ಹಳಿಯಾಳ:- ಶಾಸಕ, ಸಂಸದ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಜನಪರ ಕೆಲಸಗಾರ, ಸರಳ ಸಜ್ಜನಿಕೆಯ ವ್ಯಕ್ತಿ, ಸಹಕಾರಿ ಧುರಿಣ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ನಿಧನವು ಕಾಂಗ್ರೇಸ್ ಪಕ್ಷ ಹಾಗೂ ನಾಡಿಗೆ ತುಂಬಲಾರದ ಹಾನಿಯಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ ನ್ಯಾಮಗೌಡರ ಸಾವಿಗೆ ಕಂಬನಿ ಮಿಡಿದಿರುವ ದೇಶಪಾಂಡೆ ಜಮಖಂಡಿ ತಾಲೂಕಿನ ನೀರಾವರಿ ಉದ್ದೇಶಕ್ಕಾಗಿ ಕೃಷ್ಣಾ ನದಿಗೆ ಅಡ್ಡಲಾಗಿ ಚಿಕ್ಕ ಪಡಸಲಗಿ ಬ್ಯಾರೇಜ್ ನಿರ್ಮಿಸುವಲ್ಲಿ ಹಾಗೂ ಜಮಖಂಡಿ ತಾಲೂಕಾ ಕಚೇರಿಯನ್ನು ಸಂಸತ ಮಾದರಿಯಲ್ಲಿ ನಿರ್ಮಿಸಿರುವ ಸಿದ್ದು ಅವರ ಕಾರ್ಯ ಶ್ಲಾಘನೀಯವಾಗಿದ್ದು ರೈತಪರ ಕಾಳಜಿ ಹೊಂದಿದ್ದ ಅವರ ಅಕಾಲಿಕ ನಿಧನದ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದೇವರು ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.
Leave a Comment