ಹಳಿಯಾಳ:-
ಸಂಗೋಳ್ಳಿ ರಾಯಣ್ಣ ವೃತ್ತದ ಬಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿಯ ವಾರ್ಡ ನಂ.2ರ ಮತಗಟ್ಟೆ ಸಂಖ್ಯೆ-2 ರಲ್ಲಿ ಉ.ಕ. ಜಿಲ್ಲಾ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ತಮ್ಮ ಪರಿವಾರದೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಮತದಾನದ ಬಳಿಕ ಮಾತನಾಡಿದ ಘೋಟ್ನೇಕರ ಹಳಿಯಾಳ ಪುರಸಭೆ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಇಲ್ಲಿ ಕಾಂಗ್ರೇಸ್ ಪಕ್ಷ 23 ವಾರ್ಡಗಳಲ್ಲಿ ಜಯಭೇರಿ ದಾಖಲಿಸಿ ಇತಿಹಾಸ ಸೃಷ್ಠಿಸಲಿದೆ. ಹಳಿಯಾಳವನ್ನು ಮಾದರಿ ಪಟ್ಟಣ ಮಾಡುವುದೇ ಸಚಿವ ಆರ್.ವಿ.ದೇಶಪಾಂಡೆಯವರ ಗುರಿಯಾಗಿದ್ದು ಮತ್ತೇ ನಾವೇ ಅಧಿಕಾರಕ್ಕೆ ಬರುತ್ತೇವೆಂದು ಭವಿಷ್ಯ ನುಡಿದರು.
Leave a Comment