ಹಳಿಯಾಳ: ಹಳಿಯಾಳ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಬಾಂದವರು ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದನ್ನು ಅತ್ಯಂತ ಅರ್ಥಪೂರ್ಣ ಹಾಗೂ ಸರಳವಾಗಿ ಆಚರಿಸಿದರು.
ಹಬ್ಬದ ಪ್ರಾರ್ಥನೆಯ ಬಳಿಕ ಮುಸ್ಲಿಂ ಬಾಂಧವರು, ಪ್ರಕೃತಿ ವಿಕೋಪಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಕೇರಳಾ ಹಾಗೂ ಕೊಡಗಿನ ಜನರ ಸಲುವಾಗಿ ವಿಷೇಶ ಪ್ರಾರ್ಥನೆ ಸಲ್ಲಿಸಿದರು.
ಹಬ್ಬವನ್ನು ಸರಳವಾಗಿ ಆಚರಿಸಿದ ಜನರು ಸಂತ್ರಸ್ಥರ ಪರಿಹಾರ ನಿಧಿಗೆ 5000ರೂಗಳನ್ನು ಮಸ್ಜಿದ –ಎ-ಫಾರೂಕಿನ ಸದಸ್ಯರು ಒಟ್ಟು ಗೂಡಿಸಿ ತಹಶೀಲ್ದಾರ್ ವಿದ್ಯಾಧರ ಗುಳಿಗುಳಿ ಅವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಸೀದೆ ಅದ್ಯಕ್ಷರಾದ ಹಿಂಬ್ರಾನ ಕೆಎಂ ಅಬ್ದುಲ್ಲಾ, ಮೆಹಬೂಬಸುಬಾನಿ ಜಾಂಬೋಟಿ, ಮೌಲಾಲಿ ಎಂ ಬಡಗಿ, ನಯೀಮುದ್ದೀನ ಮುಜಾವರ, , ಮೆಹಬೂಬಸಾಬ ಅರಳಿಕಟ್ಟಿ , ಮದನಸಾಬ ಸೈಯದ ಇದ್ದರು.
Leave a Comment