ಹಳಿಯಾಳ: ಕಾಂಗ್ರೇಸ್ ಪಕ್ಷದ ಸರ್ಕಾರ ಸ್ಥಾಪನೆಯಾದಾಗ ಮರಾಠಾ ಸಮುದಾಯಕ್ಕೆ ಸಾಮಾಜೀಕ, ರಾಜಕೀಯ ಪ್ರಾತಿನಿಧ್ಯ ಈವರೆಗೆ ಸಿಕ್ಕಿಲ್ಲ ಕಾರಣ ಈಗಲಾದರೂ ಸಮ್ಮಿಶ್ರ ಸರ್ಕಾರದಲ್ಲಿ ಬಹುಸಂಖ್ಯಾತ ಮರಾಠಾ ಸಮುದಾಯದ ನಾಯಕ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ಆಗ್ರಹಿಸಿದೆ. ಈ ಕುರಿತು ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಪತ್ರ ರವಾನಿಸಿರುವ ಪರಿಷತ್ನವರು ಮರಾಠಾ ಸಮಾಜ ಸಿಂಹಪಾಲು ಇರುವ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 1983 ರಿಂದ ಇಲ್ಲಿಯವರೆಗೆ 8 ವಿಧಾನ ಸಭೆ ಚುನಾವಣೆಗಳಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಬೆಂಬಲಿಸಿ ಅವರನ್ನು ಆಯ್ಕೆ ಮಾಡಿದ್ದು, ಕ್ಷೇತ್ರದ ಅಭಿವೃದ್ದಿಗೆ ಸಚಿವ ಆರ್.ವಿ.ದೇಶಪಾಂಡೆ ಯವರಿಗೆ ಬೆನ್ನೆಲುಬಾಗಿ ನಿಂತಿರುವ ಹಾಗೂ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿರುವ ಮರಾಠಾ ಸಮುದಾಯದ ಹಿರಿಯ ವ್ಯಕ್ತಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಲೇಬೆಕೆಂದು ಮನವಿ ಮಾಡಲಾಗಿದೆ. ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಘೊಟ್ನೇಕರ ಅವರು ಕ್ಷೇತ್ರದ ಅಭೀವೃದ್ದಿಗೆ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸುತ್ತಿದ್ದು ಜಾತಿ ಭೇದವಿಲ್ಲದೇ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದು ಹಳಿಯಾಳ ಕ್ಷೇತ್ರ ಇನ್ನಷ್ಟು ಅಭಿವೃದ್ದಿ ಹೊಂದಬೇಕಾದರೇ ಹಾಗೂ ಮರಾಠ ಸಮುದಾಯಕ್ಕೆ ನ್ಯಾಯ ಒದಗಬೇಕಾದರೇ ಅವರಿಗೆ ನಿಗಮ ಮಂಡಳಿ ಅಥವಾ ಅಧ್ಯಕ್ಷಸ್ಥಾನ ನೀಡಬೆಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರನ್ನು ಆಗ್ರಹಿಸಿ ಪತ್ರ ಬರೆಯಲಾಗಿದೆ. ಹಳಿಯಾಳ ಕ್ಷತ್ರೀಯ ಮರಾಠ ಪರಿಷತ್ ಉಪಾಧ್ಯಕ್ಷೆ ಮಂಗಲಾ ಪಿತಾಂಬರ ಕಶೀಲಕರ, ಕಾರ್ಯದರ್ಶಿ ಬಿಪಿ ಶಹಾಪುರಕರ, ಎಲ್.ಎಸ್.ಅರಿಶೀನಗೇರಿ, ಎ.ಕೆ.ಪೂಜಾರಿ, ಯಲ್ಲಪ್ಪಾ ಮಾಲವನಕರ, ಗೊಕುಲ ಶಿರೊಡಕರ, ಶಂಕರ ಬೆಲಗಮಕರ, ಅನಿಲ ಚವ್ವಾಣ, ಉಡಚಪ್ಪಾ ಬೋಬಾಟಿ, ಆರ್.ಎಸ್.ಅರಿಶೀನಗೇರಿ ಅವರ ಸಹಿಯನ್ನು ಪತ್ರ ಒಳಗೊಂಡಿದೆ.
Leave a Comment