• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜನರ ತೀರ್ಪಿಗೆ ತಲೆಬಾಗುತ್ತೇವೆ ಸಮಾಜ ಸೇವೆ, ಭ್ರಷ್ಟಾಚಾರ ವಿರುದ್ದ ಹೋರಾಟ‌ಕ್ಕೆ ಆದ್ಯತೆ.. ಪಟ್ಟಣದಲ್ಲಿ ಕಾನೂನು ಬಾಹಿರವಾಗಿ ನಡೆದಿರುವ ಗೋ ವಧಾಲಯ ಕೂಡಲೇ ಮುಚ್ಚಿ ತಾಲೂಕಾಡಳಿತಕ್ಕೆ -ಮಾಜಿ ಶಾಸಕ ಸುನೀಲ್‌ ಹೆಗಡೆ ಎಚ್ಚರಿಕೆ

May 23, 2018 by Yogaraj SK Leave a Comment

ಹಳಿಯಾಳ : ಹಳಿಯಾಳ ಜೋಯಿಡಾ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನಗೆ ಮತದಾರರು ನೀಡಿದ ತೀರ್ಪನ್ನು ಧನಾತ್ಮಕವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಮುಂದುವರೆಯಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸುನೀಲ್ ಹೆಗಡೆ ಹೇಳಿದರು.  ಚುನಾವಣಾ ಫಲಿತಾಂಶದ ನಂತರ ಮಂಗಳವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಸುಮಾರು 30 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಹಾಗೂ ತಮ್ಮನ್ನು ಅಭಿವೃದ್ದಿಯ ಹರಿಕಾರ ಎಂದು ಕರೆದುಕೊಳ್ಳುವ ದೇಶಪಾಂಡೆ ಚುನಾವಣೆಯಲ್ಲಿ ಕೇವಲ  5 ಸಾವಿರ ಮತಗಳಿಂದ ಜಯ ಸಾಧಿಸಿದ್ದಾರೆ. ಇದು ಅವರ ತಾಂತ್ರಿಕ ಜಯವಾಗಿದೆ ಹೊರತು ಅದು ಜನರ ಜಯವಾಗಿಲ್ಲ ಎಂದ ಅವರು ಕಳೆದ ನಾಲ್ಕು ದಶಕಗಳ ಇತಿಹಾಸವನ್ನು ನೋಡಿದಾಗ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೇವಲ 7 ಸಾವಿರ ಮತಗಳನ್ನು ಪಡೆಯುತ್ತಿದ್ದರು. ಆದರೆ ಈ ಬಾರಿ ಇತಿಹಾಸದಲ್ಲಿಯೇ ಮೊದಲ ಬಾರಿ ಎಂಬಂತೆ 56 ಸಾವಿರಕ್ಕೂ ಅಧಿಕ ಮತಗಳು ಹರಿದು ಬಂದಿದ್ದು ಇದು ನಮಗೆ ಸಂದ ಜಯವಾಗಿದೆ ಎಂದರು.  ಈ ಬಾರಿಯ ಚುನಾವಣೆಯಲ್ಲಿ ದೇಶಪಾಂಡೆ ಗೆದ್ದು ಸೋತಿದ್ದಾರೆ. ಆದರೆ ಬಿಜೆಪಿ ಮಾತ್ರ ಗೆಲುವು ಸಾಧಿಸಿದೆ ಎಂದ ಅವರು ಜನರು ದೇಶಪಾಂಡೆ ಅವರನ್ನು ವಿರೋಧಿಸಿದ್ದು ಸೃಷ್ಟವಾಗಿದೆ. ಮುಂದಿನ ದಿನಗಳಲ್ಲಿ ಬಲಿಷ್ಠ ವಿರೋಧ ಪಕ್ಷವಾಗಿ ಆಡಳಿತ ಪಕ್ಷವನ್ನು ಪ್ರತಿ ಹೆಜ್ಜೆಗೂ ಕಟ್ಟಿ ಹಾಕುತ್ತೇವೆ ಎಂದ ಅವರು, ದೇಶಪಾಂಡೆ ಮತ್ತು ಅವರ ಪಟಾಲಂ ಮುಂದಿನ ದಿನಗಳಲ್ಲಿ ತಮ್ಮ ಅಧಿಕಾರ ಬಲ, ತೋಳಬಲ ಮತ್ತು ಹಣಬಲವನ್ನು ಉಪಯೋಗಿಸಿಕೊಂಡು ಪಕ್ಷದ ಕಾರ್ಯಕರ್ತರು ಮತ್ತು ಸಾಮಾನ್ಯ ಜನರಿಗೆ ಅನವಶ್ಯಕವಾಗಿ ತೊಂದರೆ ನೀಡಲು ಮುಂದಾದರೇ ಅದರ ಪರಿಣಾಮವನ್ನು ಅವರು ಎದರಿಸಬೇಕಾಗುತ್ತದೆ. ಅಲ್ಲದೇ ಅಧಿಕಾರಿಗಳು ಸಹ ಕಾನೂನು ಕಟ್ಟಡೆಗಳನ್ನು ಬಿಟ್ಟು ದೇಶಪಾಂಡೆ ಆದೇಶ ಪಾಲಿಸಲು ಮುಂದಾದರೇ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದ ಅವರು ಇನ್ನೂ ಮುಂದೆ ದೇಶಪಾಂಡೆ ಅವರ ಅಂಧಾ ದರ್ಭಾರ ನಡೆಯಲು ಬಿಡುವುದಿಲ್ಲ ಎಂದು ಸೃಷ್ಟ ಪಡಿಸಿ, ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತಕ್ಕೆ ತಮ್ಮ ಬೆಂಬಲವಿದೆ ಎಂದು ಸಾರಿದರು.  ಪಟ್ಟಣದಲ್ಲಿ ಅವ್ಯಾಹತ ಮತ್ತು ಕಾನೂನು ಬಾಹಿರವಾಗಿ ನಡೆಯುತ್ತಿರುವ ದನದ ಮಾಂಸ ಮಾರುಕಟ್ಟೆ ಹಾಗೂ ವಧಾ ಕೇಂದ್ರವನ್ನು ತಕ್ಷಣ ಬಂದ್ ಮಾಡಬೇಕು, ಅಲ್ಲದೇ ಪಟ್ಟಣದ ಎಲ್ಲಾ ಭಾಗಗಳಲ್ಲಿ ವ್ಯಾಪಾರ ನಡೆಸುತ್ತಿರುವ ಚಿಕನ್ ಅಂಗಡಿಗಳ ಮೇಲೆ ನಿಯಂತ್ರಣ ಸಾಧಿಸಿ ಅವರಿಗೆ ಪಟ್ಟಣದ ಹೊರ ಭಾಗದಲ್ಲಿ ಒಂದು ಕೇಂದ್ರವನ್ನು ಆರಂಭಿಸಿ ಪಟ್ಟಣದಲ್ಲಿ ಆರೋಗ್ಯ ಕಾಪಾಡಲು ಮುಂದಾಗುವಂತೆ ಮನವಿ ಮಾಡಿ, ಇದನ್ನು ಮಾಡಲು ತಾಲೂಕಾ ಮತ್ತು ಪೋಲಿಸ್ ಇಲಾಖೆ ಹಿಂದೇಟು ಹಾಕಿದರೇ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಮತ್ತು ಕಾನೂನು ಸಮರ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.  ಗ್ರಾಮೀಣ ಭಾಗಗದಲ್ಲಿ ದೇಶಪಾಂಡೆ ಅವರು ಶಿವಾಜಿ ಪುತ್ಥಳಿಗಳನ್ನು ಸ್ಥಾಪಿಸಲು ಅಡ್ಡಿ ಪಡಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅವಕಾಶ ಕೋರಲಾಗುವುದು. ಕಾನೂನು ರೀತಿಯಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗುವುದು. ಇದಕ್ಕೂ ದೇಶಪಾಂಡೆ ಅಡ್ಡಿ ಪಡಿಸಿದರೇ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. ಮುಂದಿನ ಅನಾಹುತಗಳಿಗೆ ದೇಶಪಾಂಡೆ ಅವರೇ ಹೊಣೆಗಾರರಾಗಲಿದ್ದಾರೆ. ಚುನಾವಣೆಯ ಸಮಯದಲ್ಲಿ ಮುಸ್ಲಿಂ ಸಮುದಾಯದವರು ಬಹಿರಂಗವಾಗಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ್ ಸೂಚಿಸಿರುವುದು ಕಾನೂನು ಬಾಹಿರವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಇದನ್ನು ಗಂಬೀರವಾಗಿ ಪರಿಗಣಿಸಲಿದ್ದು, ಇದು ಕಾಂಗ್ರೇಸ್ ಪಕ್ಷಕ್ಕೆ ತಿರುಗುಬಾಣವಾಗಲಿದೆ ಎಂದ ಅವರು, ಬಿಜೆಪಿ ಎಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ ಎಂದರು.  ಹಳಿಯಾಳ ಪಟ್ಟಣವನ್ನು ಸಿಂಗಾಪೂರವನ್ನಾಗಿ ಮಾಡುತ್ತೇನೆ ಎಂದು ವಾದ್ದಾನ ಮಾಡಿದ್ದ ದೇಶಪಾಂಡೆ ಅವರ ನೆರಳಿನಲ್ಲಿಯೇ ಪಟ್ಟಣದ ಪುರಸಭೆಯಲ್ಲಿ ಬೃಷ್ಟಾಚಾರ ತಾಂಡವಾಡುತ್ತಿದೆ. ಪುರಸಭೆಯ ಸದಸ್ಯರು ದಲ್ಲಾಳಿಗಳಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಾನು ಶಾಸಕನಾದ ಅವಧಿಯಲ್ಲಿ ಮಂಜೂರಾದ ಪಟ್ಟಣಕ್ಕೆ 24 ಗಂಟೆಗಳ ಕಾಲ ಕುಡಿಯುವ ನೀರು ಪೊರೈಕೆಯ ಯೋಜನೆಯನ್ನು ಇದೀಗ  ಅವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಅಲ್ಲದೇ ಯೋಜನೆಯ ಹೆಸರಿನಲ್ಲಿ ಭಾರೀ ಬ್ರಷ್ಟಾಚಾರ ನಡೆದಿದ್ದು ಇದರ ತನಿಖೆಗಾಗಿ ಸೂಕ್ತ ದಾಖಲೆ ಪತ್ರಗಳ ಸಮೇತ ಹೋರಾಟ ನಡೆಸುವುದಾಗಿ ಸೃಷ್ಟ ಪಡಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಶಿವಾಜಿ ನರಸಾನಿ, ಅನಿಲ್ ಮುತ್ನಾಳೆ, ತುಕಾರಾಮ ಪಟ್ಟೇಕಾರ, ಪ್ರಕಾಶ ಕೋರವರ, ನಾರಾಯಣ ಬೆಳಗಾಂವಕರ, ಅಪ್ಪು ಚರಂತಿಮಠ, ಸಿದ್ದು ಶೆಟ್ಟಿ, ಅನಿಲ್ ಗಿರಿ, ಯಲ್ಲಪ್ಪಾ ಸಾಣಿಕೊಪ್ಪ, ಸಂತಾನ ಸಾವಂತ ಮತ್ತೀತರರು ಹಾಜರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 24 ಗಂಟೆಗಳ ಕಾಲ ಕುಡಿಯುವ ನೀರು ಪೊರೈಕೆಯ ಯೋಜನೆ, 5 ಸಾವಿರ ಮತ, bjp, HALIYAL, press meet, sunil hegde, ಅನಂತಕುಮಾರ ಹೆಗಡೆ, ಅನಿಲ್ ಗಿರಿ, ಅಪ್ಪು ಚರಂತಿಮಠ, ಅವ್ಯಾಹತ ಮತ್ತು ಕಾನೂನು ಬಾಹಿರ, ಉಗ್ರ ಪ್ರತಿಭಟನೆ ಮತ್ತು ಕಾನೂನು ಸಮರ, ಎಚ್ಚರಿಕೆ, ಕಾಂಗ್ರೇಸ್ ಪಕ್ಷಕ್ಕೆ, ಕೂಡಲೇ ಮುಚ್ಚಿ ತಾಲೂಕಾಡಳಿತಕ್ಕೆ, ಚುನಾವಣಾ ಫಲಿತಾಂಶ, ಜನರ ತೀರ್ಪಿಗೆ ತಲೆಬಾಗುತ್ತೇವೆ, ದೇಶಪಾಂಡೆ ಮತ್ತು ಅವರ ಪಟಾಲಂ, ಧನಾತ್ಮಕ, ನಡೆದಿರುವ ಗೋ ವಧಾಲಯ, ನಾರಾಯಣ ಬೆಳಗಾಂವಕರ, ನೇತೃತ್ವದಲ್ಲಿ, ಪಟ್ಟಣದಲ್ಲಿ ಕಾನೂನು ಬಾಹಿರವಾಗಿ, ಪೋಲಿಸ್ ಇಲಾಖೆ ಹಿಂದೇಟು, ಭ್ರಷ್ಟಾಚಾರ ವಿರುದ್ದ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಸ್ಲಿಂ ಸಮುದಾಯ, ಯಲ್ಲಪ್ಪಾ ಸಾಣಿಕೊಪ್ಪ, ಸಂತಾನ ಸಾವಂತ, ಸಮಾಜ ಸೇವೆ, ಸಿದ್ದು ಶೆಟ್ಟಿ, ಹೋರಾಟ‌ಕ್ಕೆ ಆದ್ಯತೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar