ಹಳಿಯಾಳ:- ರೈತರ ಹೊಲಗಳಿಗೆ ನೀರುಣಿಸುವ, ನೀರಾವರಿ ಉದ್ದೇಶಕ್ಕಾಗಿ ಕಾಳಿನದಿ ನೀರಾವರಿ ಯೋಜನೆ ಮಂಜೂರಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ದೇವಸ್ಥಾನದಲ್ಲಿ ಬಂದು ಪ್ರಮಾಣ ಮಾಡಿ ಹೇಳಲಿ ತಾವು ಕೂಡ ಆ ಯೋಜನೆ ಜಾರಿಯಾಗಿಲ್ಲ ಅದು ಕೇವಲ ಚುನಾವಣೆ ಗಿಮಿಕ್ ಆಗಿದೆ ಎಂದು ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಸವಾಲ್ ಹಾಕಿದರು. ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ಚುನಾವಣೆಯಲ್ಲಿ ಒಂದು ನಾಟಕವಾಡುವ ಸಚಿವ ಆರ್.ವಿ.ದೇಶಪಾಂಡೆ ಈ ಚುನಾವಣೆಯಲ್ಲಿ ಕಾಳಿನದಿ ನೀರಾವರಿ ಯೋಜನೆ ಜಾರಿ ಆಗಿದೆ ಎನ್ನುವ ರಾಜಕೀಯ ನಾಟಕವಾಡುತ್ತಿದ್ದಾರೆ ಅಲ್ಲದೇ ನೀರಾವರಿ ಯೋಜನೆ ಪೈಪಲೈನ್ ಮೂಲಕ ಮಾಡಲು ಬರುವುದಿಲ್ಲ ಬದಲಾಗಿ ಕೆನಾಲ್ ಮೂಲಕ ಯೋಜನೆ ಜಾರಿ ಮಾಡಬೇಕಾಗುತ್ತದೆ ಆದರೇ ಇದು ನೀರಾವರಿ ಯೋಜನೆ ಆಗಿರದೆ ಧಾರವಾಡ ಜಿಲ್ಲೆ ಅಳ್ನಾವರಕ್ಕೆ ನೀರು ಕೊಟ್ಟು ಹಳಿಯಾಳ ಕ್ಷೇತ್ರದ ಜನತೆಗೆ ದ್ರೋಹ ಬಗೆಯುವ ಯೋಜನೆ ಆಗಿದೆ ದೇಶಪಾಂಡೆ ಮಹಾನ್ ಸುಳ್ಳುಗಾರ ಎಂದು ಆರೋಪಿಸಿದರು. ಕಲ್ಲುಹೊಡೆಯಿರಿ ಎಂದು ಹೇಳುವ ಘೊಟ್ನೆಕರ ಅವರ ಹೇಳಿಕೆಯನ್ನು ಜನ ಸ್ವೀಕರಿಸಲಿದ್ದು ಮೇ.12 ರಂದೆ ಜನತೆ ಮತದಾನದ ಮೂಲಕ ಕಾಂಗ್ರೇಸ್ ಅಭ್ಯರ್ಥೀ ಹಾಗೂ ಪಕ್ಷಕ್ಕೆ ಕಲ್ಲುಹೊಡೆದು ಮನೆಗೆ ಕಳುಹಿಸಲಿದ್ದಾರೆಂದು ಹೆಗಡೆ ಲೇವಡಿ ಮಾಡಿದರು. ನೀರಾವರಿ ಯೋಜನೆ ನಾಟಕವಾಗಿದೆ ಎನ್ನುವ ಹೇಳಿಕೆಗೆ ಈಗಲೂ ತಾವು ಬದ್ದರಿದ್ದು ದೇಶಪಾಂಡೆಗೆ 2 ವರ್ಷಗಳ ಕಾಲಾವಧಿ ನೀಡುತ್ತೇನೆ ಅಷ್ಟರಲ್ಲಿ ಅವರು ನೀರಾವರಿ ಯೋಜನೆ ಜಾರಿಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸಿದ ಮೇಲೆಯೇ ಚುನಾವಣೆ ಎದುರಿಸೊಣ ಅಲ್ಲಿಯವರೆಗೂ ಕ್ಷೇತ್ರದಲ್ಲಿ ಚುನಾವಣೆ ಮುಂದುಡುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸೊಣ ಎಂದು ಮತ್ತೊಂದು ಸವಾಲ್ ಹಾಕಿದರು. ಸತತ 1983ರಿಂದ ಶಾಸಕರಾಗಿ ಆಯ್ಕೆಯಾಗುತ್ತ ಸಚಿವರಾಗಿ ಅಧಿಕಾರ ಚಲಾಯಿಸುತ್ತಿರುವ ದೇಶಪಾಂಡೆ ಅವರು ಅಂದಿನಿಂದ ಇಂದಿನವರೆಗೆ ಏಕೆ ಕಾಳಿನದಿ ನೀರಾವರಿ ಯೋಜನೆ ಜಾರಿಗೊಳಿಸಿಲ್ಲ ತಾನು 2008ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಅವಧಿಯಲ್ಲೇ ವಿಡಿ ಹೆಗಡೆ ಅವರ ಕನಸಿನ ಕೂಸಾದ ಕಾಳಿನದಿ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ತರಲು 20ದಿನ 367ಕೀಮಿ ಪಾದಯಾತ್ರೆ ನಡೆಸಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಹತ್ತಿರ 200ಕೋಟಿ ಬಜೆಟ್ನಲ್ಲಿ ಘೊಷಣೆ ಮಾಡಿಸುವಲ್ಲಿ ಸಫಲನಾಗಿದ್ದೇ ಆದರೇ ಈ 5 ವರ್ಷ ಅವಧಿ ತಮ್ಮದೇ ಕಾಂಗ್ರೇಸ್ ಸರ್ಕಾರ ಆಡಳಿತದಲ್ಲಿದ್ದರು ಸಚಿವ ದೇಶಪಾಂಡೆ ಈ ಯೋಜನೆ ಬಗ್ಗೆ ಮಾತನಾಡದೆ ಈಗ ಚುನಾವಣೆ ಸಂದರ್ಭದಲ್ಲಿ ಕಾಮಗಾರಿ ಜಾರಿಯ ನಾಟಕವಾಡುತ್ತಿರುವುದು ಅವರಿಗೆ ಇಂತಹ ಯೋಜನೆಗಳು ಜಾರಿಯಾಗಿ ರೈತರು ಸ್ಥಿತಿವಂತರಾಗುವ ಆಶಯವಿಲ್ಲ ಎಂದು ಕಿಡಿಕಾರಿದರು. ಜಾತಿವಾದಿ, ಕೋಮುವಾದಿಯಾಗಿರುವ ಕಾಂಗ್ರೇಸ್ ಪಕ್ಷ ಹಾಗೂ ದೇಶಪಾಂಡೆಯವರ ಮಾತಿಗೆ ಮುಸ್ಲಿಂ ಸಮುದಾಯದವರು ಮರುಳಾದರೇ ಮುಂದೆ ಅಭಿವೃದ್ದಿ ದೃಷ್ಠಿಯಿಂದ ಹಿನ್ನಡೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಬಿಜೆಪಿಯನ್ನು ರಾಜಕೀಯ ಪಕ್ಷವಾಗಿ ನೋಡಿ ಹೊರತು ಧರ್ಮದ ಆಧಾರದ ಮೇಲೆ ನೋಡಬೇಡಿ ನಾವು ಮುಸ್ಲಿಂ ವಿರೋಧಿಗಳಲ್ಲ ಮೋದಿಜಿಯವರು ಮುಸ್ಲಿಂ ಸಮುದಾಯಕ್ಕಾಗಿ ಮಾಡಿರುವ ಯೋಜನೆಗಳನ್ನೊಮ್ಮೆ ಪರಾಮರ್ಶಿಸಿ ಎಂದು ವಿನಂತಿಸಿದರು. ಗೌಳಿ ಸಮುದಾಯದವರು ಇತರರ ಅತಿಕ್ರಮಣ ಜಮೀನುಗಳನ್ನು ವಾಪಸ್ ಪಡೆಯುತ್ತೇವೆ ಎಂದು ಧಮಕಿ ಹಾಕುತ್ತಿರುವ ಕಾಂಗ್ರೇಸ್ನ ಬೇದರಿಕೆಗೆ ಹೆದರಬೇಡಿ ನಿಮ್ಮ ಹಿಂದೆ ನಾವಿದ್ದೇವೆ ಎಂದ ಸುನೀಲ್ ಹೆಗಡೆ ಕ್ಷೇತ್ರದಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಸಿಪಿಐ ಅವರು ಪಕ್ಷಪಾತ ಮಾಡುತ್ತಿದ್ದು ಸರಿಯಲ್ಲ ಬೆಂಗಳೂರು ಚುನಾವಣಾ ಆಯೋಗಕ್ಕೆ ದೂರು ನೀಡಲಾಗವುದು ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಮರಾಠರನ್ನು 2ಎಗೆ ಹಾಗೂ ಕುಣಬಿ ಜನರನ್ನು ಎಸ್ಟಿ ವರ್ಗಕ್ಕೆ ಹಾಗೂ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಿವಾಜಿ ನರಸಾನಿ, ಎಸ್.ಎ.ಶೆಟವಣ್ಣವರ, ಶ್ರೀಪತಿ ಭಟ್, ವಿಎಮ್.ಪಾಟೀಲ್,ಅಪ್ಪು ಚರಂತಿಮಠ, ಅಪ್ಪಾರಾವ ಪೂಜಾರಿ, ವಿಲಾಸ ಯಡವಿ,ಅನಿಲ ಮುತ್ನಾಳ, ಸಿದ್ದು ಶೆಟ್ಟಿ, ವಿಜಯ ಬೋಬಾಟಿ ಇದ್ದರು.
Leave a Comment