ಹಳಿಯಾಳ:- ಹಳಿಯಾಳ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕಳ್ಳತನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದಾಗಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಪೋಲಿಸ್ ಇಲಾಖೆ ಹೆಚ್ಚಿನ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಅಪರಾಧಿಗಳನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ತಹಶೀಲ್ದಾರ್ ಹಾಗೂ ಪೋಲಿಸ್ ಇಲಾಖೆ ಇಬ್ಬರಿಗೂ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಗುರುವಾರ ಇಲಾಖಾ ಕಚೇರಿಗಳಿಗೆ ತೆರಳಿ ಮನವಿ ಸಲ್ಲಿಸಿದ ಕರವೇ ಸಂಘಟನೆಯ ಕಾರ್ಯಕರ್ತರು ಕಳ್ಳತನ ಪ್ರಕರಣದ ಜೊತೆಗೆ ಜನರನ್ನು ಹಲ್ಲೆಗೊಳಪಡಿಸುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಇಂತಹ ಅಪರಾಧಗಳನ್ನು ತಡೆಯಲು ಸರಿಯಾದ ಹಾಗೂ ತ್ವರಿತವಾಗಿ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಸಾರ್ವಜನಿಕರ ಹಿತಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಕ್ಯಾಮರಾಗಳನ್ನು ಅಳವಡಿಸುವುದು. ರಾತ್ರಿಯ ವೇಳೆಯಲ್ಲಿ ಹೆಚ್ಚಿನ ಪೊಲೀಸ್ ಪೇದೆಗಳನ್ನು ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಚಂದ್ರಕಾಂತ ದುರ್ವೆ, ಮಹೇಶ ಆನೆಗುಂದಿ, ಶಿವಾನಂದ ಡಮ್ಮಣಗಿಮಠ, ಮಹೇಶ, ಮಂಜುನಾಥ ಹೊಂಡದಕಟ್ಟಿ, ಶಿವಾನಂದ ಶೆಟ್ಟಿ, ಸುಧಾಕರ ಕುಂಬಾರ, ಶ್ರೀಶೈಲ ಮಠದೇವರು, ಈರಯ್ಯಾ ಹೀರೆಮಠ, ಸಿ.ಬಿ. ಹಿರೇಮಠ, ವಿಜಯ ಪಡ್ನೀಸ್, ಕಾರ್ತಿಕ ಕಳ್ಳಿಮನಿ, ತುಕಾರಾಮ ಮಡಿವಾಳ, ಅಶೋಕ ಪಾಟೀಲ ಇದ್ದರು.
Leave a Comment