ಹಳಿಯಾಳ: ಈವರೆಗೆ 18,200ಕ್ಕೂ ಹೆಚ್ಚು ಯುವಕ,ಯುವತಿಯರಿಗೆ ವಿವಿಧ ಸ್ವ-ಉದ್ಯೋಗದ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಿ ಸ್ವಾವಲಂಬಿಗಳಾಗಿ ರೂಪಿಸಿ ತನ್ನ ಉತ್ತಮ ಕಾರ್ಯಯೋಜನೆಗಳ ಮೂಲಕ ಭಾರತ ದೇಶದಲ್ಲಿಯೇ 2ನೇ ಸ್ಥಾನದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯು 14ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿ 2004ನೇ ಸಾಲಿನಲ್ಲಿ ಪ್ರಾರಂಭವಾದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಇಲ್ಲಿಯವರೆಗೆ 18281 ಯುವಕ-ಯುವತಿಯರಿಗೆ ವಿವಿಧ ಸ್ವ-ಉದ್ಯೋಗದ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಿದೆ. ಅವರಲ್ಲಿ 13528 ಶಿಬಿರಾರ್ಥಿಗಳು ಸ್ವ-ಉದ್ಯೋಗ ಹಾಗೂ ವೇತನ ಆಧಾರಿತ ನೌಕರಿಯಲ್ಲಿ ನಿರತರಾಗಿದ್ದಾರೆ. ಸುಮಾರು 5713 ಶಿಬಿರಾರ್ಥಿಗಳು ವಿವಿಧ ಬ್ಯಾಂಕ್ಗಳಿಂದ ಸಾಲ ಸೌಲಭ್ಯವನ್ನು ಪಡೆದು ಸ್ವ-ಉದ್ಯೋಗ ಪ್ರಾರಂಭಿಸಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಭಾಗಿತ್ವ:- ಸಂಸ್ಥೆಯು ವಿನೂತನ ತರಬೇತಿಗಳನ್ನು ಆಯೋಜಿಸಲು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಟಾಟಾ ಮೋಟರ್ಸ ಸಹಯೋಗದೊಂದಿಗೆ ದಾಂಡೇಲಿಯಲ್ಲಿ ಕೌಶಲ್ಯ ಲಘು ವಾಹನಾ ಚಾಲನಾ ತರಬೇತಿ ಕೇಂದ್ರ. ಟಾಟಾ ಹಿಟಾಚಿ ಮತ್ತು ಕನಸ್ಟøಕ್ಸನ್ಸ್ ಮಶಿನರಿ ಕಂ. ಲಿಮಿಟೆಡ್ ಹಾಗೂ ಜೆ.ಸಿ.ಬಿ ಕಂಪನಿಯೊಂದಿಗೆ ಜೆ.ಸಿ.ಬಿ ಆಪರೇಟರ್ ತರಬೇತಿ. ಅಟೋಮೊಬೈಲ್ ಉದ್ಯಮದಲ್ಲಿ ಅವಕಾಶಗಳನ್ನು ಗುರುತಿಸಿ ಅಟೋಮೊಬೈಲ್ ಸೇಲ್ಸ್ ಎಕ್ಸಿಕ್ಯೂಟಿವ್ ತರಬೇತಿಯನ್ನು ಶೋಧಾ ಟೊಯೊಟಾ ಸಂಸ್ಥೆಯೊಂದಿಗೆ ಸಂಘಟಿಸುತ್ತಿದೆ. ಪ್ರತಿಷ್ಠಿತ ಟ್ರ್ಯಾಕ್ಟರ್ ಕಂಪನಿಗಳಾದ ಹೆಚ.ಎಂ.ಟಿ., ನ್ಯೂ ಹಾಲೆಂಡ್, ಮಹೀಂದ್ರಾ, ಸೋನಾಲಿಕಾ ಇವರುಗಳ ಸಹಕಾರದೊಂದಿಗೆ ಟ್ರ್ಯಾಕ್ಟರ್ ರಿಪೇರ್ ತರಬೇತಿಗಳನ್ನೂ ಆಯೋಜಿಸುತ್ತಿದ್ದು ಯಶಸ್ಸು ಕಾಣುತ್ತಿದೆ. ಪ್ರಶಸ್ತಿಗಳು:- ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದಡಿಯಲ್ಲಿ ನಡೆಸಲ್ಪಡುವ ‘ಆರ್ಸೆಟಿ ದಿವಸ’ ಕಾರ್ಯಕ್ರಮದಲ್ಲಿ ವಿರೇಂದ್ರ ಹೆಗ್ಗಡೆಯವರು ಹಾಗೂ ಕೇಂದ್ರ ಸರಕಾರದ ಗ್ರಾಮೀಣ ಅಭಿವೃದ್ಧಿ ಸಚಿವರ ಸಮ್ಮುಖದಲ್ಲಿ ಸತತವಾಗಿ 2013-14, 2014-15, 2015-16 ಹಾಗೂ 2016-17 ಸಾಲಿಗೆ ರಾಷ್ಟ್ರ ಮಟ್ಟದಲ್ಲಿಯೇ ‘ಎಎ’ ಗ್ರೇಡ್ ಸಾಧನೆಯನ್ನು ತನ್ನದಾಗಿಸಿಕೊಂಡಿದೆ. 2013-14 ರಲ್ಲಿ ದ್ವಿತೀಯ ಸ್ಥಾನ, 2014-15 ರಲ್ಲಿ ರಾಷ್ಟ್ರ ಮಟ್ಟದಲ್ಲಿಯೇ ಎಲ್ಲ ಆರ್ಸೆಟಿ ಗಳಿಗಿಂತ ಮುಂಚೂಣೆಯಲ್ಲಿ ಕಾರ್ಯ ಸಾಧಿಸಿ ಪ್ರಥಮ ಸ್ಥಾನ ಪಡೆದಿದೆ. 2016-17 ಸಾಲಿನಲ್ಲ್ಲಿ ‘ಉತ್ತಮ ಕಾರ್ಯನಿರ್ವಹಣೆಗಾಗಿ’ ದೇಶದಲ್ಲಯೇ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಹೀಗೆ ಯಶಸ್ಸಿನ ಉತ್ತುಂಗದಲ್ಲಿರುವ ಸಂಸ್ಥೆಯು 14ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು ಆಗಸ್ಟ್ 3ರಂದು ವಿಡಿಐಟಿ ಸಭಾಭವನದಲ್ಲಿ ವಾರ್ಷಿಕ ವರದಿ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಸಲು ಸಿದ್ದತೆಗಳನ್ನ ನಡೆಸಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಸೆಲ್ಕೋ ಫೌಂಡೇಶನ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಹರೀಶ್ ಹಂದೆ ನೆರವೇರಿಸಲಿದ್ದಾರೆ. ಸಂಸ್ಥೆಯ ಛೇರಮನ್ ಹಾಗೂ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ, ವಿ.ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್, ಕೆನರಾ ಬ್ಯಾಂಕ್ ವೃತದ್ತ ಕಛೇರಿ ಮಂಗಳೂರಿನ ಡಿಜಿಎಮ್ ವಿ. ರಾಮಚಂದ್ರ ಹಾಗೂ ಸಿಬಿಡಿ ಆರ್ಸೆಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್ ದೇಶಪಾಂಡೆ ಸೇರಿದಂತೆ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಸಂಸ್ಥೆಯ ನಿರ್ದೇಶಕರಾದ ನಿತ್ಯಾನಂದ ವೈದ್ಯ ತಿಳಿಸಿದ್ದಾರೆ.
Leave a Comment