ಹಳಿಯಾಳ:- ಐವರು ಯುವಕರನ್ನೊಳಗೊಂಡ ತಂಡ ಹಳಿಯಾಳ ಪಟ್ಟಣದಲ್ಲಿ ಕೊಡುಗು-ಮಡಿಕೇರಿ ನೇರೆ ಸಂತ್ರಸ್ಥರಿಗೆ ಸಹಾಯಾರ್ಥವಾಗಿ ಪರಿಹಾರ ನಿಧಿ ಸಂಗ್ರಹಿಸಿ ತಾಲೂಕಾಡಳಿತಕ್ಕೆ ಒಪ್ಪಿಸಿ ಮಾನವೀಯತೆ ಮೆರೆದಿದೆ.
ಹಳಿಯಾಳದ ದಲಿತ ಮುಖಂಡ ಅಣ್ಣಪ್ಪಾ ವಡ್ಡರ, ರವಿ ವಡ್ಡರ, ಗೃಹ ರಕ್ಷಕ ದಳದ ಸಿಬ್ಬಂದಿ ಕಲ್ಲಪ್ಪಾ ಕದಂ, ಸಮಾಜ ಸೇವಕರಾದ ನಸ್ರುಲ್ಲಾಖಾನ್, ಸನಾವುಲ್ಲಾ ಚಿಗರಿ, ಪ್ರಕಾಶ ಗಿರಿ ಸಾರ್ವಜನೀಕರಿಂದ ಪರಿಹಾರ ಸಂಗ್ರಹಿಸಿ ಪರಿಹಾರ ನಿಧಿಯ ಹುಂಡಿಯನ್ನು ನೇರವಾಗಿ ತಾಲೂಕಾಡಳಿತಕ್ಕೆ ಒಪ್ಪಿಸಿದರು.
ಪರಿಹಾರ ನಿಧಿಯಲ್ಲಿ 17ಸಾವಿರ ರೂ. ಸಂಗ್ರಹವಾಗಿತ್ತು. ಇದನ್ನು ಸ್ವೀಕರಿಸಿದ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ಹಣ ರವಾನಿಸಲಾಗುವುದು ಎಂದು ತಿಳಿಸಿದರು.
ತಾಲೂಕಾಡಳಿತದ ನೇತೃತ್ವದಲ್ಲಿ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು-ಸಂಘಟನೆಗಳು, ವಿವಿಧ ಇಲಾಖೆಗಳು, ಸಾರ್ವಜನೀಕರನ್ನೊಳಗೊಂಡು ಮಂಗಳವಾರ ಬೆಳಿಗ್ಗೆ ಹಳಿಯಾಳದ ಮಿನಿ ವಿಧಾನಸೌಧದಿಂದ ಕೊಡುಗು-ಮಡಿಕೇರಿ ನೆರೆ ಸಂತ್ರಸ್ಥರಿಗಾಗಿ ಪಟ್ಟಣದಲ್ಲಿ ಪರಿಹಾರ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಲ್ಲರೂ ಸಹಕರಿಸುವಂತೆ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ವಿನಂತಿಸಿದ್ದಾರೆ.
Leave a Comment