• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

14ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ ದೇಶದ 2ನೇ ಪ್ರತಿಷ್ಠಿತ ಹಳಿಯಾಳದ ಆರ್‍ಸೆಟ್ ಸಂಸ್ಥೆ ಆ.3ರಂದು ವಾರ್ಷಿಕ ವರದಿ ಬಿಡುಗಡೆಗೆ ಕ್ಷಣಗಣನೆ

August 2, 2018 by Yogaraj SK Leave a Comment

ಹಳಿಯಾಳ: ಈವರೆಗೆ 18,200ಕ್ಕೂ ಹೆಚ್ಚು ಯುವಕ,ಯುವತಿಯರಿಗೆ ವಿವಿಧ ಸ್ವ-ಉದ್ಯೋಗದ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಿ ಸ್ವಾವಲಂಬಿಗಳಾಗಿ ರೂಪಿಸಿ ತನ್ನ ಉತ್ತಮ ಕಾರ್ಯಯೋಜನೆಗಳ ಮೂಲಕ ಭಾರತ ದೇಶದಲ್ಲಿಯೇ 2ನೇ ಸ್ಥಾನದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯು 14ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿ 2004ನೇ ಸಾಲಿನಲ್ಲಿ ಪ್ರಾರಂಭವಾದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಇಲ್ಲಿಯವರೆಗೆ 18281 ಯುವಕ-ಯುವತಿಯರಿಗೆ ವಿವಿಧ ಸ್ವ-ಉದ್ಯೋಗದ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಿದೆ. ಅವರಲ್ಲಿ 13528 ಶಿಬಿರಾರ್ಥಿಗಳು ಸ್ವ-ಉದ್ಯೋಗ ಹಾಗೂ ವೇತನ ಆಧಾರಿತ ನೌಕರಿಯಲ್ಲಿ ನಿರತರಾಗಿದ್ದಾರೆ. ಸುಮಾರು 5713 ಶಿಬಿರಾರ್ಥಿಗಳು ವಿವಿಧ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯವನ್ನು ಪಡೆದು ಸ್ವ-ಉದ್ಯೋಗ ಪ್ರಾರಂಭಿಸಿದ್ದಾರೆ.   ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಭಾಗಿತ್ವ:- ಸಂಸ್ಥೆಯು ವಿನೂತನ ತರಬೇತಿಗಳನ್ನು ಆಯೋಜಿಸಲು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಟಾಟಾ ಮೋಟರ್ಸ ಸಹಯೋಗದೊಂದಿಗೆ ದಾಂಡೇಲಿಯಲ್ಲಿ ಕೌಶಲ್ಯ ಲಘು ವಾಹನಾ ಚಾಲನಾ ತರಬೇತಿ ಕೇಂದ್ರ. ಟಾಟಾ ಹಿಟಾಚಿ ಮತ್ತು ಕನಸ್ಟøಕ್ಸನ್ಸ್ ಮಶಿನರಿ ಕಂ. ಲಿಮಿಟೆಡ್ ಹಾಗೂ ಜೆ.ಸಿ.ಬಿ ಕಂಪನಿಯೊಂದಿಗೆ ಜೆ.ಸಿ.ಬಿ ಆಪರೇಟರ್ ತರಬೇತಿ. ಅಟೋಮೊಬೈಲ್ ಉದ್ಯಮದಲ್ಲಿ ಅವಕಾಶಗಳನ್ನು ಗುರುತಿಸಿ ಅಟೋಮೊಬೈಲ್ ಸೇಲ್ಸ್ ಎಕ್ಸಿಕ್ಯೂಟಿವ್ ತರಬೇತಿಯನ್ನು ಶೋಧಾ ಟೊಯೊಟಾ ಸಂಸ್ಥೆಯೊಂದಿಗೆ ಸಂಘಟಿಸುತ್ತಿದೆ. ಪ್ರತಿಷ್ಠಿತ ಟ್ರ್ಯಾಕ್ಟರ್ ಕಂಪನಿಗಳಾದ ಹೆಚ.ಎಂ.ಟಿ., ನ್ಯೂ ಹಾಲೆಂಡ್, ಮಹೀಂದ್ರಾ, ಸೋನಾಲಿಕಾ ಇವರುಗಳ ಸಹಕಾರದೊಂದಿಗೆ ಟ್ರ್ಯಾಕ್ಟರ್ ರಿಪೇರ್ ತರಬೇತಿಗಳನ್ನೂ ಆಯೋಜಿಸುತ್ತಿದ್ದು ಯಶಸ್ಸು ಕಾಣುತ್ತಿದೆ. ಪ್ರಶಸ್ತಿಗಳು:- ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದಡಿಯಲ್ಲಿ ನಡೆಸಲ್ಪಡುವ ‘ಆರ್‍ಸೆಟಿ ದಿವಸ’ ಕಾರ್ಯಕ್ರಮದಲ್ಲಿ ವಿರೇಂದ್ರ ಹೆಗ್ಗಡೆಯವರು ಹಾಗೂ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಸಚಿವರ ಸಮ್ಮುಖದಲ್ಲಿ ಸತತವಾಗಿ  2013-14, 2014-15, 2015-16 ಹಾಗೂ 2016-17 ಸಾಲಿಗೆ ರಾಷ್ಟ್ರ ಮಟ್ಟದಲ್ಲಿಯೇ ‘ಎಎ’ ಗ್ರೇಡ್ ಸಾಧನೆಯನ್ನು ತನ್ನದಾಗಿಸಿಕೊಂಡಿದೆ.  2013-14 ರಲ್ಲಿ ದ್ವಿತೀಯ ಸ್ಥಾನ, 2014-15 ರಲ್ಲಿ ರಾಷ್ಟ್ರ ಮಟ್ಟದಲ್ಲಿಯೇ ಎಲ್ಲ ಆರ್‍ಸೆಟಿ ಗಳಿಗಿಂತ ಮುಂಚೂಣೆಯಲ್ಲಿ ಕಾರ್ಯ ಸಾಧಿಸಿ ಪ್ರಥಮ ಸ್ಥಾನ ಪಡೆದಿದೆ. 2016-17 ಸಾಲಿನಲ್ಲ್ಲಿ ‘ಉತ್ತಮ ಕಾರ್ಯನಿರ್ವಹಣೆಗಾಗಿ’ ದೇಶದಲ್ಲಯೇ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.  ಹೀಗೆ ಯಶಸ್ಸಿನ ಉತ್ತುಂಗದಲ್ಲಿರುವ ಸಂಸ್ಥೆಯು 14ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು ಆಗಸ್ಟ್ 3ರಂದು ವಿಡಿಐಟಿ ಸಭಾಭವನದಲ್ಲಿ ವಾರ್ಷಿಕ ವರದಿ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಸಲು ಸಿದ್ದತೆಗಳನ್ನ ನಡೆಸಿದೆ.  ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಸೆಲ್ಕೋ ಫೌಂಡೇಶನ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಹರೀಶ್ ಹಂದೆ ನೆರವೇರಿಸಲಿದ್ದಾರೆ. ಸಂಸ್ಥೆಯ ಛೇರಮನ್ ಹಾಗೂ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ, ವಿ.ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್, ಕೆನರಾ ಬ್ಯಾಂಕ್ ವೃತದ್ತ ಕಛೇರಿ ಮಂಗಳೂರಿನ ಡಿಜಿಎಮ್ ವಿ. ರಾಮಚಂದ್ರ ಹಾಗೂ ಸಿಬಿಡಿ ಆರ್‍ಸೆಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್ ದೇಶಪಾಂಡೆ ಸೇರಿದಂತೆ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಸಂಸ್ಥೆಯ ನಿರ್ದೇಶಕರಾದ ನಿತ್ಯಾನಂದ ವೈದ್ಯ ತಿಳಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 14ನೇ ವರ್ಷಾಚರಣೆಯ ಸಂಭ್ರಮ, 18, 200ಕ್ಕೂ, ಅಟೋಮೊಬೈಲ್ ಉದ್ಯಮ, ಅಭಿವೃದ್ಧಿ ಸಚಿವರ ಸಮ್ಮುಖ, ಆ.3ರಂದು ವಾರ್ಷಿಕ ವರದಿ ಬಿಡುಗಡೆಗೆ, ಉದ್ಯೋಗ ಹಾಗೂ ವೇತನ ಆಧಾರಿತ ನೌಕರಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ, ಕೇಂದ್ರ ಸರಕಾರದ ಗ್ರಾಮೀಣ, ಕೌಶಲ್ಯ ಅಭಿವೃದ್ಧಿ ತರಬೇತಿ, ಕೌಶಲ್ಯ ಲಘು ವಾಹನಾ ಚಾಲನಾ ತರಬೇತಿ ಕೇಂದ್ರ. ಟಾಟಾ ಹಿಟಾಚಿ., ಕ್ಷಣಗಣನೆ, ಟಾಟಾ ಮೋಟರ್ಸ ಸಹಯೋಗ, ಟ್ರ್ಯಾಕ್ಟರ್ ರಿಪೇರ್ ತರಬೇತಿ, ದೇಶದ 2ನೇ ಪ್ರತಿಷ್ಠಿತ, ನ್ಯೂ ಹಾಲೆಂಡ್, ಪಟ್ಟಣದ ಉದ್ಯೋಗ ವಿದ್ಯಾನಗರ, ಪ್ರತಿಷ್ಠಿತ ಟ್ರ್ಯಾಕ್ಟರ್ ಕಂಪನಿಗಳಾದ, ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ, ಮಹೀಂದ್ರಾ, ಯುವಕ, ಯುವತಿಯರಿಗೆ ವಿವಿಧ ಸ್ವ-ಉದ್ಯೋಗ, ವಿರೇಂದ್ರ ಹೆಗ್ಗಡೆಯವರು, ವಿವಿಧ, ಶಿಬಿರಾರ್ಥಿಗಳು, ಸಹಕಾರದೊಂದಿಗೆ, ಸೋನಾಲಿಕಾ, ಸ್ವ-ಉದ್ಯೋಗ ಪ್ರಾರಂಭಿಸಿ, ಹಳಿಯಾಳದ ಆರ್‍ಸೆಟ್ ಸಂಸ್ಥೆ, ಹೆಚ.ಎಂ.ಟಿ., ಹೆಚ್ಚು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar