ಹಳಿಯಾಳ: ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್.ಘಟಕ, ದೇಶಪಾಂಡೆ ರುಡಸೆಟಿಯ ಸಹಯೋಗದೊಂದಿಗೆ ವಿಶ್ವ ಯೋಗದಿನವನ್ನು ಯಶಸ್ವಿಯಾಗಿ ಆಚರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಸ್ವಯಂ ಪ್ರೇರಿತರಾಗಿ ಯೋಗ ದಿನದಲ್ಲಿ ಪಾಲ್ಗೊಂಡಿದ್ದರು. ಪತಂಜಲಿ ಯೋಗ ಶಿಕ್ಷಕರಾದ ಈರಣ್ಣಾ ಕಾಜಗಾರ, ಯೋಗ ಶಿಕ್ಷಕರಾಗಿ ಯೋಗದ ಪರಿಚಯ ಮಾಡಿಕೊಟ್ಟು ಹಲವಾರು ಆಸನಗಳ ಬಗ್ಗೆ ತಿಳಿಸಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ನಿರ್ದೇಶಕ ನಿತ್ಯಾನಂದ ರೇವಣಕರ ಹಾಗೂ ಡಿ.ಪಿ.ಐ.ಟಿ.ಐ ಪ್ರಾಂಶುಪಾಲ ಡಿ.ಆರ್.ನಾಯ್ಕ, ಎನ್.ಎಸ್.ಎಸ್ ಅಧಿಕಾರಿಗಳಾದ ಡಿ.ಡಿ.ನಾಯ್ಕ ಇದ್ದರು
Leave a Comment