ಹಳಿಯಾಳ: ಈ ಹಿಂದಿನ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಹಳಿಯಾಳ ಪಟ್ಟಣ ಅಭಿವೃದ್ದಿಗಾಗಿ ಸಚಿವ ಆರ್.ವಿ.ದೇಶಪಾಂಡೆ ಅವರು ನೂರಾರು ಕೋಟಿ ರೂ. ಅನುದಾನದ ಹೊಳೆಯನ್ನೇ ಹರಿಸಿ, ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು. ಈ ಅಭಿವೃದ್ದಿ ಕಾರ್ಯಗಳೇ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಬಹುಮತಗಳಿಂದ ಗೆಲ್ಲಿಸಿ ಮತ್ತೇ ಹಳಿಯಾಳ ಪುರಸಭೆ ಆಡಳಿತದ ಚುಕ್ಕಾಣಿ ಕಾಂಗ್ರೇಸ್ ಪಕ್ಷ ಹಿಡಿಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಅಭಿವೃದ್ದಿಯ ಸುವರ್ಣ ಯುಗವೇ ಈ 5 ವರ್ಷಗಳ ಅವಧಿಯಲ್ಲಿ ನಡೆದಿದೆ. 24*7 ಕುಡಿಯುವ ನೀರು, ಜಿ ಪ್ಲಸ್ ಟೂ ಮನೆಗಳ ನಿರ್ಮಾಣಕ್ಕೆ ಚಾಲನೆ ಸೇರಿದಂತೆ ಅನೇಕ ಮಹತ್ವದ ಯೋಜನೆಗಳು ಜಾರಿಗೊಂಡಿದೆ ಅಲ್ಲದೇ ಸಾಕಷ್ಟು ಮೂಲಭೂತ ಸೌಕರ್ಯಗಳು ಪಟ್ಟಣವನ್ನು ಅಭಿವೃದ್ದಿಪಥದತ್ತ ಕೊಂಡೊಯ್ದಿರುವುದು ಕಾಂಗ್ರೇಸ್ ಆಡಳಿತ ಮಂಡಳಿ ಉತ್ತಮ ಸೇವೆ ಸಲ್ಲಿಸಿರುವುದನ್ನು ಜನತೆ ಅರಿತಿದ್ದಾರೆ. ಅಭಿವೃದ್ದಿ ಕಾರ್ಯಗಳನ್ನು ಅವರು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
ಆದರೇ ಕಾಂಗ್ರೇಸ್ ಪಕ್ಷದ ಸಾಧನೆಯನ್ನು ಸಹಿಸಲಾಗದ ಬಿಜೆಪಿಯ ಮಾಜಿ ಶಾಸಕ ಸುನೀಲ್ ಹೆಗಡೆ ಇಲ್ಲ ಸಲ್ಲದ ವ್ಯರ್ಥ ಆರೋಪಗಳನ್ನು ಮಾಡುತ್ತಾ ಬರಿ ಸುಳ್ಳು ಹೇಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಅವರು ಶಾಸಕರಿದ್ದ ಅವಧಿಯಲ್ಲಿ ಹಳಿಯಾಳ-ದಾಂಡೇಲಿ ಎರಡೂ ಸ್ಥಳೀಯ ಸಂಸ್ಥೆಗಳಲ್ಲಿ ಅವರದೇ ಪಕ್ಷ ಆಡಳಿತದಲ್ಲಿತ್ತು ಆ ಸಂದರ್ಭದಲ್ಲಿ ಏನು ಅಭಿವೃದ್ದಿ ಸಾಧಿಸಿದ್ದಾರೆ ಎಂಬುದನ್ನು ಜನತೆಯ ಮುಂದಿಡಲಿ ಎಂದು ಘೊಟ್ನೇಕರ ಸವಾಲ್ ಹಾಕಿದರು.
ಹಳಿಯಾಳ ಪುರಸಭೆಯ 23 ವಾರ್ಡಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದ ಘೊಟ್ನೇಕರ ಈಗಾಗಲೇ ಸಾಕಷ್ಟು ಪ್ರಚಾರ ಕಾರ್ಯ ನಡೆಸಲಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದ್ದು ಹಳಿಯಾಳ ಪುರಸಭೆಯ ಗದ್ದುಗೆಯಲ್ಲಿ ಮತ್ತೇ ಕಾಂಗ್ರೇಸ್ ಪಕ್ಷವೇ ಕುಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಪುರಸಭೆ ಮಾಜಿ ಅಧ್ಯಕ್ಷ ಶಂಕರ ಬೆಳಗಾಂವಕರ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಕುರಿತು ಪ್ರತಿಕ್ರಿಯೇ ನೀಡಿದ ಅವರು ಪಕ್ಷದ ಹೈಕಮಾಂಡ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವುದು ಖಚಿತ ಎಂದರು. ಇನ್ನೂ ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಿಗೆ ಅನಾರೋಗ್ಯವೇ ಹೆಚ್ಚು ಕಾಡುತ್ತಿದ್ದು ಅವರು ಜಿಲ್ಲಾಧ್ಯಕ್ಷರಿಗೆ ಬಂಡಾಯ ಅಭ್ಯರ್ಥಿ ಬಗ್ಗೆ ದೂರು ನೀಡಿರುವ ಬಗ್ಗೆ ತಿಳಿಸಿದ್ದಾರೆಂದ ಘೋಟ್ನೇಕರ ಹಳಿಯಾಳ ಪುರಸಭೆಯ ಜನಪ್ರತಿನಿಧಿಗಳ ವಿರುದ್ದ ಮಾಜಿ ಶಾಸಕ ಇತ್ತೀಚೆಗೆ ತುಚ್ಯವಾಗಿ ಮಾತನಾಡಿದ್ದು ಸರಿಯಲ್ಲ ಅವರು ತಮ್ಮ ನಾಲಿಗೆಯ ಮೇಲೆ ಹಿಡಿತಸಾಧಿಸಲಿ ಹಾಗೂ ಭ್ರಷ್ಟಾಚಾರಿಗಳು ಯಾರು ಎಂಬುದನ್ನು ಅವರೇ ತಿಳಿದುಕೊಳ್ಳಲಿ. ನಾವು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ ಚುನಾವಣೆಯಲ್ಲಿ ಜನತೆಯೇ ತೀರ್ಪು ನೀಡಲಿದ್ದಾರೆಂದರು.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಶಿವಪುತ್ರ ನುಚ್ಚಂಬ್ಲಿ, ಎಲ್ಎಸ್ ಅರಿಶೀನಗೇರಿ, ಪ್ರಕಾಶ ಕಿತ್ತೂರ, ಅನಿಲ ಚವ್ವಾಣ, ಫಾರುಕ ಬಾಳೆಕುಂದ್ರಿ ಇದ್ದರು.
Leave a Comment