ಹಳಿಯಾಳ:-
ದಾಂಡೇಲಿಯಲ್ಲಿ ಪ್ರಾರಂಭವಾಗುತ್ತಿರುವ ಕೌಶಲ್ಯಾಭಿವೃದ್ಧಿ ಸಂಸ್ಥೆಯಿಂದ ಮುಂಬರುವ ದಿನಗಳಲ್ಲಿ ಹಳಿಯಾಳ-ದಾಂಡೇಲಿ ಭಾಗದ ಚಿತ್ರಣವೇ ಬದಲಾಗಲಿದ್ದು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಬರಲಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ವಿದ್ಯಾರ್ಜನೆಯ ಸಮಯದಲ್ಲಿ ಸಹಾಯ ಸಹಕಾರ ನೀಡಿದವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಧರ್ಮಾಧಿಕಾರಿ ಪ್ರಸಾದ ಆರ್. ದೇಶಪಾಂಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ಬೆಂಗಳೂರಿನ ಲರ್ನಿಂಗ್ ಸೊಸೈಟಿ ಸಹಕಾರದೊಂದಿಗೆ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನಿಂದ ನಡೆದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡುತ್ತಾ ಕೆನರಾ ಬ್ಯಾಂಕ್ ದೇಶಪಾಂಡೆ ರುಡ್ಸೆಟಿ ಸಂಸ್ಥೇಯಿಂದ ಇದುವರೆಗೂ ಸಾವಿರಾರು ನಿರುದ್ಯೋಗಿಗಳಿಗೆ ಹಾಗೂ ಶಾಲೆ ತೊರೆದವರಿಗೆ ಸ್ವ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಬದುಕಲು ದಾರಿ ಮಾಡಿಕೊಟ್ಟಿದೆ ಎಂದರು.
ವಿ.ವಿ.ಡಿ.ಸ್ಕೂಲ್ ಆಪ್ ಎಕ್ಸೆಲೆನ್ಸ ನ ಪ್ರಾಂಶುಪಾಲ ಚಂದ್ರಗೌಡ ಬಿ.ಪಾಟೀಲ ಮಾತನಾಡಿ ಈಗಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ದಾನಿಗಳು ನೀಡುವ ವಿದ್ಯಾರ್ಥಿವೇತನವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದರು.
ಹಳಿಯಾಳ -ದಾಂಡೇಲಿ, ಜೋಯಿಡಾದ ಬಿ.ಎ., ಬಿ.ಎಸ್ಸಿ, ಬಿ.ಎಡ್, ಜನರಲ್ ನರ್ಸಿಂಗ್, ಡಿಪ್ಲೋಮಾ, ಜಿ.ಟಿ.& ಟಿ.ಸಿ., ಎಮ್.ಎಸ್ಸಿ., ಎಮ್.ಎಸ್.ಡಬ್ಲ್ಯೂ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ 60 ವಿದ್ಯಾರ್ಥಿಗಳಿಗೆ ತಲಾ ರೂ.10000/- ದಂತೆ ರೂ.6,00,000/- (ರೂಪಾಯಿ ಆರು ಲಕ್ಷಗಳು) ಗಳನ್ನು ನೀಡಲಾಯಿತು.
ವೇದಿಕೆಯಲ್ಲಿ ಡಿಐವಿಟಿಯ ಸಂಸ್ಥೆಯ ಪ್ರಾಂಶುಪಾಲ ದಿನೇಶ ಆರ್. ನಾಯ್ಕ, ಕೆಂಪಣ್ಣ ಸೇಗುಣಸಿ ಇದ್ದರು. ರುಡ್ಸೆಟಿ ಶಿಭಿರಾರ್ಥಿಗಳಾದ ಸಂಜನಾ, ಶಿಲ್ಪಾ ಹಾಗೂ ಕಾಶೀನಾಥ ಬಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment