• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದ ಸಿಬಿಡಿ ಆರ್‍ಸೆಟ್ ಸಂಸ್ಥೆಯ 14ನೇ ವಾರ್ಷಿಕ ವರದಿ ಬಿಡುಗಡೆ ಸಂಸ್ಥೆಯ ಸಾಧನೆಗಳ ಬಗ್ಗೆ ಶ್ಲಾಘಣೆ –ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲು ಸಲಹೆ

August 3, 2018 by Yogaraj SK Leave a Comment

ಹಳಿಯಾಳ: ದೇಶಕ್ಕೆ ಐಐಎಮ್ ನ ಕೊಡುಗೆ ಅಂತಹ ಮಟ್ಟದಲ್ಲಿ ಇಲ್ಲ ಬದಲಾಗಿ ಎನ್.ಜಿ.ಓ, ಓದ್ಯೋಗಿಕ ತರಬೇತಿ ಕೇಂದ್ರಗಳು, ಆವಿಷ್ಕಾರ, ಸಂಶೋಧನೆ ಕೇಂದ್ರಗಳು ಹಾಗೂ ರುಡಸೆಟ್‍ನಂತಹ ಸಂಸ್ಥೆಗಳಿಂದ ಗ್ರಾಮೀಣ ಮಟ್ಟದಿಂದ ದೇಶ ಅಭಿವೃದ್ದಿ ಸಾಧಿಸುತ್ತಿದ್ದು, ಕೌಶಲ್ಯ ಆಧಾರಿತ ಶಿಕ್ಷಣವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಖ್ಯಾತ ಸೆಲ್ಕೊ ಇಂಡಿಯಾ ಸಿಇಓ ಡಾ.ಹರೀಶ ಹಂದೆ ಅಭಿಪ್ರಾಯಪಟ್ಟರು.  ಪಟ್ಟಣದ ಕೆಎಲ್‍ಎಸ್ ಮಹಾವಿದ್ಯಾಲಯದಲ್ಲಿ ನಡೆದ  ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯ 14ನೇ ವರ್ಷಾಚರಣೆಯ, ವಾರ್ಷಿಕ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ವಾರ್ಷಿಕ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.  ಜಗತ್ತು ತಾಂತ್ರಿಕತೆಯೆಡೆಗೆ ವಾಲುತ್ತಿದ್ದು ತಂತ್ರಾಂಶ ಅಭಿವೃದ್ದಿಯಿಂದ ಜಗತ್ತಿನ ವಿದ್ಯಮಾನಗಳು ಅಂಗೈಯಲ್ಲಿ ದೊರೆಯುತ್ತಿವೆ. ಹೆಚ್ಚೆಚ್ಚಾಗಿ ಆವಿಷ್ಕಾರ, ಸಂಶೋಧನೆ ಹಾಗೂ ಜ್ಞಾನ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.  ಕಾರ್ಯಕ್ರಮ ಉಧ್ಘಾಟಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾರತ ದೇಶ ಎಲ್ಲ ಹಂತದಲ್ಲಿ ಪ್ರಗತಿ ಹೊಂದುತ್ತಿದೆ ಆದರೇ ಉದ್ಯೋಗ ಸಮಸ್ಯೆ ದೇಶದ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿದ್ದು, ಉದ್ಯೋಗ ಸಮಸ್ಯೆ ನಿವಾರಣೆಗೆ ರುಡಸೆಟ್‍ನಂತಹ ಸಂಸ್ಥೆಗಳು ಹಾಗೂ ಸರ್ಕಾರಗಳು ನೂತನ ಕಾರ್ಯಯೋಜನೆಗಳನ್ನು ರೂಪಿಸುತ್ತಿವೆ.  ತರಬೇತಿ ಬಳಿಕ ಉದ್ಯೋಗ ಸಿಗಬೇಕು ಇಲ್ಲವೇ ಸ್ವಯಂ ಉದ್ಯೋಗ ಪ್ರಾರಂಭಿಸಬೇಕು ಆ ನಿಟ್ಟಿನಲ್ಲಿ ಕುಶಲಕರ್ಮಿ, ಕೌಶಲ್ಯ ಆಧಾರಿತ ತರಬೇತಿ ನೀಡುವ ಮೂಲಕ ಗ್ರಾಮೀಣ ಮಟ್ಟದಿಂದ ಉದ್ಯೋಗ ಸೃಷ್ಠಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.  ಕೆನರಾ ಬ್ಯಾಂಕ್ ವೃತ್ತ ಕಛೇರಿ ಮಂಗಳೂರಿನ ಡಿಜಿಎಮ್ ವಿ. ರಾಮಚಂದ್ರ ಹಾಗೂ ಎಜಿಎಮ್ ಬಿ.ಪಾಶ್ವನಾಥ ಮಾತನಾಡಿ ಬಡತನ ಮತ್ತು ನಿರುದ್ಯೋಗ ದೇಶದ ಪೆಡಂಭೂತವಾಗಿದೆ. ಯುವ ಶಕ್ತಿಯ ಸರಿಯಾದ ಸದ್ಬಳಕೆ ಮಾಡಿಕೊಂಡು ಹಳ್ಳಿಗಳನ್ನು ಅಭಿವೃದ್ದಿ ಪಡಿಸಿದರೇ ದೇಶದ ಅಭಿವೃದ್ದಿ ಸಾಧ್ಯ ಎಂದು ಹೇಳಿ  ರುಡಸೆಟ್ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೆನರಾಬ್ಯಾಂಕ್ ಸಿಎಸ್‍ಆರ್ ಅನುದಾನದಡಿ ಪ್ರತಿ ವರ್ಷ 100 ರಿಂದ 200ಕೊಟಿ ಸಾಮಾಜಿಕ ಕಾರ್ಯಗಳಿಗೆ ನೀಡುತ್ತಿದೆ ಎಂದರು. ಹಳಿಯಾಳದ ಸಿಬಿಡಿ ಆರ್‍ಸೆಟ್ ದೇಶದಲ್ಲೇ 2ನೇ ಸ್ಥಾನಗಳಿಸಿರುವುದು ಶ್ಲಾಘನೀಯ ಸಂಗತಿ ಮುಂದೆ ಇನ್ನು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.   ಆರ್‍ಸೆಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್ ದೇಶಪಾಂಡೆ ಸಂಸ್ಥೆಯು ನಡೆದು ಬಂದ ಹಾದಿಯ ಬಗ್ಗೆ ವಿವರಿಸಿ ಈವರೆಗೆ 18ಸಾವಿರಕ್ಕೂ ಹೆಚ್ಚು ಯುವಕ,ಯುವತಿಯರಿಗೆ ಸ್ವಾವಲಂಬಿಗಳಾಗಿ ರೂಪಿಸಿರುವ ರುಡಸೆಟ್ ಸಂಸ್ಥೆ ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡಲು ಉತ್ಸುಕವಾಗಿದೆ ಎಂದರು.  ಕಾರ್ಯಕ್ರಮದಲ್ಲಿ ಸಂಸ್ಥೆಯ ಅರ್ಧವಾರ್ಷಿಕ ವಾರ್ತಾಪತ್ರಿಕೆ ‘ಕೌಶಲ್ಯ’ವನ್ನು ಅನಾವರಣಗೊಳಿಸಲಾಯಿತು. ಯಶಸ್ವಿ 5 ಸ್ವಸಹಯ ಗುಂಪುಗಳನ್ನು,  ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧೆನೆಗೈದ ವಿದ್ಯಾರ್ಥಿಗಳನ್ನು ಹಾಗೂ ಕೆಲವು ಸಾಧಕರನ್ನು  ಗಣ್ಯರು ಗೌರವಿಸಿ ಸತ್ಕರಿಸಿದರು.  ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ, ಶ್ಯಾಮ ಕಾಮತ, ಕೆನರಾ ಬ್ಯಾಂಕ್ ಬೆಳಗಾವಿ ಎಜಿಎಮ್ ಕೃಷ್ಣಾ ಕುಲಕರ್ಣಿ, ಆರ್‍ಸೆಟ್ ರಾಜ್ಯ ನಿರ್ದೇಶಕ ರಾಮಕೃಷ್ಣ ಮಾನೆ, ಹಿರಿಯ ಅಧಿಕಾರಿ ಅನಂತಯ್ಯಾ ಆಚಾರಿ, ನಬಾರ್ಡ ಜಿಲ್ಲಾ ಅಧಿಕಾರಿ ಯೋಗೇಶ ಎಸ್‍ಎಲ್ ಮೊದಲಾದ ಗಣ್ಯರು ಇದ್ದರು.

watermarked DSC8527 1 watermarked DSC8546 watermarked DSC8584 watermarked DSC8586 watermarked DSC8587 watermarked DSC8606 watermarked DSC8619

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 14ನೇ ವಾರ್ಷಿಕ ವರದಿ ಬಿಡುಗಡೆ, ಆವಿಷ್ಕಾರ, ಕುಶಲಕರ್ಮಿ, ಕೇಂದ್ರಗಳು, ಕೌಶಲ್ಯ ಆಧಾರಿತ ತರಬೇತಿ, ಜಗತ್ತು ತಾಂತ್ರಿಕತೆ, ಪ್ರಾಮುಖ್ಯತೆ ನೀಡಲು ಸಲಹೆ, ಬಗ್ಗೆ ಶ್ಲಾಘಣೆ –ಕೌಶಲ್ಯ ಆಧಾರಿತ ಶಿಕ್ಷಣ, ಬೆಂಗಳೂರಿನ ಖ್ಯಾತ ಸೆಲ್ಕೊ ಇಂಡಿಯಾ ಸಿಇಓ, ಸಂಶೋಧನೆ ಕೇಂದ್ರಗಳು ಹಾಗೂ ರುಡಸೆಟ್‍ನಂತಹ ಸಂಸ್ಥೆ, ಸಂಸ್ಥೆಯ ಸಾಧನೆ, ಹಳಿಯಾಳದ ಸಿಬಿಡಿ ಆರ್‍ಸೆಟ್ ಸಂಸ್ಥೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...