ಹಳಿಯಾಳ :- ದೇವತೆಗಳು, ಸಾಧು- ಸಂತರು ಹಾಗೂ ರಾಷ್ಟ್ರಪುರುಷರಿಗೆ ಮಾಡುವ ಅಗೌರವ, ಅನಾದರವನ್ನು ನಿಲ್ಲಿಸುವುದಕ್ಕಾಗಿ ಬಲವಾದ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಸಮೀತಿಯವರು ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರದ ಗೃಹ ಮಂತ್ರಿಗಳಿಗೆ ಹಳಿಯಾಳ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಪಟ್ಟಣದ ಮಿನಿ ವಿಧಾನಸೌಧದ ಎದುರು ಹಿಂದೂ ಜನಜಾಗೃತಿ ಸಮೀತಿ, ವಿವಿಧ ಹಿಂದೂ ಸಂಘಟನೆಗಳು ಹಿಂದೂ ಆಂದೋಲನ ಸಮೀತಿ ನೇತೃತ್ವದಲ್ಲಿ ಸೇರಿ ಮನವಿಯನ್ನು ಸಲ್ಲಿಸಿದರು. ಮನವಿಯಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ಬಲಾತ್ಕಾರ ಮತ್ತು ಲೈಂಗಿಕ ಶೋಷಣೆಯ ಘಟನೆಗಳನ್ನು ನಿಲ್ಲಿಸಲು ಅಶ್ಲೀಲ ಜಾಲತಾಣಗಳ ಮೇಲೆ ಸಂಪೂರ್ಣ ನಿರ್ಬಂಧವನ್ನು ಹಾಕುವಂತೆ ಆಗ್ರಹಿಸಲಾಗಿದೆ. ಕೇಂದ್ರ ಶಾಸನವು ಬಲಾತ್ಕಾರಕ್ಕೆ ಸಂಬಂಧಪಟ್ಟ ಕಾಯ್ದೆಯಲ್ಲಿ ಬದಲಾವಣೆಯನ್ನು ಮಾಡಿ, 11 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಬಾಲಿಕೆಯರ ಮೇಲೆ ಬಲಾತ್ಕಾರ ನಡೆಸುವ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಮಹತ್ವಪೂರ್ಣ ಆದೇಶವನ್ನು ಜಾರಿಗೊಳಿಸಿದ್ದು ಇನ್ನೂ ಈ ವಿಧೆಯಕ ಮೇಲಿನ ಹಸ್ತಾಕ್ಷರವು ಹಸಿಯಾಗಿರುವಾಗಲೇ ಉತ್ತರ ಪ್ರದೇಶದ ಗಾಜಿಯಾಬಾದಿನ ಮದರಸಾದಲ್ಲಿ 11 ವರ್ಷದ ಹಿಂದೂ ಬಾಲಕಿಯ ಮೇಲೆ ಮತಾಂಧ ಮೌಲ್ವಿ ಹಾಗೂ ಅಪ್ರಾಪ್ತವಯಸ್ಸಿನ ಹುಡುಗರು ಸಾಮೂಹಿಕ ಬಲಾತ್ಕಾರ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು ಈ ರೀತಿಯ ಘಟನೆಗಳು ಈ ಹಿಂದೆ ಕೂಡ ಎಷ್ಟೋ ಸಲ ಬೆಳಕಿಗೆ ಬಂದಿವೆ ಹಾಗೂ ಬರುತ್ತಿವೆ. ಆದ್ದರಿಂದ ಇನ್ನಷ್ಟು ಕಠೋರ ಕಾಯಿದೆಗಳನ್ನು ಜಾರಿ ಮಾಡಿ ತತ್ಕ್ಷಣವೇ ಅವುಗಳ ವಿಚಾರಣೆ ನಡೆದು ಶಿಕ್ಷೆ ನೀಡುವಂತೆ ಆಗಬೇಕೆಂದಿರುವ ಅವರು ಅಶ್ಲೀಲ ಜಾಲತಾಣ (ಪೋರ್ನ ಸೈಟ್)ಗಳ ಮೇಲೆ ಕೂಡಲೇ ನಿರ್ಭಂದ ವಿಧಿಸುವಂತೆ ಆಗ್ರಹಿಸಲಾಗಿದೆ. ದೇವತೆಗಳು, ಸಂತರು ಹಾಗೂ ರಾಷ್ಟ್ರಪುರುಷರ ಅಗೌರವವನ್ನು ನಿಲ್ಲಿಸಲು ಕಠೋರ ಕಾನೂನನ್ನು ಜಾರಿಗೊಳಿಸುವಂತೆ ಒತ್ತಾಯಿಸಿರುವ ಪ್ರತಿಭಟನಾಕಾರರು ಇತ್ತೀಚೆಗೆ ಜನರ ಎದುರು ಬೇಕಂತಲೇ, ವಿಕೃತಿಯನ್ನು ಪ್ರಸ್ತುತ ಪಡಿಸುವುದು ಹಾಗೂ ಅದರಿಂದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಘಟನೆಗಳು ಅಲ್ಲದೇ ದೇವತೆಗಳ ಅನಾದರ ಮಾಡುವಂತಹ ಚಲನಚಿತ್ರಗಳು, ನಾಟಕಗಳನ್ನು ಮಾಡಲಾಗುತ್ತಿವೆ. ಇದೇ ಪ್ರಕಾರ ಚಿತ್ರ ಪ್ರದರ್ಶಿನಿ, ನಾಟಕಗಳು, ಸೋಶಿಯಲ್ ಮೀಡಿಯಾ ಮುಂತಾದವುಗಳಲ್ಲಿ ಆಗುತ್ತಿರುವ ಹಿಂದೂ ದೇವತೆಗಳ ಅಗೌರವದ ವಿರುದ್ಧ ಕ್ರಮವನ್ನು ಕೈಗೊಳ್ಳಲು ಯಾವುದೇ ಬಲವಾದ ಕಾನೂನು ಅಸ್ತಿತ್ವದಲ್ಲಿಲ್ಲ. ಇದರಿಂದಾಗಿ, ಈ ರೀತಿಯ ಅನಾದರದ ವಿರುದ್ಧ ಸೆನ್ಸಾರ್ ಬೋರ್ಡ್, ಸÀರ್ಕಾರ, ಪೋಲಿಸ್ ಪ್ರಶಾಸನದ ಬಳಿ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಸರ್ಕಾರವು ನಾಟಕ, ಚಲನಚಿತ್ರ, ಜಾಹೀರಾತುಗಳು, ಕಾವ್ಯ, ಚಿತ್ರ ಮುಂತಾದ ಮಾಧ್ಯಮಗಳಿಂದಾಗುತ್ತಿರುವ ಹಿಂದೂಧರ್ಮ, ಧರ್ಮಗ್ರಂಥ, ದೇವರು, ಸಂತರು ಹಾಗೂ ರಾಷ್ಟ್ರಪುರುಷರ ಅನಾದರವನ್ನು ತಡೆಯಲು ಶೀಘ್ರವಾಗಿ ಕಠೋರ ಕಾನೂನು ತರಬೇಕೆಂದು ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ವಿಠೋಬಾ ಮಾಳಸೇಕರ, ನಾರಾಯಣ ಪಾಠಣಕರ, ನಿಥಿನ ಡಾಂಗೆ, ಧರ್ಮರಾಜ ಪಾಟೀಲ,ವಿನೋದ ಗಿಂಡೆ, ಸಂತೋಷ ಬುಲಬುಲೆ, ಮೊಹಿನಿ ಹುಂದುರಕರ, ನಮ್ರತಾ ಪರಬ, ಗುರುದಾಸ ನಾಯ್ಕ ಇದ್ದರು.
Leave a Comment