ಹಳಿಯಾಳ : ಪಟ್ಟಣದ 24*7 ಕುಡಿಯುವ ನೀರಿನ ಬಿಲ್ ಪಾವತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಶೌಚಾಲಯ ನಿರ್ಮಿಸಬೇಕು ಎಂದು ಜಯ ಕರ್ನಾಟಕ ಹಳಿಯಾಳ ತಾಲೂಕಾ ಸಂಘ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ. ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಕಾರ್ಯಕರ್ತರು ತಹಶೀಲ್ದಾರ್ ವಿದ್ಯಾಧರಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಸ್ವಚ್ಚತಾ ಅಭಿಯಾನದ ಶುಲ್ಕವನ್ನು ಕಡಿಮೆ ಮಾಡಬೇಕು, ನೀರಿನ ಬಿಲ್ ತುಂಬಲು ಪರದಾಡಬೇಕಾಗಿದ್ದು ಬ್ಯಾಂಕನಲ್ಲೂ ಕೂಡ ಇದೆ ಪರಿಸ್ಥಿತಿ ಇದ್ದು ಅವೈಜ್ಞಾನಿಕ ಶುಲ್ಕ ಪದ್ದತಿ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ. ಪಟ್ಟಣದ ಇತರ ಅಭಿವೃದ್ದಿ ಕಾರ್ಯಗಳಿಗೆ ಗೊಬ್ಬರದಿಂದ ಬರುವ ಮೊತ್ತವನ್ನು ಬಳಸಿಕೊಳ್ಳಬೇಕು. ಮೂಲಸೌಕರ್ಯಗಳ ಕೊರತೆಯಿಂದ ಸಾರ್ವಜನೀಕರು ತೀರಾ ತೊಂದರಗೆ ಒಳಗಾಗುತ್ತಿದ್ದು ಪಟ್ಟಣ ಬೆಳೆಯುತ್ತಿದ್ದರು ಸಾರ್ವಜನೀಕ ಶೌಚಾಲಯವಿಲ್ಲದೇ ಹೊರಗಡೆಯಿಂದ ಬರುವ ಜನರು ಸಂಕಷ್ಟ ಅನುಭವಿಸುತ್ತಿದ್ದು. ಕೂಡಲೇ ವನಶ್ರೀ ವೃತ್ತ, ಬಸ್ ನಿಲ್ದಾಣ ರಸ್ತೆ, ಯಲ್ಲಾಪೂರ ನಾಕೆ, ಸಂಗೋಳ್ಳಿ ರಾಯಣ್ಣ ವೃತ್ತ, ಸಿಂಡಿಕೇಟ ಬ್ಯಾಂಕ್, ತರಕಾರಿ ಮಾರುಕಟ್ಟೆ, ಪೋಲಿಸ್ ಠಾಣೆ, ಬಸವೇಶ್ವರ ವೃತ್ತದ ಸಮೀಪ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸುವಂತೆ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ವಿಲಾಸ ಕಣಗಲಿ, ಮುಖಂಡರಾದ ಶಿರಾಜ ಮುನವಳ್ಳಿ, ವಿಕ್ರಾಂತ ಶೆಟ್ಟಿ, ಕಿರಣ ಕಮ್ಮಾರ, ಸಿಕಂದರ, ವಿನಾಯಕ ಗಿಂಡೆ, ಗೋಪಿ ಮೇತ್ರಿ, ಗಣೇಶ ಗೊಸಪ್ಪ ಇತರರು ಇದ್ದರು.
Leave a Comment