ಹಳಿಯಾಳ:- ಸಾವಿರಾರು ಕೋಟಿ ರೂ. ಅನುದಾನದ ಹೊಳೆ ಹರಿಸಿ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿರುವ ಹಾಗೂ ದೇಶದಲ್ಲೇ ಕ್ಷೇತ್ರವನ್ನು ನಂಬರ್ ಒನ್ ಮಾದರಿ ಕ್ಷೇತ್ರ ಮಾಡುವ ಇಚ್ಚಾಶಕ್ತಿ ಹೊಂದಿರುವ ಕಾಂಗ್ರೇಸ್ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮತ ನೀಡುವಂತೆ ಸಚಿವರ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ತಂದೆ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ. ಪಟ್ಟಣದಲ್ಲಿ ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರೊಂದಿಗೆ ಬೆಳಗ್ಗಿನ ಜಾವದಿಂದ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಮತಯಾಚನೆಗೆ ತೆರಳುತ್ತಿರುವ ಅವರಿಗೆ ಮಹಿಳಾ ಮುಖಂಡರಾದ ರವಿ ತೊರಣಗಟ್ಟಿ, ಶಾರದಾ ಕಿತ್ತೂರ, ಪ್ರೇಮಾ ತೊರಣಗಟ್ಟಿ ಮೊದಲಾದವರು ಸಾಥ್ ನೀಡುತ್ತಿದ್ದಾರೆ.
Leave a Comment