ಹಳಿಯಾಳ: ತಾಲೂಕಿನ ಚಿಬ್ಬಲಗೇರಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವೈಜ್ಞಾನಿಕ ನಾಟಕ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿರಸಿಯ ಆವೆಮೇರಿಯಾ ಹಿರಿಯ ಪ್ರಾಥಮಿಕ ಶಾಲಾ ಸಭಾ ಭವನದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ವೈಜ್ಞಾನಿಕ ನಾಟಕ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ “ಅರಿವು” ಎಂಬ ಪರಿಸರ ಸಂರಕ್ಷಣೆಯ ಕುರಿತಾದ ನಾಟಕವನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹಮ್ಮದ ಮುಲ್ಲಾ ಮತ್ತು ಎಸ್ಡಿಎಮ್ಸಿ ಅಧ್ಯಕ್ಷ ಭೀಮಪ್ಪ ಚೌಗಲಾ ಹಾಗೂ ಎಸ್ಡಿಎಮ್ಸಿಯ ಎಲ್ಲ ಸದಸ್ಯರು, ಶಾಲಾ ಮುಖ್ಯ ಶಿಕ್ಷಕ ಮೋಹನ ಶೆಟ್ಟಿ, ಸಂಘಟಕ ಸಿದ್ದಪ್ಪ ಬಿರಾದಾರ ಶಿಕ್ಷಕಿ ಕಾಮಾಕ್ಷಿ ನಾಯ್ಕ, ಶಿಕ್ಷಕರಾದ ನಾರಾಯಣ ಬಾಬ್ರಿ, ಉದಾಜಿರಾವ್ ಮೋಹಿತೆ, ಮಾರ್ಗದರ್ಶಕರಾದ ಗಣೇಶ ದಿವಾಕರ , ನಾಟಕದ ರಚನೆ ಮತ್ತು ನಿರ್ಧೇಶನ ಮಾಡಿದ ಮಕ್ಕಳ ರಂಗ ನಿರ್ದೇಶಕಿ ಸುನಂದಾ ನಿಂಬನಗೌಡರು, ಸಿಬ್ಬಂಧಿ ವೀರೇಶ ಕಿತ್ತೂರ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.
Leave a Comment