ಹಳಿಯಾಳ:
ಬಿ ಜೆ ಪಿ ವಿಶ್ವಾಸಮತ ಗಳಿಸಲು ವಿಫಲವಾದ ಹಿನ್ನಲೆಯಲ್ಲಿ ಶನಿವಾರ ಕಾಂಗ್ರೇಸ್ ತಾಲೂಕ ಘಟಕದ ವತಿಯಿಂದ ಸಂಭ್ರಮಾಚರಣೆ ನಡೆಯಿತು.
ಪಟ್ಟಣದೆಲ್ಲೆಡೆ ಪಟಾಕಿ ಸಿಡಿಸಿಸ ಸಂಭ್ರಮಿಸಿದ ಕಾರ್ಯಕರ್ತರು ವಿವಿಧ ಬಡಾವಣೆಗಳಿಗೆ ತೆರಳಿ ಸಿಹಿ ಹಂಚುವ ಮೂಲಕÀ ಹರ್ಷ ವ್ಯಕ್ತಪಡಿಸಿದರು. ಕಾಂಗ್ರೇಸ್ ಪಕ್ಷದ ಧ್ವಜ ಹಿಡಿದು ಪಟ್ಟಣದೆಲ್ಲೆಡೆ ಘೋಷಣೆಗಳನ್ನು ಜೈಕಾರ ಹಾಕುತ್ತಾ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.
ಕಾಂಗ್ರೇಸ್ ಮುಖಂಡರಾದ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಜಿ.ಪಂ ಉಪಾದ್ಯಕ್ಷ ಸಂತೋಷ ರೇಣಕೆ, ಜಿ.ಪಂ.ಸದಸ್ಯ ಕೃಷ್ಣಾ ಪಾಟೀಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೇಕರ, ಎಪಿಎಮ್ಸಿ ಮಾಜಿ ಅಧ್ಯಕ್ಷ ಅನೀಲ ಚವ್ಹಾಣ, ಸಂಜು ಮಿಶಾಳಿ, ಪುರಸಭೆ ಉಪಾದ್ಯಕ್ಷ ಅರುಣ ಬೊಬಾಟಿ, ಸದಸ್ಯರಾದ ಸುರೇಶ ತಳವಾರ, ಉಮೇಶ ಬೋಳಶೆಟ್ಟಿ, ಸತ್ಯಜೀತ ಗಿರಿ, ಮಾಲಾ ಬ್ರಗಾಂಜಾ, ಅನೀಲ ಫರ್ನಾಂಡೀಸ್, ಸಂತೋಷ ಹುಂಡೇಕರ, ರವಿ ತೋರಣಗಟ್ಟಿ, ಗುಲಾಬಷಾ ಲತೀಪನವರ, ಬಸವರಾಜ ಬೆಳಂಗಾವಕರ, ಶಿವಪುತ್ರಪ್ಪ ನುಚ್ಚಂಬ್ಲಿ ಮೊದಲಾದ ಪ್ರಮುಖರು ಸಂಭ್ರಮಾಚರಣೆಯಲ್ಲಿ ಪಾಲ್ಗೋಂಡಿದ್ದರು.
Leave a Comment