ಹಳಿಯಾಳ: ಹಳಿಯಾಳ ಪುರಸಭೆಯಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿ ಪಕ್ಷ ಶೂನ್ಯದಿಂದ 7 ಸ್ಥಾನಗಳಲ್ಲಿ ಗೆಲ್ಲುವುದರ ಮೂಲಕ ಪುರಸಭೆಯಲ್ಲಿ ಕಮಲವನ್ನು ಅರಳಿಸುವಲ್ಲಿ ಭಾಗಶಃ ಯಶಸ್ವಿಯಾಗಿದ್ದರೇ ರಾಜ್ಯದಲ್ಲಿ ಸರ್ಕಾರ ಹೊಂದಿರುವ ಜೆಡಿಎಸ್ ಪಕ್ಷ ಹಳಿಯಾಳದಲ್ಲಿ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಆಡಳಿತಾರೂಢ ಕಾಂಗ್ರೇಸ್ ಪಕ್ಷದೊಂದಿಗೆ ತೀವೃ ಪೈಪೋಟಿ ನೀಡಿದ ಬಿಜೆಪಿ ಪಕ್ಷ ಮುಂದೆ ವಿರೋಧ ಪಕ್ಷವಾಗಿ ಹಳಿಯಾಳ ಪುರಸಭೆಯಲ್ಲಿ ಕಾರ್ಯನಿರ್ವಹಿಸಲಿದೆ.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ನಡುವಿನ ಕಾಳಗ ಎಂದೇ ಹೇಳಲಾಗುತ್ತಿದ್ದ ತೀವೃ ಪ್ರತಿಷ್ಠೇಯ ಕಣವಾಗಿ ಗುರುತಿಸಿಕೊಂಡಿದ್ದ ಹಳಿಯಾಳ ಪುರಸಭೆ ಚುನಾವಣೆಯಲ್ಲಿ ಘೊಟ್ನೇಕರ ಬಾಜಿ ಹೊಡೆದಂತಾಗಿದೆ. ಆದರೇ ಶೂನ್ಯದಲ್ಲಿದ್ದ ಬಿಜೆಪಿಯನ್ನು 7 ಸ್ಥಾನಗಳಿಗೆ ತರುವಲ್ಲಿ ಸುನೀಲ್ ಹೆಗಡೆ ಕೂಡ ಸಫಲವಾಗಿದ್ದು ಗಮನಾರ್ಹವಾಗಿದೆ.
ಅಲ್ಲದೇ ಕೇಲವು ರಾಜಕೀಯ ಪಂಡಿತರ ಲೆಕ್ಕಾಚಾರ ಇಲ್ಲಿ ಬುಡಮೇಲಾಗಿದ್ದು 11 ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ ಎಂಬ ಲೆಕ್ಕಾಚಾರಕ್ಕೆ ಹಿನ್ನಡೆಯಾಗಿ 7 ಸ್ಥಾನಗಳನ್ನು ಗಳಿಸಿದೆ. ಆದರೇ ಬಿಜೆಪಿಯದ್ದು ಇದು ಸಾಧನೆಯಾದರೇ ಈ ಹಿಂದೆ ಒಮ್ಮೆ ಆಡಳಿತದ ಚುಕ್ಕಾಣಿ ಹಿಡಿದಿದ್ದ ಜೆಡಿಎಸ್ ಪಕ್ಷ ಸದ್ಯ ಕೇವಲ ಒಂದೆ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದು. ಮಕಾಡೆ ಮಲಗಿದ್ದ, ಹಿನಾಯ ಸ್ಥಿತಿಯಲ್ಲಿದ್ದ ಜೆಡಿಎಸ್ನ ಮಾನ ಕಾಪಾಡಿದಂತಾಗಿದೆ ಎಂಬುದು ಪಟ್ಟಣಿಗರ ಮಾತು.
ಇನ್ನೂ ಕಾಂಗ್ರೇಸ್ನ ಬಂಡಾಯ, ಪಕ್ಷೇತರ ಅಭ್ಯರ್ಥಿ ಪುರಸಭೆ ಮಾಜಿ ಅಧ್ಯಕ್ಷ ಶಂಕರ ಬೆಳಗಾಂವಕರ ಕಾಂಗ್ರೇಸ್ ಅಭ್ಯರ್ಥಿಯನ್ನು ಹಣಿದು ಗೆಲುವಿನ ನಗೆ ಬಿರಿದ್ದು ಕಾಂಗ್ರೇಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.
Leave a Comment