ಹಳಿಯಾಳ;- ದಿ. 1ರಿಂದ 20-6-2018 ರವರೆಗೆ 14 ನೇ ಸುತ್ತಿನ ಕಾಲು ಮತ್ತು ಬಾಯಿ ಬೇನೆ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭವಾಗಿದ್ದು ಹಳಿಯಾಳ ತಾಲೂಕಿನಲ್ಲಿ ಒಟ್ಟೂ 49000 ಜಾನುವಾರುಗಳಿಗೆ ಮುನ್ನೇಚ್ಚರಿಕೆಯ ಕ್ರಮವಾಗಿ ಲಸಿಕೆ ಹಾಕಬೇಕಾಗಿದ್ದು ರೈತರು ಸಹಕರಿಸುವಂತೆ ಹಳಿಯಾಳ ಪಶು ಆಸ್ಪತ್ರೆಯ ಸಹಾಯಕ ನಿರ್ದೆಶಕರಾದ ಡಾ.ಬಿ.ಪಿ ಹಿರೇಮಠ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಈ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಒಟ್ಟೂ 39 ಸಿಬ್ಬಂದಿಗಳು/ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ನಿಗದಿತ ವೇಳಾ ಪಟ್ಟಿಯಂತೆ ಎಲ್ಲಾ ಗ್ರಾಮಗಳ ಮನೆಗಳಿಗೂ ಹಾಗೂ ದಡ್ಡಿಗಳಿಗೂ ಮುಂಜಾನೆ 7.00 ರಿಂದಲೆ ಭೇಟಿ ನೀಡಿ ಲಸಿಕೆಯನ್ನು ಹಾಕುತ್ತಾರೆ. ಆದ್ದರಿಂದ ಪ್ರತಿ ರೈತರು ಸದರೀ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ತಿಳಿಸಿದ್ದು ಜಾನುವಾರುಗಳಿಗೆ ಬರುವ ಈ ಭಯಾನಕ ಸಂಕ್ರಾಮಿಕ ರೋಗವನ್ನು ತಡೆಗಟ್ಟಿ ಈ ರಾಷ್ಟ್ರೀಯ ರೋಗ ನಿರ್ಮೂಲನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೊರಿದ್ದಾರೆ. ತೇರಗಾಂವ ಗ್ರಾಮದಲ್ಲಿ ಗ್ರಾಮ ಪಂಚಾಯತ ತೇರಗಾಂವ, ರೂಡಸೆಟ್ ಸಂಸ್ಥೆ ಹಳಿಯಾಳ ಇವರ ಸಹಯೋಗದಲ್ಲಿ ರೋಗ ನಿರ್ಮೂಲನಾ ಕಾರ್ಯಕ್ರಮ ಏರ್ಪಡಿಸಿದ್ದು, ಒಟ್ಟೂ 315 ಜಾನುವಾರುಗಳಿಗೆ ಕಾಲು & ಬಾಯಿ ಬೇನೆ ಲಸಿಕೆಯನ್ನು ಹಾಕಲಾಗಿದೆ. ಈ ಸಂದರ್ಭದಲ್ಲಿ ರೈತರಿಗೆ ಉಚಿತವಾಗಿ ಲವಣ ಮಿಶ್ರಣ ಜಂತುನಾಶಕ ಔಷಧಿಯನ್ನು ಹಾಗೂ ಮೇವಿನ ಬೀಜಗಳ ಮಿನಿಕಿಟ್ಗಳನ್ನು ವಿತರಿಸಲಾಯಿತು. ಉಕ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಲಕ್ಕನಗೌಡರ, ಎಸ್.ಸಿ.ಸಂಗೋಳ್ಳಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಕಿರಣ ಬಾಳೇಕುಂದ್ರ ಪ.ವೈ.ಪರೀಕ್ಷಕರು, ಗೀತಾ ದೊಡ್ಡಮನಿ, ವಿಷ್ಣು ಚಲವಾದಿ, ಲಕ್ಷ್ಮೀ ಹುಬ್ಬಳಕರ, ಉಮಾ, ರೂಡಸೆಟ್ ಸಂಸ್ಥೆಯ ವಿಷ್ಣು ಮಾಡಿವಾಳ ಲಸಿಕಾ ಕಾರ್ಯಕ್ರಮದಲ್ಲಿ ಇದ್ದರು.
Leave a Comment