ಹಳಿಯಾಳ: ಶಿಕ್ಷಕರಿಗೆ ಕಾರ್ಯಗಾರಗಳನ್ನು ಮಾಡುವುದರಿಂದ ಶಿಕ್ಷಕರಲ್ಲಿ ವಿಷಯದ ಮೇಲೆ ಪ್ರಭುತ್ವ ಸಾಧಿಸಲು ಅನುಕೂಲವಾಗಿ ಹೊಸ ಪಠ್ಯದಲ್ಲಿ ಎದುರಾದ ಕ್ಲಿಷ್ಟಾಂಶಗಳನ್ನು ಪರಿಸಿಕೊಂಡು ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶಕ್ಕೆ ಈ ಕಾರ್ಯಗಾರಗಳು ಪೂರಕವಾಗುತ್ತವೆ ಎಂದು ಹಳಿಯಾಳ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹಮ್ಮದ್ ಮುಲ್ಲಾ ಅಭಿಪ್ರಾಯಪಟ್ಟರು. ಪಟ್ಟಣದ ಶಿವಾಜಿ ಪ್ರೌಢ ಶಾಲಾ ಸಭಾಭವನದಲ್ಲಿ ನಡೆದ ತಾಲೂಕಿನ ಕನ್ನಡ ಮತ್ತು ವಿಜ್ಞಾನ ಶಿಕ್ಷಕರಿಗೆ ಕಾರ್ಯಗಾರವನ್ನು ಗಿಡಕ್ಕೆ ನೀರೆರೆದು ಚಾಲನೆ ನೀಡಿ ಮಾತನಾಡಿದರು. ಉಪಪ್ರಾಂಶುಪಾಲರಾದ ವಿಷ್ಣು ನಾಯ್ಕ ಮಾತನಾಡಿ 2017-18 ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿಶತ ನೂರರಷ್ಟು ಫಲಿತಾಂಶ ಗಳಿಸಿದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯ ಶ್ಲಾಘನೀಯ, ಇದು ಶಿಕ್ಷಕರಿಗೆ ಇನ್ನೂ ಹೆಚ್ಚು ಕೆಲಸ ಮಾಡಲು ಸ್ಪೂರ್ತಿ ನೀಡಿದೆ ಎಂದರು. ಕನ್ನಡ ವಿಷಯದ ಸಂಘಟಕರಾದ ಕಾಳದಾಸ ಬಡಿಗೇರ ಕನ್ನಡ ವಿಷಯ ಕಾರ್ಯಗಾರದ ರೂಪರೇಷೆಗಳನ್ನ ಮತ್ತು ಮಲ್ಲಿಕಾರ್ಜುನ್ ರವರು ವಿಜ್ಞಾನ ವಿಷಯ ಕಾರ್ಯಗಾರದ ರೂಪರೇಷಗಳನ್ನ ತಿಳಿಸಿದರು. ಹಳಿಯಾಳ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವಿಠ್ಠಲ್ ಬೋರೆಕರ ಮಾತನಾಡಿದರು.ಶಿಕ್ಷಣ ಸಂಯೋಜಕ ಅರುಣ ನಾಯ್ಕ, ಶಿಕ್ಷಕಿ ವೀಣಾ ನಾಯ್ಕ, ಶಿಕ್ಷಕ ಸಿದ್ದಪ್ಪ ಬಿರಾದಾರ, ಸುಬ್ರಾಯ ಗೌಡಾ ಕಾರ್ಯಕ್ರಮ ನಿರ್ವಹಿಸಿದರು.
Leave a Comment