ಹಳಿಯಾಳ: ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೇ ಇರ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಶುಕ್ರವಾರ ಸಾಯಂಕಾಲ ಗರಡೊಳ್ಳಿ ಗ್ರಾಮದ ಅಪಾಯಕಾರಿ ತೀರುವಿನಲ್ಲಿ ಸಂಭವಿಸಿದೆ. ಶುಕ್ರವಾರ ಅಮವಾಸ್ಯೆ ದಿವಸ ಕರಾಳ ದಿನವಾಗಿ ಪರಿಣಮಿಸಿದ್ದು ತಾಲೂಕಿನ ಬಡಾ ಕಾನಶೆರಡಾ ಗ್ರಾಮದ ನಾಮದೇವ ಕಳಸೆಕರ(35) ಬೈಕ್ ಅಪಘಾತದಲ್ಲಿ ಪ್ರಾಣತೆತ್ತಿದ್ದಾನೆ. ಇನ್ನೊರ್ವ ಬೈಕ್ಸವಾರ ಗಂಗಾರಾಮ ಮೊಗ್ರೆ ಇಬ್ಬರು ಶಾಲಾ ಮಕ್ಕಳನ್ನು ಕರೆದುಕೊಂಡು ಗ್ರಾಮಕ್ಕೆ ತೆರಳುತ್ತಿರುವಾಗ ಸಾಯಂಕಾಲ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಗಂಗಾರಾಮ ಹಾಗೂ ಇಬ್ಬರು ಶಾಲಾ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪಿಎಸ್ಐ ಆನಂದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Leave a Comment