ ಹಾಗೂ ಉಚಿತ ಬಸ್ ಪಾಸ್, ಉದ್ಯೋಗ, ಕಾಂಗ್ರೇಸ್ ಪಕ್ಷದ ಜಿಲ್ಲಾ ಪ್ರಣಾಳಿಕೆ ಬಿಡುಗಡೆ, ಕ್ರೀಡಾಂಗಣ ಅಭಿವೃದ್ಧಿ, ಗುಂಡಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ, ಜವಳಿ, ನೀರಾವರಿ, ಪ್ರಾಮಾಣಿಕ ಆಡಳಿತ, ಭ್ರಷ್ಟಾಚಾರದ ಆರೋಪ ಇಲ್ಲದ ಸ್ವಚ್ಚ, ಮಳೆ ಆಶ್ರಿತ ರೈತರಿಗೆ ಪ್ರತಿ ಹೆಕ್ಟೇರ್‍ಗೆ ರೂ.5, ಯುಟುಪಿಯಾ ಕ್ಯಾಶೂ ಕ್ಲಸ್ಟರ್, ರೈತ ಬೆಳಕು, ರೈತರ ಖಾತೆಗೆ ನೇರವಾಗಿ ವರ್ಗಾವಣೆ, ರೈತರ ಸಾಲಮನ್ನಾ, ರೈಲು ಕಾಮಗಾರಿಯ ಶೀಘ್ರವಾಗಿ ಚಾಲನೆ, ಶಿಕ್ಷಣ ಮತ್ತು ಆರೋಗ್ಯ, ಸಂಶೋಧನಾ ಕೇಂದ್ರ, ಸಿದ್ದ ಉಡುಪು, ಸೃಷ್ಠಿ-ಪ್ರವಾಸೋಧ್ಯಮ, ಸ್ಟಾರ್ಟ್ ಅಪ್‍ಗಳಿಗೆ ಒತ್ತು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar