ಹಳಿಯಾಳ :- ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆಗಸ್ಟ್ 23 ಮತ್ತು 24 ರಂದು ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆಂದು ಅವರ ಆಪ್ತಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
23ರ ಬೆಳಿಗ್ಗೆ 8ಗಂಟೆಗೆ ಬಾಗಲಕೋಟೆ, ಮಧ್ಯಾಹ್ನ1ಕ್ಕೆ ವಿಜಯಪುರ, ಸಂಜೆ5ಗಂಟೆಗೆ ಯಾದಗಿರಿಗೆ ಹಾಗೂ 24ರಂದು ಬೆಳಿಗ್ಗೆ 9ಗಂಟೆ ಕಲಬುರಗಿ, ಮಧ್ಯಾಹ್ನ2 ಗಂಟೆ ಬೀದರ್ಗೆ ಭೇಟಿ ನೀಡಲಿರುವ ಸಚಿವರು, ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಹಾನಿ ಮತ್ತು ಕೈಗೊಂಡ ಪರಿಹಾರ ಕ್ರಮಗಳ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆಂದು ತಿಳಿಸಲಾಗಿದೆ.
ಬಕ್ರೀದ್ ಶುಭಾಶಯ :- ಬಕ್ರೀದ್ ಹಬ್ಬವು ಮುಸ್ಲಿಂ ಬಾಂಧವರಿಗೆ ಜೀವನದಲ್ಲಿ ಸುಖ-ಶಾಂತಿ, ಸಮೃದ್ದಿಯನ್ನು ನೀಡಲಿ ಹಾಗೂ ನಾಡಿನಲ್ಲಿ ಶಾಂತಿ-ಸೌಹಾರ್ದ ಸ್ಥಾಪನೆಗೆ ಮುನ್ನಡಿಯಾಗಲಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಬಕ್ರೀದ್ ಹಬ್ಬಕ್ಕೆ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೊರಿದ್ದಾರೆ.
Leave a Comment