ಹಳಿಯಾಳ: ಕಳೆದ ಒಂದು ವರ್ಷದಿಂದ ಪ್ರಗತಿಯಲ್ಲಿರುವ ಗ್ರಾಮ ಪಂಚಾಯತ ನೌಕರರ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದಿಂದ ಹಳಿಯಾಳ ತಾಪಂ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ತಾಲೂಕ ಪಂಚಾಯತ ಕಚೇರಿಗೆ ಆಗಮಿಸಿದ ಗ್ರಾಪಂ ನೌಕರರು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತರಾಜ್ ಇಲಾಖೆ ಕರ್ನಾಟಕ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಾಪಂ ಅಧಿಕಾರಿಗೆ ಸಲ್ಲಿಸಿದರು. ಮನವಿಯಲ್ಲಿ ಸರ್ಕಾರದ ಆದೇಶದಂತೆ 51,114 ನೌಕರರಿಗೆ ಸರ್ಕಾರದಿಂದ ಇಎಫ್ಎಂ ಎಸ್ ಮೂಲಕ ವೇತನ ಸಿಗುವಂ ತೆ ಕ್ರಮ ವಹಿಸಿಬೇಕು. ದಿ.5-6-2018ರಂದು ವಿಸಿಯಲ್ಲಿನ ನಿರ್ದೇಶನದಿಂದ ಗೊಂದಲವುಂಟಾಗಿದ್ದು ಸ್ವಚ್ಚತಾಗಾರರಿಗೆ 2ನೇ ಬಿಲ್ ಕಲೆಕ್ಟರ್ಗಳಿಗೆ, ಕ್ಲರ್ಕ, ಡಾಟಾ ಎಂಟ್ರಿ ಆಪರೇಟಗಳಿಗೆ ಆಗಿರುವ ತೊಂದರೆಯನ್ನು ನಿವಾರಿಸಬೇಕು. ಎಸ್ಎಸ್ಎಲ್ಸಿ ಪಾಸಾದ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್ಗಳಿಗೆ ಸಿಗುತ್ತಿದ್ದ ಗ್ರೇಡ್2 ಕಾರ್ಯದರ್ಶಿ ಬಡತಿಯನ್ನು ಪುನಃ ಸಿಗುವಂತೆ ಸೂಕ್ತ ಆದೇಶ ಹೊರಡಿಸಬೇಕು. ಗ್ರಾಮ ಪಂಚಾಯತಿ ನೌಕರರಿಗೆ ಪೆನ್ಷನ್, ವೈದ್ಯಕೀಯ ವೆಚ್ಚ, ಗ್ರಾಚ್ಯೂವಿಟಿಗಳು ಸಿಗುವಂತೆ ಕ್ರಮವಹಿಸಬೇಕು, ನಗರಾಭಿವೃದ್ದಿ ಇಲಾಖೆಯಲ್ಲಿರುವಂತೆ ಗ್ರಾಪಂ ನೌಕರರಿಗೆ ಸೇವಾ ನಿಯಮಾವಳಿ ರಚಿಸುದಕ್ಕೆ ಸೂಕ್ತ ಆದೇಶ ಹೊರಡಿಸಬೇಕು. 2011 ಜನಗಣತಿ ಆಧಾರದ ಮೇಲೆ ಗ್ರಾಮ ಪಂಚಾಯತಿಗಳು ಗ್ರೇಡ್2 ನಿಂದ ಗ್ರೇಡ್1 ಗೆ ಮೇಲ್ದರ್ಜೆಗೇರಿಸಬೇಕು ಹಾಗೂ ಅಪರ ಜಿಲ್ಲಾಧಿಕಾರಿಗಳಾಗಿದ್ದ ಎಂಎಸ್ ಸ್ವಾಮಿಯವರ ವರದಿಯ ಶಿಫಾರಸ್ಸಿನಂತೆ ಜನಸಂಖ್ಯೆಗೆ ಅನುಗುಣವಾಗಿ ಗ್ರಾಪಂಗಳ ಅವಶ್ಯಕತೆಗಳಿಗನುಗುಣವಾಗಿ ವಿವಿಧ ಹುದ್ದೆಗಳನ್ನು ಸೃಷ್ಠೀಸಬೇಕೆಂದು ಆಗ್ರಹಿಸಲಾಗಿದೆ. ಮನವಿ ಸಲ್ಲಿಸುವಾಗ ಪ್ರಕಾಶ ದೊಡ್ಮನಿ, ಪುಂಡ್ಲಿಕ ಮಿರಾಶಿ, ಟಿಎಮ್ ಗುರುಬಣ್ಣವರ, ಆರ್.ಎಮ್ ಮುಲ್ಲಾ, ಚಂದ್ರಕಾಂತ ಗೌಡಾ, ಮಾದೇವ ಗೊನಿ, ಮುಕ್ತುಂಸಾಬ ಗಡಾದ ಇತರರು ಇದ್ದರು.
Leave a Comment