ಹೊನ್ನಾವರ:
ಭಟ್ಕಳ ಬಸ್ ನಿಲ್ದಾಣದ ನಂತರ ಹೊನ್ನಾವರದ ಬಸ್ ನಿಲ್ದಾಣದ ಸ್ಥಿತಿ ಎದುರಾದಂತೆ ಕಾಣುತ್ತಿದೆ. ಶನಿವಾರ ಮಧ್ಯಾಹ್ನದ ಸಮಯದಲ್ಲಿ ಬಸ್ ನಿಲ್ದಾಣದ ಬಲಬದಿಯ ಗೋಡೆ ಬಿರುಕೊಂಡ ಪರಿಣಾಮ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಸದಾ ಸುದ್ದಿಯಲ್ಲಿರುತ್ತಿದ್ದ ಹೊನ್ನಾವರ ಬಸ್ ನಿಲ್ದಾಣ ಇದೀಗ ಮತ್ತೊಂದು ಅವಘಡಕ್ಕೆ ಕಾರಣವಾಗುವುದರಲ್ಲಿ ಬಚಾವಾಗಿದೆ, ಪ್ರತಿನಿತ್ಯ ರಾಜ್ಯ ಹೊರರಾಜ್ಯದಿಂದ ನೂರಾರು ಸಂಖ್ಯೆಯ ಸಾರಿಗೆ ಬಸ್ಸುಗಳು ಹೊನ್ನಾವರ ಬಸ್ ನಿಲ್ದಾಣಕ್ಕೆ ಬರುತ್ತದೆ, ಸಾವಿರಾರು ಸಂಖ್ಯೆಯ ಸಾರ್ವಜನಿಕರು ವಿದ್ಯಾರ್ಥಿಗಳು ಭೇಟಿ ನೀಡುವ ಈ ನಿಲ್ದಾನವು ಸುರಕ್ಷೀತವಾಗಿಲ್ಲ ಎನ್ನುವುದು ಇಂದು ನಡೆದ ಈ ಘಟನೆಯೆ ಸಾಕ್ಷಿಯಾಗಿದೆ. 40 ವರ್ಷಗಳ ಹಿಂದಿನ ಹಳೆಯ ಬಸ್ ನಿಲ್ದಾಣ ಇಂದು ಕುಸಿಯುವ ಮೂಲಕ ಜಿಲ್ಲೆಯ ಎರಡನೇ ಬಸ್ ನಿಲ್ದಾಣ ಒಂದೇ ವರ್ಷದ ಅವಧಿಯಲ್ಲಿ ಕುಸಿದು ಬಿದ್ದ ಅಪಕಿರ್ತಿಗೆ ಕಾರಣವಾಯಿತು. ಬಸ್ನಿಲ್ದಾಣದ ಬಲಬದಿಯ ಗೋಡೆಯ ಅರ್ಧ ಭಾಗಕುಸಿದು ಬಿದ್ದು ಆ ಬಾಗದ ಗೊಡೆ ಬಿರುಕು ಬಿಟ್ಟಿತ್ತು. ತಕ್ಷಣ ಸ್ಥಳಕ್ಕಾಗಿಮಿಸಿದ ಹೊನ್ನಾವರ ಪೋಲಿಸರು ಮಕ್ರಮವಾಗಿ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಬ್ಯಾರಿಕೆಡ್ ತಂದು ನಿಲ್ಲಿಸಿದ್ದಾರೆ.
ವಿಷಯ ತಿಳಿದ ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಬಸ್ ನಿಲ್ದಾಣದ ಗೋಡೆ ಬಿರುಕು ಬಿಟ್ಟ ಸ್ತಳವನ್ನು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂಧರ್ಬದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಈ ಬಗ್ಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ತಿಲಈಸಿದರು. ಮುಂಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಿಸಲು ರೂಪುರೇಷೆ ತಯಾರಿಸುವ ಬಗ್ಗೆ ಹೇಳಿದರು.ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಕುಡಿಯುವ ನೀರಿನ ಘಟಕದ ಸುತ್ತಮುತ್ತಲೂ ಮರಳು ತುಂಬಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಅದನ್ನು ಕೂಡಾ ಮುಂದಿನ ದಿನದಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ನಂತರ ಮದ್ಯಾಹ್ನ 2 ಗಂಟೆಯ ನಂತರ ಕುಸಿಯುವ ಭೀತಿಯಲ್ಲಿದ್ದ ಕಟ್ಟಡವನ್ನು ತೆರವುಗೊಳಿಸಿದರು
Leave a Comment