ಹಳಿಯಾಳ: ಕ್ಷೇತ್ರದಲ್ಲಿ 35ವರ್ಷಗಳಿಂದ ಅಧಿಕಾರ ಅನುಭವಿಸುತ್ತಿರುವ ಸಚಿವ ಆರ್.ವಿ.ದೇಶಪಾಂಡೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಡೆವಲಪ್ಮೆಂಟ್ ಪ್ರೋಗ್ರಾಮ್(ಕೆಡಿಪಿ) ಮಾಡದೆ ಪಬ್ಲಿಕ್ ಡೆವಲಪ್ಮೆಂಟ್ ಪ್ರೋಗ್ರಾಮ್(ಪಿಡಿಪಿ) ಮಾಡಿ ಕ್ಷೇತ್ರದ ಸಾರ್ವಜನೀಕರ ಕೆಲಸ ಮಾಡುವಂತೆ ಬಿಜೆಪಿ ಮುಖಂಡ ಮಾಜಿ ಶಾಸಕ ಸುನೀಲ್ ಹೆಗಡೆ ಸಚಿವ ದೇಶಪಾಂಡೆ ಅವರಿಗೆ ಸಲಹೆ ನೀಡಿದ್ದಾರೆ. ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಹೆಗಡೆ ಕ್ಷೇತ್ರದಲ್ಲಿ ದೇಶಪಾಂಡೆ ಅವರು ಕೆಡಿಪಿ ಸಭೆಗಳನ್ನು ಕೇವಲ ಕಾಮಗಾರಿ ಯಾರು ಗುತ್ತಿಗೆ ಪಡೆದಿದ್ದಾರೆ, ಯಾರು ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಡುತ್ತಾರೆ. ಸಾರ್ವಜನೀಕರಿಗೆ ಆಗುತ್ತಿರುವ ಸಮಸ್ಯೆಗಳು, ನೀರಿನ ತೊಂದರೆ, ರೈತರ, ಅಂಗನವಾಡಿಗಳ ಹೀಗೆ ಅನೇಕ ಸಮಸ್ಯೆಗಳ ಕುರಿತು ಚರ್ಚಿಸದೆ ಕೇವಲ ತಮ್ಮ ಪಕ್ಷದ ಕಾರ್ಯಕರ್ತರ ಅಭಿವೃದ್ದಿಗೆ ಕೆಡಿಪಿ ನಡೆಸುತ್ತಾರೆಂದು ಆರೋಪಿಸಿದರು. ಪಟ್ಟಣದಲ್ಲಿ ಇರುವ ಕಸಾಯಿಖಾನೆ(ಗೋ-ವಧಾಲಯ) ಹಾಗೂ ಎಲ್ಲೆಂದರಲ್ಲಿ ತಲೆ ಎತ್ತಿರುವ ಚಿಕನ್,ಮಟನ್ ಮಾಂಸದಂಗಡಿಗಳನ್ನು ಮುಚ್ಚುವಂತೆ ಪುರಸಭೆಗೆ ಬಿಜೆಪಿ ಘಟಕದವರು ಸಲ್ಲಿಸಿದ ಮನವಿಗೆ ಉತ್ತರಿಸಿರುವ ಪುರಸಭೆ ಮುಖ್ಯಾಧಿಕಾರಿಯವರು 24 ಜನರಿಗೆ ನೋಟಿಸ್ ನೀಡಿದ್ದು ಪುರಸಭೆಯ ಮೀನು ಮಾರುಕಟ್ಟೆ ಮಳಿಗೆ ಮೇಲೆ ನೂತನ ಸಂಕಿರ್ಣ ನೀರ್ಮಿಸಿ ಸಾರ್ವಜನೀಕ ಸ್ಥಳಗಳಲ್ಲಿರುವ ಈ ಅಂಗಡಿಗಳನ್ನು ಮುಚ್ಚುವ ಬಗ್ಗೆ ಹೇಳಿದ್ದು 15 ದಿನಗಳ ಗಡುವು ಕೇಳಿದ್ದು ಈ 15 ದಿನಗಳ ಒಳಗೆ ಪುರಸಭೆ ಕಾರ್ಯನಿರ್ವಹಿಸದೆ ಇದ್ದರೇ ಮತ್ತೇ ಬಿಜೆಪಿ ಪಕ್ಷದಿಂದ ಊಗ್ರ ಹೋರಾಟ ನಡೆಸಲಾಗುವುದು ಎಂದು ಸುನೀಲ್ ಎಚ್ಚರಿಕೆ ನೀಡಿದರು. ಕಾನೂನು ಬಾಹಿರವಾಗಿ ಪಟ್ಟಣದಲ್ಲಿ ನಡೆದಿರುವ ಗೋವಧಾಲಯ(ಕಸಾಯಿಖಾನೆ) ವನ್ನು ತಕ್ಷಣ ಮುಚ್ಚಬೇಕು ಹಾಗೂ ಹಳಿಯಾಳದ ಯಾವ ಭಾಗದಲ್ಲಿಯೂ ಕಸಾಯಿಖಾನೆ ತೆರೆಯಲು ತಮ್ಮಪ್ರಬಲ ವಿರೊಧವಿದೆ ಎಂದಿರುವ ಅವರು ಈ ಕುರಿತು ಆ ಭಾಗದ ಜನರೊಂದಿಗೆ ಶೀಘ್ರದಲ್ಲೇ ಪುರಸಭೆ ಎದುರು ಹೋರಾಟ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದ ಬಸ್ ನಿಲ್ದಾಣದ ಎದುರು ಗಟಾರವನ್ನು ಬಳಸಿ ನಿಯಮಗಳನ್ನು ಗಾಳಿಗೆ ತೂರಿ ಪುರಸಭೆಯವರು ನಿರ್ಮಿಸುತ್ತಿರುವ 14 ಅಂಗಡಿ ಮಳಿಗೆಗಳ ಬಗ್ಗೆ ಕಿಡಿಕಾರಿದ ಸುನೀಲ್ ಹೆಗಡೆ ಓರ್ವ ಬಡವ ಮನೆ ಕಟ್ಟುವಾಗ ಸಾಕಷ್ಟು ನಿಯಮಗಳನ್ನು ಹೇಳುವ ಪುರಸಭೆ ಈಗ ಗಟಾರವನ್ನು ಬಳಸಿಕೊಂಡು ಸಂಚಾರಕ್ಕೆ ತೊಂದರೆ ಮಾಡಿ ಕಾನೂನು ಬಾಹಿರವಾಗಿ ವಾಣಿಜ್ಯ ಮಳಿಗೆ ನಿರ್ಮೀಸಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ ಇದು ಕೇವಲ ಒರ್ವ ಪ್ರಭಾವಿ ಗುತ್ತಿಗೆದಾರನ ಮನವೊಲಿಸುವ ತಂತ್ರವಾಗಿದ್ದು ಈ ಬಗ್ಗೆ ಸಾರಿಗೆ ನಿಗಮಕ್ಕೆ, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದೆಂದರು. ಇನ್ನೂ ಸಿಎಮ್ ಎಚ್ಡಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಸಂಪೂರ್ಣ ಅವೈಜ್ಞಾನಿಕವಾಗಿದ್ದು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು, ಕಾಂಗ್ರೇಸ್ನ್ನು ಖುಷಿ ಪಡಿಸಿ ಅಧಿಕಾರದಲ್ಲಿ ಮುಂದುವರೆಯಲು ಸಾರ್ವಜನೀಕರ ಕಿಸೆಗೆ ಕತ್ತರಿ ಹಾಕಿ ಮಂಡಿಸಲಾಗಿರುವ ಬಜೆಟ್ಅನ್ನು ಹಾಗೂ ಪೆಟ್ರೋಲ್,ಡಿಸೆಲ್, ವಿದ್ಯುತ್ದರ ಹೆಚ್ಚಿಸಿದ್ದು ಈ ಆದೇಶ ಹಿಂಪಡೆಯದೆ ಇದ್ದರೇ ಜಿಲ್ಲಾದ್ಯಂತ ಊಗ್ರ ಹೋರಾಟ ನಡೆಸಲಾಗುವುದೆಂದರು. ಹಿಂದೂ ಸಮಾಜದ ಆರಾಧ್ಯ ದೈವ, ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರ ಪುಥ್ಥಳಿಗಳು ಕಳೆದ 4 ತಿಂಗಳಿನಿಂದ ರಸ್ತೆಯ ಮೇಲೆ ನಿಂತಿದ್ದು ಅವುಗಳ ಸ್ಥಾಪನೆಗೆ ಕಾಂಗ್ರೇಸ್ ನಾಯಕರು, ಸಚಿವರು ಹಾಗೂ ಅಧಿಕಾರಿಗಳ ತಡೆವೊಡ್ಡುತ್ತಿದ್ದಾರೆಂದು ಆರೋಪಿಸಿದ ಹೆಗಡೆ ಮುಂದಿನ 15 ದಿನಗಳಲ್ಲಿ ಪುಥ್ಥಳಿ ಸ್ಥಾಪನೆಗೆ ಅವಕಾಶ ನೀಡದೆ ಇದ್ದರೇ ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕುಗಳನ್ನೊಳಗೊಂಡು ರಸ್ತಾರೋಖೋ, ಉಪವಾಸ ಸತ್ಯಾಗ್ರಹ ಹಾಗೂ ಊಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ವಿಎಮ್ ಪಾಟೀಲ್, ಅನಿಲ ಮುತ್ನಾಳ್,ಎಸ್ಎ ಶೆಟವಣ್ಣವರ, ಸಂತಾನ ಸಾವಂತ, ವಿಜಯ ಬೋಬಾಟಿ, ಸಂತೋಷ ಘಟಕಾಂಬಳೆ, ಪ್ರದೀಪ ಹಿರೆಕರ, ಸಿದ್ದು ಶೆಟ್ಟಿ, ರಾಜು ಹಳ್ಳುಕರ ಇತರರು ಇದ್ದರು.
Leave a Comment