ಹಳಿಯಾಳ:- ಪಟ್ಟಣದ ದೇಶಪಾಂಡೆ ನಗರದ ಕರಿಯಮ್ಮ ದೇವಸ್ಥಾನದ ಹತ್ತಿರದ ಅಂಗನವಾಡಿಯ ಪಕ್ಕದಲ್ಲಿರುವ ಖುಲ್ಲಾ ಜಾಗ ವಿದ್ಯಾರ್ಥಿಗಳಿಗಾಗಿ ಮೀಸಲಿಡುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ. ಸಂಘಟನೆ ತಾಲೂಕಾಧ್ಯಕ್ಷ ವಿಲಾಸ ಕಣಗಲಿ ನೇತೃತ್ವದಲ್ಲಿ ಪುರಸಭೆಗೆ ಆಗಮಿಸಿ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರಿಗೆ ಮನವಿ ಸಲ್ಲಿಸಿದ ಅವರು ಹಳಿಯಾಳ ಪುರಸಭೆ ವ್ಯಾಪ್ತಿಯ ದೇಶಪಾಂಡೆ ನಗರದ 38/2 ಕರಿಯಮ್ಮ ಗುಡಿ ಹತ್ತಿರದÀ ಅಂಗನವಾಡಿ ಕೇಂದ್ರ ಪಕ್ಕದಲ್ಲಿ ಖುಲ್ಲಜಾಗೆ ಇದ್ದು ಇದನ್ನು ಇಷ್ಟು ದಿನ ಆ ಶಾಲೆಯ ಮಕ್ಕಳು ಕ್ರೀಡಾ ಚಟುವಟಿಕೆ, ಆಟ ಆಡಲು ಉಪಯೋಗಿಸುತ್ತಿದ್ದರು ಆದರೇ ಈಗ ಇಲ್ಲಿ ಪುರಸಭೆಯವರು ಮನೆಗಳನ್ನು ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಿರುವ ಸಂಘಟನೆಯವರು ಸದರ ಖುಲ್ಲಾ ಜಾಗೆಯನ್ನು ಅಂಗನವಾಡಿಗೆ ಉಪಯೋಗಿಸಲು ಅನುಕೂಲವಾಗಲು ಈ ಜಾಗೆಯನ್ನು ಮೀಸಲಿಡಬೇಕಾಗಿ ಆಗ್ರಹಿಸಿದ್ದಾರೆ. ಮನವಿ ಸಲ್ಲಿಸುವಾಗ ಸಂಜು ಚಲವಾದಿ, ವಿಶಾಲ ಕರ್ಜಗಿ, ನಾರಾಯಣ ಬೋವಿ, ಆನಂದ ಬೋವಿ, ನಿಯಾಜ ದಿಂಡಲಕೊಪ್ಪ, ಪಿರಾಜಿ ಮಾನೆ, ವಿನೋದ ಗಿಂಡೆ, ಸಿಕಂದರ ಮುಜಾವರ, ಗಣೇಶ ಗೋಸಪ್ಪನವರ ಇದ್ದರು.
Leave a Comment