.ಹಳಿಯಾಳ: ಹಳಿಯಾಳ ಕಾರ್ಯನೀರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಓರವಿಲ್ ಫರ್ನಾಂಡಿಸ್, ಉಪಾಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ಯೋಗರಾಜ ಎಸ್.ಕೆ. ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷೆ ಸುಮಂಗಲಾ ಚಂದ್ರಕಾಂತ ಅಂಗಡಿಯವರ ಪಟ್ಟಣದ ಕಾರ್ಯಾಲಯದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ವಿಜಯವಾಣಿ ಪತ್ರಿಕೆಯ ಓರವಿಲ್ ಅಧ್ಯಕ್ಷರಾಗಿ, ಉದಯವಾಣಿ ಪತ್ರಿಕೆಯ ಯೋಗರಾಜ ಶಿವಾಜಿ ಕರಾಂಡೆ ಉಪಾಧ್ಯಕ್ಷರಾಗಿ, ಪತ್ರಕರ್ತ ಮಂಜುನಾಥ ಶೇರಖಾನೆ ಖಜಾಂಚಿಯಾಗಿ, ಪ್ರಸಾದ ವಝೇ ಸಹ ಕಾರ್ಯದರ್ಶಿಯಾಗಿ, ಸಂತೋಷ ಹಬ್ಬು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸುಮಂಗಲಾ ಅಂಗಡಿ, ಬಿ.ಆರ್.ವಿಭೂತೆ, ಅರುಣ ನಾಯ್ಕ ಇದ್ದರು.
Leave a Comment