ಹಳಿಯಾಳ:- ಕಾಂಗ್ರೇಸ್ ಕರೆ ನೀಡಿದ ಭಾರತ ಬಂದ್ಗೆ ಜೆಡಿಎಸ್ ಪಕ್ಷ ಬೆಂಬಲ ಘೊಷಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆಯನ್ನೂ ನಡೆಸಿದೆ. ಆದರೇ ಹಳಿಯಾಳದಲ್ಲಿ ಮಾತ್ರ ಜೆಡಿಎಸ್ ಪಕ್ಷ ಇದೆಯೋ? ಇಲ್ಲವೋ ? ಎನ್ನುವ ಮಾತುಗಳು ಇಂದು ಮತ್ತೇ ಪಟ್ಟಣದಲ್ಲಿ ಕೇಳಿಬಂದವು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಬೆಂಗಳೂರಿನ ಉದ್ಯಮಿ ಕೆ.ಆರ್.ರಮೇಶ್ ಚುನಾವಣೆಯಲ್ಲಿ ಸೋತರು, ಗೆದ್ದರೂ ಹಳಿಯಾಳದಲ್ಲೇ ಇರುವೇ ಪಕ್ಷವನ್ನು ಸಂಘಟಿಸುವೇ, ಜನಪರ, ಸಾಮಾಜಿಕ ಕಾರ್ಯಮಾಡುವೇ ಎಂದು ಪ್ರತಿ ಭಾಷಣಗಳಲ್ಲಿಯೂ ಹೇಳುತ್ತಿದ್ದ ಬೆಂಗಳೂರಿನ ಉದ್ಯಮಿ ಕೆ.ಆರ್.ರಮೇಶ್ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು ಹಿನಾಯ ಸೋಲು ಕಂಡ ಬಳಿಕ ಕ್ಷೇತ್ರದಿಂದ ಕಾಲ್ಕಿತ್ತಿದ್ದು ಈವರೆಗೆ ಅವರು ಮತ್ತೇ ಹಳಿಯಾಳಕ್ಕೆ ಬಾರದೆ ಇರುವುದು ಸಾಕಷ್ಟು ಉಹಾಪೋಹಗಳಿಗ ಎಡೆಮಾಡಿದೆ.
ಅಲ್ಲದೇ ಮೊನ್ನೆಯಷ್ಟೇ ನಡೆದ ಪುರಸಭೆ ಚುನಾವಣೆಯಲ್ಲಿಯೂ ಹಳಿಯಾಳ ಜೆಡಿಎಸ್ ಪಕ್ಷ ಸಾವಿರದ ಸನಿಹಕ್ಕೂ ಮತ ಪಡೆಯದೆ ಹೀನಾಯ ಸೋಲು ಕಂಡಿದೆ. ಅಲ್ಲದೇ ರಾಜ್ಯದಲ್ಲಿ ಸರ್ಕಾರ ಹೊಂದಿರುವ ಜೆಡಿಎಸ್ ಪಕ್ಷ ಕಾಂಗ್ರೇಸ್ ಕರೆ ನೀಡಿದ್ದ ಬಂದ್ಗೆ ಬೆಂಬಲ ಸೂಚಿಸಿದೆ ಆದರೇ ಹಳಿಯಾಳದಲ್ಲಿ ಮಾತ್ರ ಜೆಡಿಎಸ್ ಪಕ್ಷದವರು ಪ್ರತಿಭಟನೆಗೂ ಇಳಿಯದೇ, ಮನವಿಯನ್ನೂ ಸಲ್ಲಿಸದೆ, ಪತ್ರಿಕಾ ಹೇಳಿಕೆಯನ್ನೂ ನೀಡದೆ ಇರುವುದು ಹಳಿಯಾಳದಲ್ಲಿ ಜೆಡಿಎಸ್ ಪಕ್ಷ ಸಂಪೂರ್ಣ ಪ್ರಮಾಣದಲ್ಲಿ ನೆಲೆ ಕಳೆದುಕೊಂಡಿದೆಯೇ ಎನ್ನುವ ಪ್ರಶ್ನೇಗಳು ಸಾರ್ವಜನೀಕ ವಲಯದಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದೆ.
Leave a Comment