• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಯು ಅಷ್ಟೆ ಮುಖ್ಯ ;ಶ್ರೀ ವಿಷ್ಣು ಶಾಸ್ತ್ರೀ

September 18, 2018 by Vishwanath Shetty Leave a Comment

watermarked 18 hnr 1 1

ಹೊನ್ನಾವರ: “ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾದರೆ ದೈಹಿಕವಾಗಿ ಸದೃಡವಾಗಬೇಕಾದರೆ ಕ್ರೀಡೆ ಮೂಲಮಂತ್ರ” ಎಂದು ತಾಲೂಕಾ ಪಂಚಾಯತ್ ಅಧ್ಯಕ್ಷ ಉಲ್ಲಾಸ ನಾಯ್ಕ ಅಭಿಪ್ರಾಯಿಸಿದರು.
ಜಿಲ್ಲಾಪಂಚಾಯತ್ ಉತ್ತರ ಕನ್ನಡ,ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಹಾಗೂ ಹೆರಂಗಡಿ,ನಾಗಂತೂರ,ಉಪ್ಪೋಣಿ, ಮಾಗೋಡ ಕ್ಲಸ್ಟರಿನ ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ವಿದ್ಯಾಪ್ರಸಾರ ಮಂಡಳಿಯ ಶ್ರೀ ವಿಷ್ಣು ಶಾಸ್ತ್ರೀ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಉಪ್ಪೋಣಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಮಟ್ಟದಲ್ಲಿ ಬೆಳಗುವ ಪ್ರತಿಭೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿದೆ. ಅದನ್ನು ಗುರುತಿಸುವ ಕೆಲಸ ಪಾಲಕ-ಪೋಷಕರು,ಶಿಕ್ಷಕ ವರ್ಗ ಹಾಗೂ ಶಾಲಾ ಎಸ್‍ಡಿಎಮ್‍ಸಿಯವರಿಂದ ಆಗಬೇಕು. ಇಂದು ದೇಶದಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಕ್ರಿಡಾಪಟುಗಳು ಇದ್ದಾರೆ. ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಯು ಅಷ್ಟೆ ಮುಖ್ಯ ಎಂದರು.
ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಸಾಧನಾ ಬರ್ಗಿ ಮಾತನಾಡಿ ಉಪ್ಪೋಣಿ ವಲಯದಲ್ಲಿ ಒಂದು ಉತ್ತಮ ಕ್ರಿಡಾಂಗಣದ ಅವಶ್ಯಕತೆ ಇದೆ.ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳಿಗೆ ಕ್ಲಸ್ಟರ್ ಮಟ್ಟದ ಕ್ರಿಡಾಕೂಟ ನಡೆಸಲು ಇತರ ಸ್ಥಳದ ಕ್ರಿಡಾಂಗಣಕ್ಕೆ ಕರೆದೊಯ್ಯಬೇಕಾಗುತ್ತದೆ ಆದ್ದರಿಂದ ಒಂದು ಉತ್ತಮ ಕ್ರಿಡಾಂಗಣ ವ್ಯವಸ್ಥೆ ಆಗಬೇಕೆಂದು ವೇದಿಕೆಯಲ್ಲಿದ್ದ ಸ್ಥಳಿಯ ಜನಪ್ರತಿನಿಧಿಗಳಲ್ಲಿ ವಿನಂತಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಪಂಚಾಯತ್ ಸದಸ್ಯ ಲೊಕೆಶ್ ನಾಯ್ಕ ಮಾತನಾಡಿ ದೇಶದ ಮೂಲೆಮೂಲೆಯಲ್ಲಿ ನಮ್ಮ ಹೆಸರು ಪಸರಿಸುವ ಅವಕಾಶ ಕ್ರಿಡೆಯಲ್ಲಿದೆ.ಕ್ರಿಡಾಪಟುಗಳಿಗೆ ಉನ್ನತ ಗೌರವ,ಪ್ರಶಸ್ತಿಗಳು ಲಭಿಸುತ್ತದೆ. ಇಂದು ನಮ್ಮ ರಾಷ್ಟ್ರ ಕ್ರಿಡೆಯಲ್ಲಿ ಮೂಂಚೂಣಿಯಲ್ಲಿದೆ ಇದು ಹೆಮ್ಮೆಯ ವಿಷಯ ಎಂದರು. ಇಂತಹ ಕ್ರಿಡಾ ಕಾರ್ಯಕ್ರಮಗಳಿಗೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದ ಜಿಲ್ಲಾಪಂಚಾಯತ್,ಗ್ರಾಮ ಪಂಚಾಯತ್ ಜನಪ್ರತಿನಿಧಿಗಳೆ ಆಗಮಿಸದಿರುವುದು ಬೇಸರದ ಸಂಗತಿ ಎಂದರು. ಪ್ರತಿಯೊಬ್ಬ ಕ್ರಿಡಾ ಪಟುಗಳು ಕ್ರಿಡಾಮನೋಭಾವನೆಯಿಂದ ಭಾಗವಹಿಸಿ ಎಂದು ಕ್ರಿಡಾಪಟುಗಳಿಗೆ ಶುಭ ಹಾರೈಸಿದರು.
ಸಭಾ ಕಾರ್ಯಕ್ರದ ಪೂರ್ವದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪತಸಂಚಲನ ನಡೆಯಿತು. ಕ್ರಿಡಾ ಜ್ಯೋತಿ ಬೆಳಗಿಸಿ ಪ್ರತಿಜ್ಞಾವಿಧಿ ನಡೆಸಲಾಯಿತು.
ವೆದಿಕೆಯಲ್ಲಿ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಶಂಕರ ಹರಿಕಂತ್ರ, ಪ್ರಭಾರ ದೈಹಿಕ ಶಿಕ್ಷಣ ಪರಿವಿಕ್ಷಕ ಜಿ.ಎಚ್ ನಾಯ್ಕ,ಸಾಧನಾ ಬರ್ಗಿ, ಪ್ರಕಾಶ್, ರತ್ನಾಕರ್,ಸುಭಾಶ್ ಮತ್ತಿತರರು ಉಪಸ್ಥಿತರಿದ್ದರು.ಶ್ರೀಧರ ಶೆಟ್ಟಿ ಸ್ವಾಗತಿಸಿದರು,ಅಣ್ಣಪ್ಪ ನಾಯ್ಕ ನಿರುಪಿಸಿದರು, ಸುಭಾಷ್ ವಂದಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಉತ್ತರ ಕನ್ನಡ, ಉನ್ನತ ಗೌರವ, ಉಪ್ಪೋಣಿ, ಉಪ್ಪೋಣಿ ವಲಯ ಮಟ್ಟದ ಪ್ರಾಥಮಿಕ ಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ದೈಹಿಕವಾಗಿ ಸದೃಡ, ನಾಗಂತೂರ, ಪ್ರಶಸ್ತಿಗಳು, ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡೆಯು ಅಷ್ಟೆ ಮುಖ್ಯ, ಮಾಗೋಡ ಕ್ಲಸ್ಟರಿನ ಪ್ರಾಥಮಿಕ ಶಾಲೆ, ಮೂಲಮಂತ್ರ, ಶೈಕ್ಷಣಿಕವಾಗಿ ಪ್ರಗತಿ, ಶ್ರೀ ವಿಷ್ಣು ಶಾಸ್ತ್ರೀ, ಸಂಯುಕ್ತ ಆಶ್ರಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಹೆರಂಗಡಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...