ಹಳಿಯಾಳ: ಛಾಯಾಗ್ರಾಹಣವನ್ನು ಕೇವಲ ಒಂದು ಹವ್ಯಾಸವನ್ನಾಗಿಸದೆ ಒಂದು ಉದ್ಯೋಗವನ್ನಾಗಿ ಪರಿಗಣಿಸಿದರೆ ಜೀವನದಲ್ಲಿ ಯಶಸ್ವಿಯಾಗಬಹುದು ಎಂದು ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ಆರ್. ವೈದ್ಯ ಅಭಿಪ್ರಾಯಪಟ್ಟರು.
ಆರ್ಸೆಟಿಯಲ್ಲಿ ನಡೆದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.
ಆರ್ಸೆಟಿಯಲ್ಲಿ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ ಪಡೆದು ಯಶಸ್ವಿ ಫೋಟೋಗ್ರಾಫರ್ಗಳಾಗಿರುವÀ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಅಜಯ್ಕುಮಾರ್, ಗೋಪಾಲ್ ಹಾಗೂ ಶಂಕರ್ ಅವರು ತಮ್ಮ ಯಶಸ್ಸಿನ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಕೆಂಪಣ್ಣಾ ಶೇಗುಣಶಿ, ತರಬೇತಿ ಸಹಾಯಕ ಮಂಜುನಾಥ್ ಲಕಮನಹಳ್ಳಿ, ಅತಿಥಿ ಉಪನ್ಯಾಸಕರಾದ ನಾಗರಾಜ ದಶಮಾನಿ, ನಂಜುಂಡಸ್ವಾಮಿ ಮತ್ತು ದಯಾನಂದ ಹಾಗೂ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು ಇದ್ದರು.
Leave a Comment