ಹಳಿಯಾಳ : ರಕ್ತದಾನ ಶ್ರೇಷ್ಠ ದಾನ, ರಕ್ತದಾನದಿಂದ ಒಂದು ಜೀವ ಉಳಿಸಲು ಸಾಧ್ಯ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಕೊಡುವುದು ಶ್ರೇಷ್ಠ ಕೆಲಸವಾಗಿದೆ ಎಂದು ಹಳಿಯಾಳ ತಾಲೂಕ ಆಸ್ಪತ್ರೆಯ ವೈದ್ಯ ಡಾ. ಗುರುರಾಜ ಆಚಾರಿ ಹೇಳಿದರು. ಕೆನರಾ ಬ್ಯಾಂಕ ಮತ್ತು ವಿ.ಆರ್.ಡಿ.ಎಮ್ ಟ್ರಸ್ಟ ಪ್ರಾಯೋಜಿತ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಮುಂದಾಳತ್ವದಲ್ಲಿ ಸರಕಾರಿ ಆಸ್ಪತ್ರೆ ಹಳಿಯಾಳ, ಐ.ಎಮ್.ಎ ರಕ್ತ ಭಂಡಾರ ಶಿರಸಿ, ಮತ್ತು ಇ.ಐ.ಡಿ. ಪ್ಯಾರಿ ಶುಗರ್ಸ್ ಇಂಡಿಯಾ ಲಿ. ಹಳಿಯಾಳ ಇವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಸ್ಥೆಯ ನೀರ್ದೇಶಕ ನಿತ್ಯಾನಂದ ಆರ್.ವೈದ್ಯ, ಇ.ಐ.ಡಿ. ಪ್ಯಾರಿ ಶುಗರ್ಸ್ ಇಂಡಿಯಾದ ಎ.ಜಿ.ಎಮ್. ಎನ್.ಎಸ್.ಹೀರೆಮಠ ಮಾತನಾಡಿ ರಕ್ತದಾನ ಮಾಡುವುದರಿಂದ ಕೇವಲ ರಕ್ತ ಅವಶ್ಯಕವಿರುವವರ ಜೀವ ಉಳಿಸುವುದು ಮಾತ್ರವಲ್ಲ ರಕ್ತ ಕೊಡುವವರಿಗೆ ಹೊಸ ಜೀವಕೋಶಗಳು ಉತ್ಪತ್ತಿಯಾಗಲು ಸಹಾಯಕವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಇ.ಐ.ಡಿ. ಪ್ಯಾರಿ ಶುಗರ್ ಇಂಡಿಯಾದ ಲಕ್ಕಪ್ಪಾ ಜೈನ, ಐ.ಎಮ್.ಎ ರಕ್ತ ಭಂಡಾರ ಶಿರಸಿಯ ದರ್ಶನ ಭಂಡಾರಿ, ಉಪನ್ಯಾಸಕಿ ಶಾಂತಾ ಜಮಾದಾರ ಇದ್ದರು. ಸಂಸ್ಥೆಯ ಶಿಭಿರಾರ್ಥಿಗಳು, ಸಿಂಬಂದ್ದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂ ಪ್ರೇರಿತ ದಾನಿಗಳು ಭಾಗವಹಿಸಿ ಒಟ್ಟು 50 ಜನರು ರಕ್ತದಾನವನ್ನು ಮಾಡಿದರು. ಉಳವಯ್ಯಾ ಬೆಂಡಿಗೆರಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment