.ಹಳಿಯಾಳ:- ಕಾಳಿನದಿ ನೀರಾವರಿ ಯೋಜನೆ ಜಾರಿಯಾಗಿದೆ ಪೈಪಲೈನ್ಗಳು ಕೆರೆಗಳಿಗೆ ಬಂದು ಬಿಳುತ್ತಿವೆ ಎಂದು ಕಾಂಗ್ರೇಸ್ ಪಕ್ಷದ ಧ್ವಜ ಹಿಡಿದು ಪೈಪಗಳ ಮೇಲೆ ನಿಂತು ಮತದಾರರಿಗೆ ದಾರಿ ತಪ್ಪಿಸುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಸಂಬಂಧಪಟ್ಟ ಕಾಂಗ್ರೇಸ್ ಪಕ್ಷದವರ ಮೇಲೆ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಪತ್ರಿಕೆಯೊಂದರಲ್ಲಿ ಹಿಂದಿನ ಯೋಜನೆ ಪ್ರಸ್ತುತ ಆಗಿರುವಂತೆ ಕಾಂಗ್ರೇಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಪರ ಸುದ್ದಿ ಮಾಡಿದ್ದ ಪತ್ರಿಕೆಯ ವಿರುದ್ದವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು ಕಳೆದ 2 ದಿನಗಳ ಹಿಂದೆ ಮುರ್ಕವಾಡದಲ್ಲಿ ಜಿಪಂ ಸದಸ್ಯೆಯೊರ್ವರ ಗಂಡ ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಧ್ವಜ ಹಿಡಿದು ಪೈಪಗಳ ಮೇಲೆ ನಿಂತು ಪೊಟೊ ಪೊಸ್ ನೀಡಿ ಎಲ್ಲೆಡೆ ಪೊಟೊ ಪ್ರಚಾರ ನೀಡಿ ಸ್ಪಷ್ಟವಾಗಿ ನೀತಿ ಸಂಹಿತೆ ಉಲ್ಲಂಘಿಸಿದ್ದು ಈ ಬಗ್ಗೆ ಹಳಿಯಾಳ ಬಿಜೆಪಿ ಘಟಕ ಚುನಾವಣಾಧಿಕಾರಿಗೆ ದೂರು ನೀಡಿದೆ ಎಂದು ತಿಳಿಸಿ ದೂರಿನ ಪ್ರತಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಎಸ್.ಎ.ಶೆಟವನ್ಣವರ, ವಿಎಮ್ಪಾಟೀಲ್, ಶ್ರೀಪತಿ ಭಟ್, ಅಪ್ಪಾರಾವ ಪುಜಾರಿ, ವಿಜಯ ಬೊಬಾಟಿ, ವಿಲಾಸ ಯಡವಿ, ಅಪ್ಪಾಸಾಹೇಬ ದೇಸಾಯಿ ಮೊದಲಾದವರು ಇದ್ದರು.
Leave a Comment